Quantcast
Channel: News Digest – Vishwa Samvada Kendra
Viewing all 1085 articles
Browse latest View live

ಟ್ವಿಟರ್ ನಲ್ಲಿ ಬ್ಲಾಕ್, ಅನ್ ಬ್ಲಾಕ್ ಆಟ. ಮೂಲ ಪ್ರಶ್ನೆಗಳಿಗೆ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ನಿರುತ್ತರ

$
0
0

ಪ್ರಶ್ನೆಗಳಿಗೆ ಹೆದರಿ ಆರ್ ಎಸ್ ಎಸ್ ಮಾಧ್ಯಮ ಮುಖ್ಯಸ್ಥರನ್ನು  ಟ್ವಿಟರ್ನಲ್ಲಿ ಬ್ಲಾಕ್ ಮಾಡಿದ ಜಯನಗರ ಶಾಸಕಿ

ಆರೆಸ್ಸೆಸ್ಸಿನ ಪ್ರಚಾರಕರು ಹಾಗೂ ಕರ್ನಾಟಕ ದಕ್ಷಿಣ ಪ್ರಾಂತದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮುಖ್ಯಸ್ಥರು ಆದ ಶ್ರೀ ಪ್ರದೀಪ್ ಮೈಸೂರು ಅವರ ಒಂದು ಪ್ರಶ್ನೆಗೆ ಉತ್ತರಿಸಲಾಗದೆ ಅವರನ್ನು ಟ್ವಿಟರ್ನಲ್ಲಿ ಬ್ಲಾಕ್ ಮಾಡುವ ಮೂಲಕ ಬೆಂಗಳೂರಿನ ಜಯನಗರ ಶಾಸಕಿಯಾದ, ಕಾಂಗ್ರೆಸ್ ಪಕ್ಷದ ಸೌಮ್ಯ ರೆಡ್ಡಿ ಅವರು ಅಸಹಿಷ್ಣುತೆಯನ್ನು ಪ್ರದರ್ಶಿಸಿದ್ದಾರೆ.

ನಡೆದ ಘಟನಾವಳಿಗಳು ಈ ರೀತಿ ಇವೆ. ಕನ್ನಡದ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಆದ ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಒಂದು ಸುಪ್ರಸಿದ್ಧ ಪದ್ಯ ಹಾಗೂ ಕನ್ನಡಿಗರ ಹೃದಯಸ್ಪರ್ಶಿ ಸಾಲುಗಳಾದ “ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ..“  ಇದನ್ನು ಕೇಳಿದ ಕೂಡಲೇ ಕನ್ನಡಿಗರ ಮನಸು ಪುಳಕಿತಗೊಳ್ಳುತ್ತದೆ. ಇದು ಕೇವಲ ಅಕ್ಷರಗಳ ಸಾಲಲ್ಲ ಇದು ಕನ್ನಡಿಗರ ನಾಡಿಮಿಡಿತ.

ನವೆಂಬರ್ ತಿಂಗಳು ಪೂರ್ತಿ  ಈ ಹಾಡನ್ನು ಎಲ್ಲೆಲ್ಲೂ ಮೊಳಗಿಸುತ್ತಾ  ಇಡೀ ಕರ್ನಾಟಕ ರಾಜ್ಯವೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ಜಯನಗರ ಮೂಲದ ‘ಓಂ ಕನ್ನಡ ಮರಿಯಮ್ಮನ ಕರುನಾಡ ಸಂಘ’ ಈ ಪ್ರಸಿದ್ಧ ಸಾಲುಗಳನ್ನು ಅಪಬ್ರಂಶ ಮಾಡಿ “ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಯೇಸು” ಎಂದು ತಮ್ಮ ರಾಜ್ಯೋತ್ಸವದ ಆಹ್ವಾನ ಪತ್ರಿಕೆಯ ಪೋಸ್ಟರ್ನಲ್ಲಿ ಹಾಕಿಕೊಂಡಿದ್ದಾರೆ. ಆ ಪೋಸ್ಟರ್ ನ ಮಧ್ಯಭಾಗದಲ್ಲಿ ಸೌಮ್ಯ ರೆಡ್ಡಿಯವರ ಚಿತ್ರವೂ ಇತ್ತು. ಸೌಮ್ಯ ರೆಡ್ಡಿ ಆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಮಗಳಾದ ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಸೆಕ್ಯುಲರಿಸಂ ಮುಖವಾಡವನ್ನು ತೋರಿಸುವುದಕ್ಕಾಗಿ ನವರಾತ್ರಿ ಸಮಯದಲ್ಲಿ ಗಣೇಶ, ಏಸುಕ್ರಿಸ್ತ ಮತ್ತು ಮಸೀದಿಯ ಭಾವಚಿತ್ರಕ್ಕೆ ಆರತಿಯನ್ನು ಮಾಡುತ್ತಿರುವ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಕವಿತೆಯನ್ನು ವಿರೂಪಗೊಳಿಸಿ ಪೋಸ್ಟರ್‌ನಲ್ಲಿ ಯೇಸುವನ್ನು ತರುವ ಮೂಲಕ ಕವಿಯ ಚಿತ್ರಣವನ್ನು ಮತ್ತು ಅದಕ್ಕೆ ಸಂಬಂಧಿಸಿದ ಭಾವನೆಯನ್ನು ಕೆಡಿಸುವ ಪ್ರಯತ್ನ ಇದಾಗಿದೆ. ಇದನ್ನು ಪ್ರಶ್ನಿಸಿ ಬಹಳಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಸೌಮ್ಯ ರೆಡ್ಡಿ  ರವರ ಮುಖಕ್ಕೆ  ಛೀಮಾರಿ ಹಾಕಿ ಪ್ರಶ್ನಿಸಿದಾಗ, ಸ್ಪಷ್ಟೀಕರಣ ನೀಡಲು ಪ್ರಾರಂಭಿಸಿದರು.  ಆರ್‌ಎಸ್‌ಎಸ್ ನ ಪೂರ್ಣಾವಧಿ ಕಾರ್ಯಕರ್ತರಾದ (ಪ್ರಚಾರಕ್) ಮತ್ತು  ಆರ್‌ಎಸ್‌ಎಸ್‌ನಲ್ಲಿ  ಕರ್ನಾಟಕ ದಕ್ಷಿಣ ಪ್ರಾಂತದ  ಮಾಧ್ಯಮದ ಜವಾಬ್ದಾರಿಯನ್ನು ಹೊಂದಿರುವ ಶ್ರೀ ಪ್ರದೀಪ್ ಮೈಸೂರು ಸಹ ಸೌಮ್ಯ ಅವರನ್ನು ಟ್ವಿಟರ್‌ನಲ್ಲಿ ಪ್ರಶ್ನಿಸಿದರು. “ನಮಸ್ಕಾರ ಬೆಳಗ್ಗಿನಿಂದ ಜನ ನಿಮ್ಮನ್ನು ಕೇಳುತ್ತಿರುವುದೇ ಬೇರೆಯ ಪ್ರಶ್ನೆ. ನೀವದಕ್ಕೆ ಉತ್ತರಿಸಿಲ್ಲ. ಹಸುವಿನ ಬಗ್ಗೆ ಪ್ರಬಂಧ ಬರೆಯಲು ಕೇಳಿದರೆ ನೀವು ಹಸುವನ್ನು ಕಟ್ಟಿದ ಕಂಬದ ಬಗ್ಗೆ ಬರೆದಿದ್ದೀರಿ.“ ಎಂದು ಪ್ರದೀಪ್ ಮೈಸೂರ್ ಅವರು ಬರೆದಿದ್ದರು. ಆದರೆ ಸೌಮ್ಯ ರೆಡ್ಡಿ ಅವರು ಕೊಟ್ಟ ಉತ್ತರವೇ ಬೇರೆ. ಅದು ಅಸಹಿಷ್ಣುತೆಯ ಉತ್ತರ. ಪ್ರದೀಪ್ ಮೈಸೂರು ಅವರನ್ನು ಬ್ಲಾಕ್ ಮಾಡಿಬಿಟ್ಟರು. 

ಜನಪ್ರತಿನಿಧಿಯ ಸ್ಥಾನದಲ್ಲಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಯಮ ತೋರಿಸುತ್ತಾ,  ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಾದದ್ದು ಕರ್ತವ್ಯವೇ ಹೊರತು ಪಲಾಯನ ಮಾಡುವುದು ಸ್ವಾಗತಾರ್ಹವಲ್ಲ.  ಪ್ರಶ್ನೆಗಳನ್ನು ಕೇಳುವವರನ್ನು ಬ್ಲಾಕ್ ಮಾಡುವುದು ಬಾಯಿ ಮುಚ್ಚಿಸುವುದು ಕಾಂಗ್ರೆಸ್ಸಿಗೆ ಹೊಸದೇನಲ್ಲ.  ತಮ್ಮನ್ನು ಪ್ರಶ್ನಿಸುವ ಧ್ವನಿಗಳನ್ನು ನಿಗ್ರಹಿಸುವಲ್ಲಿ ಕಾಂಗ್ರೆಸ್ ಕುಖ್ಯಾತಿ ಪಡೆದಿದೆ (1975 ರ ತುರ್ತು ಪರಿಸ್ಥಿತಿ ಮಾತ್ರವಲ್ಲದೆ ಮೊದಲಿನಿಂದಲೂ). ಸಿದ್ದರಾಮಯ್ಯ ಆಳ್ವಿಕೆಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಎಚ್ ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವು ಈ ಧ್ವನಿಗಳನ್ನು ತಡೆಹಿಡಿದಿದೆ. 


ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಬ್ಲಾಕ್ ಮಾಡುವುದು, ಕಠಿಣ ಪ್ರಶ್ನೆಗಳನ್ನು ಎದುರಿಸುವ ಧೈರ್ಯವನ್ನು ಹೊಂದದೆ ಚರ್ಚೆಯಿಂದ ಪಲಾಯನ ಮಾಡುವುದು,  ಇದು ಅವರ ಆಲೋಚನಾ ಪ್ರಕ್ರಿಯೆಗೆ  ಹಾಗೂ ಅಭಿಪ್ರಾಯಗಳನ್ನು ನಿಯಂತ್ರಿಸುವ ಸ್ವಭಾವಕ್ಕೆ ಹಿಡಿದ ಕನ್ನಡಿಯಾಗಿದೆ.

ಪ್ರದೀಪ್ ಮೈಸೂರು ಪ್ರೊಫೈಲ್ನಲ್ಲಿ ಆರೆಸ್ಸೆಸ್ ಅಂತ ಇದ್ದದ್ದೆ ಅಸಹಿಷ್ಣುತೆಯ ಕಾರಣವಾಯಿತೇ? ಬ್ಲಾಕ್ ಮಾಡಿದ ನಂತರ ಪ್ರದೀಪ್ ಈ ರೀತಿ ಟ್ವೀಟ್ ಮಾಡಿದ್ದಾರೆ
“ ಅಭಿಪ್ರಾಯಗಳನ್ನು ಆಲಿಸುವುದು, ಪ್ರಶ್ನೆಗಳು ಎದುರಾದಾಗ ಪಲಾಯನ ಮಾಡದೆ, ಬ್ಲಾಕ್ ಮಾಡದೆ ಉತ್ತರಿಸುವುದು, @INCKarnataka @Sowmyareddyr ಯ ಸಾಮರ್ಥ್ಯಕ್ಕೆ ಮೀರಿದ್ದು ಎಂಬುದು ಸಾಬೀತಾಗಿದೆ. ಕನ್ನಡ ವಿರೋಧಿ ಟಿಪ್ಪು ಜಯಂತಿಯನ್ನು ಕನ್ನಡಿಗರ ಮೇಲೆ ಹೇರಿದ @siddaramaiah ಅವರ ಪಕ್ಷದಿಂದ ಇದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸಲಾಗದು.”
ಪ್ರದೀಪ್ ಅವರನ್ನು ಅನ್-ಬ್ಲಾಕ್ ಮಾಡಬೇಕೆಂಬುದು ಬೇಡಿಕೆಯಲ್ಲ, ಆದರೆ ಶಾಸಕಿ ಸೌಮ್ಯಾ ರೆಡ್ಡಿ ಮತ್ತು ಅವರಂತಹ ಅನೇಕರು ಬೌದ್ಧಿಕ ಪ್ರಭುತ್ವವನ್ನು ಪಡೆದುಕೊಳ್ಳಬೇಕು ಮತ್ತು ಚರ್ಚೆಗಳಲ್ಲಿ ಹೆಚ್ಚು ಮುಕ್ತವಾಗಿ ಭಾಗವಹಿಸಬೇಕು. 
ವಿಶ್ವ ಸಂವಾದ ಕೇಂದ್ರ  ಈ ಬೆಳವಣಿಗೆಗಳನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಹಠಾತ್ತನೆ ಪ್ರದೀಪ್ ಮೈಸೂರು ಅವರನ್ನು ಟ್ವಿಟ್ಟರ್ ನಲ್ಲಿ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು  ಕೆಲವೇ ಗಂಟೆಗಳ ಮೊದಲು ಅನ್-ಬ್ಲಾಕ್ ಮಾಡಿದ್ದಾರೆ. 
ವಿ ಎಸ್ ಕೆ  ತನ್ನ ವರದಿಯಲ್ಲಿ ಪ್ರದೀಪ್ ಮೈಸೂರು ಅವರನ್ನು  ಅನ್-ಬ್ಲಾಕ್  ಮಾಡಬೇಕೆಂಬ ಬೇಡಿಕೆಯನ್ನು ಇಡಲಿಲ್ಲ, ಬದಲಿಗೆ ಜನಪ್ರತಿನಿಧಿಗಳು ಚರ್ಚೆಗೆ ಮುಕ್ತರಾಗಬೇಕೆಂದು ಮಾತ್ರ ಒತ್ತಾಯಿಸಿತ್ತು. ಶಾಸಕಿ ಸೌಮ್ಯ ರೆಡ್ಡಿ ಅವರು ಪ್ರದೀಪ ರನ್ನು ಬ್ಲಾಕ್ ಮಾಡಿದ ನಡೆಯನ್ನು ಅನೇಕ ಜನ ಪ್ರಶ್ನಿಸಿದ ಕಾರಣ, ಅದಕ್ಕೆ ಉತ್ತರವೆಂಬಂತೆ ಪ್ರದೀಪ್ ರನ್ನು ಅನ್-ಬ್ಲಾಕ್ ಮಾಡಲಾಗಿದೆ.  ಅನ್ ಬ್ಲಾಕ್ ನಂತರ ವಿ ಎಸ್ ಕೆ ತಂಡ ಪ್ರದೀಪ್ ರನ್ನು ಮಾತನಾಡಿಸಿದಾಗ, ಈ ಕೆಳಕಂಡ ಪ್ರಶ್ನೆಗಳಿಗೆ ಸೌಮ್ಯ ರೆಡ್ಡಿ ಇನ್ನೂ ಉತ್ತರ ಕೊಟ್ಟಿಲ್ಲ ಎಂದು ಹೇಳಿದರು. 
1.         ಕನ್ನಡ ರಾಜ್ಯೋತ್ಸವವು ಸಾಂಸ್ಕೃತಿಕ ಕಾರ್ಯಕ್ರಮವಾಗಿರುವುದರಿಂದ ತಾಯಿ ಭುವನೇಶ್ವರಿ ಫೋಟೋ ಇರಬೇಕಿತ್ತು ಆದರೆ ಕ್ರಿಶ್ಚಿಯನ್ ಧರ್ಮ, ಮೇರಿ ಮತ್ತು ಶಿಶು ಜೀಸಸ್ ಇರಿಸಿ, ಭುವನೇಶ್ವರಿಯನ್ನು  ಕಡೆಗಣಿಸಲಾಗಿದೆ.
2.        ಕನ್ನಡ ರಾಜ್ಯೋತ್ಸವವನ್ನು ಇದುವರೆಗೆ ಧಾರ್ಮಿಕ ಕಾರ್ಯಕ್ರಮವಾಗಿ ಆಚರಿಸಲಾಗಿಲ್ಲ ಆದರೆ ಕ್ರಿಶ್ಚಿಯನ್ ಮತಾಂತರಗಳನ್ನು ತೀವ್ರವಾಗಿ ಪ್ರೋತ್ಸಾಹಿಸುವ ಕಡೆಗೆ ಸಂಘಟನೆಯ ಪ್ರಯತ್ನ ಸ್ಪಷ್ಟವಾಗಿದೆ.
3.        ರಾವ್ ಬಹದ್ದೂರ್ ದೇಶಪಾಂಡೆ ಕೊಟ್ಟ  “ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ “ ಘೋಷವಾಕ್ಯವನ್ನು  ವಿಕೃತಗೊಳಿಸಿ ಜೈ ಏಸು ಜೈ ಕ್ರಿಸ್ತ ಸೇರಿಸಿರುವುದು ಎಷ್ಟು ಸರಿ ? 
4.       ಕೊನೆಯದಾಗಿ “ಬಾರಿಸು ಕನ್ನಡ ಡಿಂಡಿಮವಾ ಓ ಕರ್ನಾಟಕ ಹೃದಯ ಶಿವ” ಅನ್ನು “ಹೃದಯ ಯೇಸು” ಎಂದು ವಿರೂಪಗೊಳಿಸಲಾಗಿದೆ.  ಮತಾಂತರ ಮತ್ತು ಕವಿ ಡಾ. ಕೆ ವಿ ಪುಟ್ಟಪ್ಪ ಅವರನ್ನು ಅಗೌರವಗೊಳಿಸುವ ಪ್ರಯತ್ನವನ್ನೂ ಸೂಚಿಸುತ್ತದೆ. ಇದಕ್ಕೆ ಸೌಮ್ಯ ರೆಡ್ಡಿ ಅವರ ಒಪ್ಪಿಗೆ ಇತ್ತೇ ?
5.        ಕಾರ್ಯಕ್ರಮದ ಆಯೋಜಕರನ್ನು ಪೋಸ್ಟರ್ ತಿದ್ದುಪಡಿ ಮಾಡಲು ಸೌಮ್ಯ ರೆಡ್ಡಿ ಹೇಳಿದ್ದರೆ? ಪರಿಷ್ಕೃತ ಪೋಸ್ಟರ್ ಹೊರಗೆ ಏಕೆ ಬಂದಿಲ್ಲ? ಸೌಮ್ಯಾ ರೆಡ್ಡಿ ಈ ಎಲ್ಲ ಅಗ್ಗದ ತಂತ್ರಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ?
ಕ್ರಿಶ್ಚಿಯನ್ ಧರ್ಮವನ್ನು ಜನಪ್ರಿಯಗೊಳಿಸಲು ಮಿಷನರಿಗಳ ಒಗ್ಗಟ್ಟಿನ ಪ್ರಯತ್ನ ನಡೆದಿದೆ. ಕಾಲಕಾಲಕ್ಕೆ ವಿ ಎಸ್ ಕೆ ಮತಾಂತರದ ಕುತಂತ್ರಗಳನ್ನು ಬಹಿರಂಗಪಡಿಸುತ್ತ ಬಂದಿದೆ. ಕ್ರಿಸ್ಮಸ್ ಸಮಯಕ್ಕೆ ಹೆಚ್ಚಾಗುತ್ತಿದ್ದ ಮಿಷನರಿಗಳ ಚಟುವಟಿಕೆಗಳು ಈಗ ವರ್ಷಪೂರ್ತಿ ನಿರರ್ಗಳವಾಗಿ ನಡೆಯುತ್ತಿವೆ. ಈ ರೀತಿಯ ಸಾಂಸ್ಕೃತಿಕ ಆಕ್ರಮಣಗಳು ಜನರನ್ನು ಸೆಳೆಯಲು ಮತ್ತು ಅಂತಿಮವಾಗಿ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಅಗ್ಗದ ತಂತ್ರಗಳಾಗಿವೆ.

ಪ್ರದೀಪ್ ಗಮನಿಸಿದಂತೆ ಸೌಮ್ಯಾ ರೆಡ್ಡಿ ಅವರು “ಕ್ರಿಶ್ಚಿಯನ್” ರಾಜ್ಯೋತ್ಸವಕ್ಕೆ ಹಾಜರಾಗಿದ್ದಾರೆಯೇ ಮತ್ತು ಅವರು ಕೋರಿರುವ ಪರಿಷ್ಕೃತ ಪೋಸ್ಟರ್ ಇನ್ನೂ ಸಾರ್ವಜನಿಕವಾಗಿ ಲಭ್ಯವಿಲ್ಲ ಮತ್ತು ಅಂತಹ ನೀತಿಬಾಹಿರ ಅಭ್ಯಾಸಗಳನ್ನು ಸೌಮ್ಯಾ ರೆಡ್ಡಿ ಅವರು ಬೆಂಬಲಿಸುತ್ತಾರೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಬೇಕು.

The post ಟ್ವಿಟರ್ ನಲ್ಲಿ ಬ್ಲಾಕ್, ಅನ್ ಬ್ಲಾಕ್ ಆಟ. ಮೂಲ ಪ್ರಶ್ನೆಗಳಿಗೆ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ನಿರುತ್ತರ first appeared on Vishwa Samvada Kendra.


ನಿವಾರ್ ಭೀಕರ ಚಂಡಮಾರುತದಲ್ಲಿ ಆರೆಸ್ಸೆಸ್ ಸೇವಾಕಾರ್ಯ

$
0
0

ನಿವಾರ್ ಚಂಡಮಾರುತದಿಂದ ಉಂಟಾದ ಗಾಳಿ ಮತ್ತು ಭಾರೀ ಮಳೆಯಿಂದಾಗಿ ಚೆನ್ನೈ, ಕಾಂಚೀಪುರಂ, ಚಂಗಲಪಟ್ಟು, ಕಡಲೂರು, ಪನ್ರುಟ್ಟಿ, ಪಳವೆರ್ಕಾಡು, ಪೆರಂಬೂರ್, ಮಧುರಂತಕಂ, ಅರಕೊನ್ನಂ, ಪುದುಚೇರಿ ಸೇರಿದಂತೆ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಭಾರಿ ಪ್ರವಾಹ ಉಂಟಾಗಿದೆ.

ತಗ್ಗು ಪ್ರದೇಶಗಳಲ್ಲಿದ್ದ ಸಾವಿರಾರು ಜನರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಮತ್ತು ವಿವಿಧ ಸರ್ಕಾರಿ ನಿರ್ಮಿತ ವಸತಿಗಳಲ್ಲಿ ಆಶ್ರಯಪಡೆದಿದ್ದಾರೆ.

ಸೇವಾಭಾರತಿ ತಮಿಳುನಾಡು ಸರ್ಕಾರಿ ಆಡಳಿತದ ಸಮನ್ವಯದೊಂದಿಗೆ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಆಹಾರ, ನೀರಿನ ಬಾಟಲಿಗಳು, ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಲು, ಗಾಳಿ, ಮಳೆಗೆ ರಸ್ತೆಯಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸುವ ಕೆಲಸದಲ್ಲಿ ಸೇವಾ ಭಾರತಿ ಕಾರ್ಯಕರ್ತರು ತೊಡಗಿದ್ದಾರೆ. ಕೋರಟ್ಟುರಿನಲ್ಲಿ ಅಗ್ನಿ ಶಾಮಕ ದಳದವರೊಂದಿಗೆ ಸಂಘದ ಕಾರ್ಯಕರ್ತರು ಸೇವಾ ಕಾರ್ಯ ನಡೆಸುತ್ತಿದ್ದಾರೆ.

ನಿವಾರ್ ಚಂಡಮಾರುತವು ಪುದುಚೇರಿ ಬಳಿ 25 ರಂದು ರಾತ್ರಿ 11.30 ರ ಸುಮಾರಿಗೆ ದಡ ದಾಟಿತು. ಆರ್‌ಎಸ್‌ಎಸ್ ಸೇವಾಭಾರತಿ ಸ್ವಯಂಸೇವಕರು ತಕ್ಷಣವೇ ಸಂತ್ರಸ್ತರಿಗೆ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಚಂಡಮಾರುತದ ಅವಧಿಯಲ್ಲಿ, ಚೆನ್ನೈ ಬಳಿಯ ಚೆಂಬರಂಬಕ್ಕಂ ಕೆರೆಯನ್ನು ತೆರೆಯಲಾಯಿತು, ತಗ್ಗು ಪ್ರದೇಶಗಳಲ್ಲಿ ನೀರು-ನುಗ್ಗಿತು. ತಾಂಬರಂ ಪ್ರದೇಶದ ಕ್ರೊಂಪೇಟ್‌ನಲ್ಲಿನ ಸ್ವಯಂ ಸೇವಕರು ಪೀಡಿತ ಜನರಿಗೆ ತಕ್ಷಣ ಆಹಾರವನ್ನು ತಯಾರಿಸಲು ತಮ್ಮ ಸೇವೆಯನ್ನು ಪ್ರಾರಂಭಿಸಿದರು ಮತ್ತು ಸುಮಾರು 1000 ಜನರಿಗೆ ಸೇವೆ ಸಲ್ಲಿಸಿದರು.

ಕಡಲೂರಿನಲ್ಲಿ, ಸೇವಾಭಾರತಿ ಸ್ವಯಂಸೇವಕರು ನಿವಾರ್ ಚಂಡಮಾರುತದಿಂದ ಪೀಡಿತ ಸುಮಾರು 2000 ಜನರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದರು.

ಕಾಂಚೀಪುರಂನ ಇರುಲಾರ್ ಸಮುದಾಯದ 300 ಜನರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು. ಸೇವಾಭಾರತಿ ಸ್ವಯಂಸೇವಕರು ಚಂಡಮಾರುತದಿಂದ ಉಂಟಾದ ಹಾನಿಯಿಂದ ಜನರನ್ನು ರಕ್ಷಿಸಲು ನಿರತರಾಗಿದ್ದಾರೆ.

ಅರಕೋಣಂ ಕಂದಾದ ರಾಣಿಪೇಟೆಯಲ್ಲಿ ಸುಮಾರು 200 ಜನರನ್ನು ಮೂರು ಶಿಬಿರ ಆಶ್ರಯಗಳಲ್ಲಿ ಸುರಕ್ಷಿತವಾಗಿ ಇರಿಸಲಾಗಿದ್ದು, ಅವರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ.

ಚೆನ್ನೈನ ತಿರುವಳ್ಳಿಕೆಣಿಯಲ್ಲಿ, ಸ್ವಯಂಸೇವಕರು ರಸ್ತೆಗಳಲ್ಲಿ ಬಿದ್ದ ಮರಗಳನ್ನು ಕತ್ತರಿಸಿ ತೆಗೆಯುವಲ್ಲಿ ತಮ್ಮನ್ನು ತೊಡಗಿಸಿಕೊಂಡರು.

The post ನಿವಾರ್ ಭೀಕರ ಚಂಡಮಾರುತದಲ್ಲಿ ಆರೆಸ್ಸೆಸ್ ಸೇವಾಕಾರ್ಯ first appeared on Vishwa Samvada Kendra.

ನಿಮಗೆ ಇಷ್ಟವಾದ ಕನ್ನಡ ಸಾಹಿತ್ಯ ಯಾವುದು? ಪ್ರಶ್ನೆಯ ಸುತ್ತ ವಿಶ್ಲೇಷಣೆ. #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

$
0
0

ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ನಿಮಗೆ ಇಷ್ಟವಾದ ಕನ್ನಡ ಸಾಹಿತ್ಯ ಯಾವುದು?” ಎಂಬ ಪ್ರಶ್ನೆಯ ಸುತ್ತ ಡಾ. ಎಂ ಕೆ ಶ್ರೀಧರನ್ ಅವರ ವಿಶ್ಲೇಷಣೆ.

ಮಲೆಗಳಲ್ಲಿ ಮದುಮಗಳು, ವಂಶ ವೃಕ್ಷ ಮತ್ತು ದುರ್ಗಾಸ್ತಮಾನ ಕಾದಂಬರಿಗಳು ಮೊದಲ ಮೂರು ಸ್ಥಾನ ಗಳಿಸಿವೆ. ಕುವೆಂಪು ಮತ್ತು ಎಸ್.ಎಲ್. ಬೈರಪ್ಪ ಅವರ ಕೃತಿಗಳು ಶೇಕಡಾ 17ಮತಗಳನ್ನು ಗಳಿಸಿ ಮೊದಲ ಸ್ಥಾನದಲ್ಲೇ ಇವೆ. ತ.ರಾ.ಸು. ಅವರ ದುರ್ಗಾಸ್ತಮಾನ ಶೇಕಡಾ 15 ಮತಗಳನ್ನು ಗಳಿಸಿದೆ. ಈ ಮೂರು ಕಾದಂಬರಿಗಳು ಅರ್ಧದಷ್ಟು ಮತಗಳನ್ನು ಗಳಿಸಿವೆ. ಸಮೀಕ್ಷೆಯಲ್ಲಿ ಇನ್ನೂ ಏಳು ಕಾದಂಬರಿಗಳಿದ್ದವು. ಆ ಕಾದಂಬರಿಗಳು – ಮಹಾಕ್ಷತ್ರಿಯ, ಚೋಮನ ದುಡಿ, ಕರ್ವಾಲೋ, ತುಳಸೀದಳ, ಅಜೇಯ, ಸಂಸ್ಕಾರ, ಮತ್ತು ಚಿಕವೀರ ರಾಜೇಂದ್ರ ಕೃತಿಗಳು – ಉಳಿದ ಅರ್ಧ ಮತಗಳನ್ನು ಗಳಿಸಿವೆ.

ಎಸ್.ಎಲ್. ಬೈರಪ್ಪ ಮತ್ತು ತ.ರಾ.ಸು ಅವರುಗಳು ತಮ್ಮ ಅಭಿವ್ಯಕ್ತಿಯನ್ನು ಕಾದಂಬರಿ ಪ್ರಕಾರ ಒಂದರ ಮೂಲಕವೇ ಮಾಡುವ ಲೇಖಕರು. ಅಷ್ಟೇ ಅಲ್ಲ, ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಮತ್ತು ನಿಯಮಿತವಾಗಿ ಕಾದಂಬರಿಗಳನ್ನು ರಚಿಸಿದವರು. ಬಹು ಪ್ರಸಿದ್ಧರು. ವಂಶ ವೃಕ್ಷ ಮತ್ತು ದುರ್ಗಾಸ್ತಮಾನ ಕಾದಂಬರಿಗಳು ಈ ಲೇಖಕರ ಮುಖ್ಯ ಕೃತಿಗಳಲ್ಲಿ ಒಂದು. ಈ ದೃಷ್ಟಿಯಿಂದ ಈ ಎರಡೂ ಕೃತಿಗಳು ಮೊದಲ ಮೂರುಸ್ಥಾನದಲ್ಲಿ ಇರುವುದು ಸಹಜವಾಗಿ ಕಾಣುತ್ತದೆ. ‘ಮಲೆಗಳಲ್ಲಿ ಮದುಮಗಳು’ ಕುವೆಂಪು ಅವರು ಬರೆದಿರುವ ಕೇವಲ ಎರಡು ಕಾದಂಬರಿಗಳಲ್ಲಿ ಒಂದು. ‘ಕಾನೂರು ಹೆಗ್ಗಡತಿ’ಯ ನಂತರದ ಪ್ರಾಮುಖ್ಯತೆ ಇದರದ್ದು ಎಂಬುದು ವಿಮರ್ಶಕರ ನಿಲುವು. ಅಧಿಕೃತ ಅಭಿಪ್ರಾಯ. ಆದರೆ, ಕಥಾ ಹಂದರ, ವಸ್ತು ಮತ್ತು ಶೈಲಿಗಳಿಂದ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ಹೆಚ್ಚು ಆಕರ್ಷಕ ಎನ್ನುವ ಅಭಿಪ್ರಾಯವನ್ನು ಸಮೀಕ್ಷೆಯು ಸಮರ್ಥಿಸಿದೆ. ಸೃಜನಶೀಲತೆಯನ್ನು ಸಂಖ್ಯೆಯಲ್ಲಿ ಅಳೆಯಲಾಗುವುದಿಲ್ಲ ಎಂಬುದನ್ನೂ ಮತ್ತು ಸಾಹಿತಿಯ ಅನುಭವ, ಕೃತಿಯ ಗುಣಮಟ್ಟವನ್ನು ಸೂಚಿಸುತ್ತದೆ ಎಂಬುದನ್ನೂ ತಿಳಿಸುತ್ತಿದೆ.

ಸಮೀಕ್ಷೆಯಲ್ಲಿದ್ದ ಇತರ ಕೃತಿಗಳ ಮಹತ್ವ ಎಲ್ಲರಿಗೂ ತಿಳಿದಿರುವುದೇ. ಆಧ್ಯಾತ್ಮವನ್ನು ಅಧಿಕೃತವಾಗಿ ಕಥಾವಸ್ತುವಿನಲ್ಲಿ ಸೇರಿಸುವ ಮಹಾಕ್ಷತ್ರಿಯ, ಐತಿಹಾಸಿಕ ವ್ಯಕ್ತಿತ್ವಗಳ ಸುತ್ತಾ ಹೆಣೆದ ಅಜೇಯ ಮತ್ತು ಚಿಕವೀರ ರಾಜೇಂದ್ರ, ಕಾರಂತರ ನುರಿತ ಬರಹದ ಚೋಮನ ದುಡಿ, ತೇಜಸ್ವಿ ಅವರ ಬಿ.ಜಿ.ಎಲ್. ಸ್ವಾಮಿ ಶೈಲಿಯ ಕರ್ವಾಲೋ, ಅನುವಾದಿತ ಥ್ರಿಲ್ಲರ್ ತುಳಸಿದಳ ಮತ್ತು ನವ್ಯದ ದಿಗ್ಗಜ ಅನಂತ ಮೂರ್ತಿಯವರ ಪ್ರಸಿದ್ದ ಕೃತಿಗಳು ಸಮೀಕ್ಷೆಯಲ್ಲಿ ಸಹಜವಾಗಿ ಸೇರಿಕೊಂಡಿದೆ. ಅವುಗಳ ಜನಪ್ರಿಯತೆಯನ್ನು ಹೇಳುತ್ತಿದೆ. ಆದರೆ, ಈ ಕೃತಿಗಳು ವಾಸ್ತವತೆಯನ್ನು ನಿಭಾಯಿಸುವ, ಶೈಲಿಯನ್ನು ಅನ್ವೇಷಿಸುವ, ತತ್ವಗಳ ಅಥವಾ ನವ್ಯದ ಅಮೂರ್ತತೆಯನ್ನು ಕೃತಿಯಲ್ಲಿ ಹಿಡಿದಿಡುವ ಪ್ರಯತ್ನದಲ್ಲಿ ಜನರ ಮೆಚ್ಚುಗೆಯನ್ನು ಮೊದಲ ಮೂರು ಕೃತಿಗಳಿಗೆಗೆ ಬಿಟ್ಟು ಕೊಟ್ಟಿವೆ.

ಗಟ್ಟಿ ಕಥಾನಕಗಳನ್ನು ಹೊಂದಿರುವ, ಸಾಂಪ್ರದಾಯಿಕ ಶೈಲಿ ಎನ್ನಬಹುದಾದ ಕಾದಂಬರಿಗಳೇ ಮೊದಲ ಮೂರು ಸ್ಥಾನಗಳಲ್ಲಿ ಇರುವುದು ಸಾಹಿತ್ಯ ಕ್ಷೇತ್ರದ ಕೆಲವು ಆಸಕ್ತಿಕರ ಚರ್ಚೆಗಳತ್ತ ನಮ್ಮ ಗಮನವನ್ನು ಸೆಳೆಯುತ್ತದೆ. ಸಮೀಕ್ಷೆಯಲ್ಲಿ ಪರಿಗಣಿತವಾದ ಎಲ್ಲಾ ಹತ್ತೂ ಕಾದಂಬರಿಗಳೂ ಸಹ ಹೆಚ್ಚು ಕಡಿಮೆ ಇದೇ ರೀತಿಯಲ್ಲೇ ಇವೆ. ವಿವಿಧ ಕಾಲಘಟ್ಟದಲ್ಲಿ ಬಂದ ಹಲವು ಕಾದಂಬರಿ ಶೈಲಿಗಳು – ನವ್ಯ, ಬಂಡಾಯ, ದಲಿತ ಮತ್ತು ಶೂದ್ರ – ಕಾಲದ ಪರೀಕ್ಷೆಯಲ್ಲಿ ನಪಾಸಾಗುತ್ತಿವೆಯೋ? ಜನರ ಮನಸ್ಸನ್ನು ಗೆಲ್ಲಲು ಸೋತಿವೆಯೇ? ಸೈದ್ಧಾಂತಿಕ ಹೊರೆಯನ್ನು ಅನಿವಾರ್ಯವಾಗಿ ಹೊರುವ ಆಧುನಿಕ ಕಾದಂಬರಿ ಶೈಲಿಗಳು ಕಥಾ ಹಂದರಕ್ಕೆ ನ್ಯಾಯ ಒದಗಿಸಲು ಶಕ್ತವಾಗುತ್ತವೆಯೇ? ಸಮೀಕ್ಷೆಯು ‘ಇಲ್ಲ’ ಎಂಬ ಉತ್ತರವನ್ನು ನೀಡುತ್ತಿದೆ. ನೇರವಾಗಿ ಜನರನ್ನು ತಲುಪುತ್ತಿದ್ದ ಎಂ.ಕೆ.ಇಂದಿರಾ, ತ್ರಿವೇಣಿ, ಅನುಪಮಾ ನಿರಂಜನ, ಆ.ನ.ಕೃ ಅವರ ಕೃತಿಗಳು ಸಮೀಕ್ಷೆಯಲ್ಲಿ ಇಲ್ಲ – ಸಮೀಕ್ಷೆಗೆ ಸೇರಲು ಇದ್ದ ಮಿತಿಯೊಳಗೆ ಬರಲು ಅವುಗಳಿಗೆ ಆಗಿಲ್ಲ. ಈ ಅಂಶವು ವಿಮರ್ಶಕರ ಮತ್ತು ಜನ ಸಾಮನ್ಯರ ನಿಲುವುಗಳಲ್ಲಿ ಹಲವು ಸಾಮ್ಯತೆಗಳು ಇವೆ ಎಂದು ತೋರುತ್ತಿದೆ. ಆದರೆ ತರಾಸು, ಕುವೆಂಪು ಮತ್ತು ಬೈರಪ್ಪನವರನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಿದ ಸಮೀಕ್ಷೆಯ ಬಗ್ಗೆ ವಿಮರ್ಶಾ ಲೋಕದಲ್ಲಿ ಕೆಲವಾದರೂ ಆಕ್ಷೇಪಗಳು ಇರಬಹುದು. ಈ ಸಮೀಕ್ಷೆಯು ವಿಮರ್ಶೆಯ ಜಗತ್ತಿನ ಚೌಕಟ್ಟನ್ನು ಈ ದೃಷ್ಟಿಯಲ್ಲಿ ಮೀರಿದೆ.

ಎಲ್ಲಾ ಹತ್ತೂ ಕಾದಂಬರಿಗಳೂ ದಶಕಗಳಷ್ಟು ಹಳತು. ಹಾಗಾದರೆ, ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆಯೇ? ಹೊಸ ಕೃತಿಗಳು, ಲೇಖಕರು, ಓದುಗರು ಬರುತ್ತಿಲ್ಲವೇ? ವಿಮರ್ಶಕರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲವೇ? ಹೊಸ ಮಾಧ್ಯಮಗಳ ಉಗಮದೊಂದಿಗೆ ಕನ್ನಡ ಕಾದಂಬರಿ ಲೋಕದ ಪ್ರಭಾವ ಕ್ಷೀಣಿಸುತ್ತಿರುವುದರ ಪರಿಣಾಮವೇ? ಅಥವಾ ಗುಣಮಟ್ಟದ ದೃಷ್ಟಿಯಿಂದ ಇವು ಸಾರ್ವಕಾಲಿಕ ಕೃತಿಗಳೇ ಆದ್ದರಿಂದ ಈ ಪ್ರಶ್ನೆಗಳು ಅನಗತ್ಯವೇ?

ಏನೇ ಇರಲಿ, ಈ ಸಮೀಕ್ಷೆ ಸಾಹಿತ್ಯ ಪ್ರಶ್ನೆಯತ್ತ ಜನರ ಮನಸ್ಸನ್ನು ಯಶಸ್ವಿಯಾಗಿ ಸೆಳೆಯುವುದರಲ್ಲಿ ಸಫಲವಾಗಿರುವುದು ನಿಜ. ಒಳ್ಳೆಯ ಬೆಳವಣಿಗೆ. ನವೆಂಬರ್ ನಲ್ಲಿ ಇಂತಹ ಪ್ರಯತ್ನಗಳು ಮುಂದುವರೆದರೆ, ಕೃತಿಗಳ ಬೆಲೆಯ ಬಗ್ಗೆ ನಿರ್ದಿಷ್ಟ ಅಭಿಪ್ರಾಯಗಳನ್ನು ರೂಪಿಸುವುದು ಸಾಧ್ಯವಾಗುತ್ತದೆ. ವಿಮರ್ಶೆ ಮತ್ತು ಜನಾಭಿಪ್ರಾಯಗಳ ಮಧ್ಯದ ಅಂತರ ಕಡಿಮೆ ಆಗಲೂ ಬಹುದು.

ಡಾ. ಎಂ ಕೆ ಶ್ರೀಧರನ್, ವಿ ಎಸ್ ಕೆ ತಂಡ

The post ನಿಮಗೆ ಇಷ್ಟವಾದ ಕನ್ನಡ ಸಾಹಿತ್ಯ ಯಾವುದು? ಪ್ರಶ್ನೆಯ ಸುತ್ತ ವಿಶ್ಲೇಷಣೆ. #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ first appeared on Vishwa Samvada Kendra.

ನಿಮ್ಮ ನೆಚ್ಚಿನ ಕಿರುತೆರೆಯ ಕಾರ್ಯಕ್ರಮ ಯಾವುದು? ಪ್ರಶ್ನೆಯ ಸುತ್ತ ವಿಶ್ಲೇಷಣೆ. #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

$
0
0

ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ನಿಮ್ಮ ನೆಚ್ಚಿನ ಕಿರುತೆರೆಯ ಕಾರ್ಯಕ್ರಮ ಯಾವುದು?” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ (ಪ್ರವೀಣ್ ಪಟವರ್ಧನ್, ವಿ ಎಸ್ ಕೆ ಸಂಯೋಜಕ, ಐ ಟಿ ಉದ್ಯೋಗಿ ಅವರಿಂದ).

ಸಿನಿಮಾ ಎಲ್ಲರಿಗೂ ಎಟುಕದ ಸ್ಥಿತಿಯಲ್ಲಿದ್ದ ಸಮಯದಲ್ಲಿ ಕಿರುತೆರೆ ಜನರನ್ನು ಆಕರ್ಷಿಸತೊಡಗಿತು. ದೂರದರ್ಶನವೆಂಬ ಒಂದೇ ವಾಹಿನಿಯಿದ್ದಾಗಿನಿಂದ ಇಲ್ಲಿಯವರೆಗೆ ಹಲವಾರು ಕಾರ್ಯಕ್ರಮಗಳು ಪ್ರಕಟವಾಗಿವೆ. ಧಾರವಾಹಿ ರೂಪಾರಲ್ಲಿ ೧೩ ವಾರಗಳಿಗೆಂದೇ ಸಮಯಾವಕಾಶ ಕೊಡುತ್ತಿದ್ದ ಮುಂಚಿನ ದಿನಗಳನ್ನು ಈಗ ತುಲನೆ ಮಾಡಬೇಕಾಗಿರುವುದು ನಿತ್ಯ ಬರುವ ಧಾರಾವಾಹಿ ಕಂತುಗಳಿಗೆ. ಸಿನಿಮಾ ಶೈಲಿಯಲ್ಲೇ ಮೂಡಿಬರುವ ಹಲವು ಧಾರಾವಾಹಿಗಳಿವೆ. ಕೆಲವನ್ನು ಜನರು ಬಹಳವಾಗಿ ಇಷ್ಟಪಟ್ಟಿದ್ದಾರೆ. ಮತ್ತೆ ಕೆಲವನ್ನು ಖಂಡಿಸಿದ್ದಾರೆ. ಸಂಗೀತಕ್ಕೆ ಸಂಬಂಧಿಸಿದಂತೆ, ಹಾಡುಗಾರಿಕೆಗೆ ಸಂಬಂಧಿಸಿದಂತೆ ಹಲವು ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಜನರು ವೀಕ್ಷಿಸಿ ಇಷ್ಟಪಟ್ಟಿದ್ದಾರೆ. ರಸಪ್ರಶ್ನೆ, ಜ್ಞಾನಾರ್ಜನೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಕಿರುತೆರೆಯಲ್ಲಿ ಮೂಡಿಬಂದಿವೆ.

ನಮ್ಮ ಪಟ್ಟಿಯಲ್ಲಿದ್ದ ೧೦ ಕಾರ್ಯಕ್ರಮಗಳಲ್ಲಿ ಹೆಚ್ಚು ಅಂಕ ಪಡೆದ ಮೊದಲ ೩ ಕಾರ್ಯಕ್ರಮಗಳು ಬೇರೆ ಬೇರೆಯ ಪ್ರಕಾರದ್ದು ಎಂಬುದೇ ವಿಶೇಷ. ಅತಿ ಹೆಚ್ಚು ಅಂಕ ಪಡೆದ ಎದೆ ತುಂಬಿ ಹಾಡುವೆನು ಸಂಗೀತಕ್ಕೆ ಸಂಬಂಧಿಸಿದ್ದಾದರೆ, ನಾ ಸೋಮೇಶ್ವರರು ನಡೆಸಿಕೊಡುವ ‘ಥಟ್ ಅಂತ ಹೇಳಿ’ ಜ್ಞಾನ, ಓದು, ಪುಸ್ತಕ, ಇವುಗಳಿಗೆ ಸಂಬಂಧಿಸಿದ್ದು. ನಂತರ ಸ್ಥಾನದಲ್ಲಿ – ದೂರದರ್ಶನದಲ್ಲಿ ಹಿಂದೆ ಪ್ರಸಾರವಾಗುತ್ತಿದ್ದ ಟಿ ಏನ್ ಸೀತಾರಾಮ್ ಅವರ ಮಾಯಾಮೃಗ ಧಾರವಾಹಿ.

ಸಂಗೀತಕ್ಕೆ ಹೆಚ್ಚು ಮತ ದೊರೆತಿದೆ ಎಂದು ಒಂದು ತರಹದಲ್ಲಿ ವಿಶ್ಲೇಷಿಸಿದರೆ, ಇಂದಿನ ದಿನಕ್ಕೆ ಗಮನಿಸಬೇಕಾದ್ದು ಈ ಕಾರ್ಯಕ್ರಮದಿಂದ ಬಹಳಷ್ಟಿವೆ. ರಿಯಾಲಿಟಿ ಷೋ ಅಂದರೆ ಅದೊಂದು ಟಿಆರ್ಪಿ ವಸ್ತು ಎಂಬಂತೆ ಆಗಿರುವ ಹಾಗೂ ಪ್ರಕಟವಾಗುವ ಇಂದಿನ ಸಂಗೀತದ ಕಾರ್ಯಕ್ರಮಗಳ ಮುಂದೆ ಎಸ್ ಪಿ ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಅತಿಯಾದ ರಂಜನೆ, ಅತಿಯಾದ ಆಡಂಬರ ಕಾಣಸಿಗುತ್ತಿರಲಿಲ್ಲ. ಸಂಗೀತಕ್ಕೆ ಆದ್ಯತೆ, ಎಲ್ಲರನ್ನು ಪ್ರೋತ್ಸಾಹಿಸುವ ಕೆಲಸ ಈ ಕಾರ್ಯಕ್ರಮದಿಂದ ನಡೆಯುತ್ತಿತ್ತು. ಸ್ಪರ್ಧೆಯಿಂದ ದೂರ ಉಳಿಯಬೇಕಾದವರನ್ನು ಅಳುವಂತೆ ಮಾಡಿ ಟಿಆರ್ಪಿ ಹೆಚ್ಚಿಸಿಕೊಳ್ಳುವ ಕೆಲಸಕ್ಕೆ ಈ ಕಾರ್ಯಕ್ರಮ ಎಂದೂ ಕೈ ಹಾಕಲಿಲ್ಲ. ಈ ಕಾರ್ಯಕ್ರಮದಿಂದ ಹಲವಾರು ಪ್ರತಿಭೆಗಳಿಗೆ ಸಿನಿಮಾಗಳಲ್ಲಿ ಹಾಡಲು ಅವಕಾಶ ಲಭಿಸಿದೆ.

ಇನ್ನು ಥಟ್ ಅಂತ ಹೇಳಿ ಎಂಬ ರಸಪ್ರಶ್ನೆಯ ಬಗ್ಗೆ, ನಿರೂಪಣೆಯಲ್ಲಿ ಏಕತಾನತೆ ಹೊಂದಿದೆಯೆಂದು ಅಭಿಪ್ರಾಯಪಡುತ್ತಾರಾದರೂ, ಜ್ಞಾನಾರ್ಜನೆಗೆ, ನಿರೂಪಕರಾದ ಡಾ. ನಾ ಸೋಮೇಶ್ವರ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಮೂಡಿ ಬರುವ ಹಲವಾರು ಪುಸ್ತಕಗಳು, ಅವುಗಳ ಪರಿಚಯ ಹಲವು ಜನರನ್ನು ಆಕರ್ಷಿಸಿದೆ. ೩೦೦೦ಕ್ಕೂ ಹೆಚ್ಚು ಸಂಚಿಕೆಗಳು ಪ್ರಕಟವಾಗಿವೆ ಹಾಗೂ ದೂರದರ್ಶನದ ಕೆಲವೇ ಕೆಲವು ಕಾರ್ಯಕ್ರಮಗಳಲ್ಲಿ ಆಸ್ಥೆಯಿಂದ ನೋಡುವ ಕಾರ್ಯಕ್ರಮ ಇದಾಗಿದೆ ಎಂದರೆ ತಪ್ಪಾಗಲಾರದು.

ಇನ್ನು ದೂರದರ್ಶನದಲ್ಲಿ ಪ್ರಕಟವಾದ ಮೊಟ್ಟ ಮೊದಲ ದೈನಂದಿನ ಧಾರಾವಾಹಿ “ಮಾಯಾಮೃಗ” ನಾಲ್ಕು ಸಾಮಾನ್ಯ ಮನೆಗಳ ಕಥೆಗಳನ್ನು ತೆಗೆದುಕೊಂಡು ನಿರ್ದೇಶಕ ಟಿ ಏನ್ ಸೀತಾರಾಮ್ ಈ ವಿಶೇಷ ಪ್ರಯತ್ನಕ್ಕೆ ಕೈ ಹಾಕಿದರು. ಮೊದಲೆಲ್ಲ ಈ ಪ್ರಯತ್ನ ಫಲಕಾರಿಯಾಗುವುದೋ ಇಲ್ಲವೋ ಎಂಬ ಅನುಮಾನವಿತ್ತಾದರೂ, ಮುಂದಿನ ದಿನಗಳಲ್ಲಿ ದೈನಂದಿನ ಧಾರಾವಾಹಿಗೆ ಮುನ್ನುಡಿ ಬರೆದದ್ದು ಮಾಯಾಮೃಗ. ಇಂದಿನ ಧಾರಾವಾಹಿಗಳಲ್ಲಿ ಬರುವ ಇಬ್ಬರ ನಡುವಿನ ಕಲಹ, ಅತ್ತೆ ಸೊಸೆ ಜಗಳ, ಗಂಡ ಹೆಂಡತಿ ವೈಮನಸ್ಸು ಇವಾವುದನ್ನೂ ತೋರಿಸದೆ ಸಾತ್ವಿಕ ರೀತಿಯ ಧಾರಾವಾಹಿಯನ್ನು ಅಂದು ನಿರ್ದೇಶಿಸಿದ್ದರು. ಇದರಲ್ಲಿ ಬರುವ ನ್ಯಾಯಾಲಯದ ಸೀನುಗಳು ನಿಜವೇನೋ ಎಂಬಂತೆ ಚಿತ್ರಿಸಿದ್ದ ಸೀತಾರಾಮ್ ಅವರಿಗೊಂದು ವಿಶೇಷ ಅಭಿಮಾನಿ ವರ್ಗ ಹುಟ್ಟಿಕೊಂಡಿತು.

(ಪ್ರವೀಣ್ ಪಟವರ್ಧನ್, ವಿ ಎಸ್ ಕೆ ಸಂಯೋಜಕ, ಐ ಟಿ ಉದ್ಯೋಗಿ)

The post ನಿಮ್ಮ ನೆಚ್ಚಿನ ಕಿರುತೆರೆಯ ಕಾರ್ಯಕ್ರಮ ಯಾವುದು? ಪ್ರಶ್ನೆಯ ಸುತ್ತ ವಿಶ್ಲೇಷಣೆ. #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ first appeared on Vishwa Samvada Kendra.

“ನಿಮ್ಮ ನೆಚ್ಚಿನ ಭಾವಗೀತೆ ಹಾಗೂ ಜಾನಪದ ಗೀತೆಗಳು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

$
0
0

ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ನಿಮ್ಮ ನೆಚ್ಚಿನ ಭಾವಗೀತೆ ಹಾಗೂ ಜಾನಪದ ಗೀತೆಗಳು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ (ಪ್ರವೀಣ್ ಪಟವರ್ಧನ್, ವಿ ಎಸ್ ಕೆ ಸಂಯೋಜಕ, ಐ ಟಿ ಉದ್ಯೋಗಿ ಅವರಿಂದ.)

ಕನ್ನಡದ ಭಾವಗೀತೆಗಳಲ್ಲಿ, ಜಾನಪದ ಗೀತೆಗಳಲ್ಲಿ ನಿಮಗೆ ಇಷ್ಟವಾಗುವ ಹಾಗೂ ಕನ್ನಡತನವನ್ನು ಹೆಚ್ಚಿಸುವ ಗೀತೆ ಯಾವುವು ಎಂಬವು ಪ್ರಶ್ನೆಗಳಾಗಿದ್ದವು. ನಮಗೆಲ್ಲರಿಗೂ ತಿಳಿದಂತೆ ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತದ ಪ್ರಾಕಾರದಂತೆ ಭಾವಗೀತೆಯ ಪ್ರಾಕಾರ ನಮ್ಮಲ್ಲಿವೆ. ಅವುಗಳನ್ನು ಇಷ್ಟ ಪಡುವ, ಅವುಗಳನ್ನೇ ಹೆಚ್ಚಾಗಿ ಕೇಳುವ ವರ್ಗ ನಮ್ಮಲ್ಲಿದೆ. ಬೇರೆಯ ಭಾಷೆಗಳಲ್ಲಿ ಬಹುಶಃ ಇಷ್ಟು ಮಟ್ಟದ ಅಭಿಮಾನವಿಲ್ಲದ ಆದರೆ ನಮ್ಮಲ್ಲಿ ಅವುಗಳನ್ನು ಅತಿಯಾಗಿ ಪ್ರೀತಿಸುವ ಭಾವ ಜೀವಿಗಳನ್ನು ಗಮನಿಸಿರುತ್ತೇವೆ. ಸಂಗೀತ ಸ್ಪರ್ಧೆಯೊಂದು ನಡೆದರೆ ಶಾಸ್ತ್ರೀಯ ಸಂಗೀತ ಗಾಯನದ ಜೊತೆಗೆ ಭಾವಗೀತೆಯ, ಜಾನಪದ ಗೀತೆಯ ಗಾಯನವೂ ಇದ್ದೇ ಇರುತ್ತದೆ. ಎಫ್ ಎಂ ಗಳಲ್ಲಿ ಸಿನಿಮಾ ಹಾಡುಗಳನ್ನು ಪ್ರಸಾರ ಮಾಡುವುದರ ಜೊತೆ ಭಾವಗೀತೆಗಳನ್ನು ಪ್ರಸಾರ ಮಾಡುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿರುತ್ತದೆ. ಹೀಗೆ ಹೇಳುವಾಗ ಜಾನಪದ ಹಾಡುಗಳನ್ನು ಮರೆಯುವಂತಿಲ್ಲ. ಬಾಯಿಂದ ಬಾಯಿಗೆ ಹರಿದು ಬಂದ ಈ ಜಾನಪದ ಗೀತೆಗಳಲ್ಲಿ ದೇವರ ಆರಾಧನೆ, ಪ್ರಕೃತಿಯ ಆರಾಧನೆ, ಹೆಣ್ಣು ಮಗಳೊಬ್ಬಳ ಬಯಕೆ, ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ, ಜೀವನದ ಪಾಠ ಕಲಿಸುವ ಸಾಲುಗಳೇ ಹೆಚ್ಚು. ಭಾರತೀಯತೆಯ ತತ್ತ್ವವನ್ನು ಸಾರುವ, ಶ್ರೇಷ್ಠ ನೀತಿಯನ್ನು ಎತ್ತಿಹಿಡಿಯುವ ಈ ಜಾನಪದ ಸಾಹಿತ್ಯದಿಂದ ಕಲಿಯಲಿಕ್ಕೆ, ಜೀವನದಲ್ಲಿ ಅಳವಡಿಸಲಿಕ್ಕೆ ಸಾಕಷ್ಟು ಅವಕಾಶಗಳಿವೆ.

ನಮ್ಮ ಪಟ್ಟಿಯಲ್ಲಿ ಇದ್ದ ೧೦ ಭಾವಗೀತೆಗಳು ಒಂದಕ್ಕಿಂತಲೂ ಮತ್ತೊಂದು ಮಿಗಿಲಾದ ಹಾಡುಗಳೇ. ಈ ಹಾಡುಗಳಿಗೆ ರಾಗ ಸಂಯೋಜನೆ ಮಾಡಿ, ಗಾಯನದ ಮೂಲಕ ಪ್ರಸ್ತುತ ಪಡಿಸಿ, ಪ್ರಸಿದ್ಧಿಗೊಂಡ ಹಾಡುಗಳು ಭಾವಗೀತೆಗಳೋ ಜಾನಪದವೋ ಎನ್ನುವಷ್ಟು ಪ್ರಸಿದ್ಧಿ ಹೊಂದಿವೆ. ಕವಿಗಳು ರಚಿಸಿರುವ ಹಾಡುಗಳಿಗೆ ಮೈಸೂರು ಅನಂತಸ್ವಾಮಿ, ಸಿ ಅಶ್ವತ್ಥ, ಸೇರಿದಂತೆ ಹಲವು ಅತ್ಯುನ್ನತ ರಾಜ ಸಂಯೋಜಕರು ನಿಜಾರ್ಥದಲ್ಲಿ ಭಾವ ತುಂಬಿದ್ದಾರೆ. ಹೀಗೆ ಇರುವ ಹಾಡುಗಳು ಸಾವಿರಾರು ದಾಟಬಹುದು. ಹಿಂದೊಮ್ಮೆ ಸಿ ಅಶ್ವತ್ಥ ಅವರು ಸಾವಿರಾರು ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕುವೆಂಪು ಅವರ ಭಾವಗೀತೆಗಳ ಸಂಗೀತ ಕಚೇರಿಯನ್ನು ಪ್ರಸ್ತುತ ಪಡಿಸಿದ್ದರು. ಭಾವಗೀತೆಗಳನ್ನು ಒಳಗೊಂಡ ಕಾರ್ಯಕ್ರಮಗಳಿಗೆ ಜನರು ಸಿನಿಮಾ ಹಾಡುಗಳನ್ನು ಕೇಳಲು ಮುಗಿಬೀಳುವುದಕ್ಕಿಂತಲೂ ಹೆಚ್ಚು ಸೇರುತ್ತಿದ್ದ ಕಾಲವೊಂದಿತ್ತು.

ಆಯ್ಕೆಗಳಲ್ಲಿ ಹೆಚ್ಚು ಮತ ಪಡೆದ ಭಾವಗೀತೆ – “ಜೋಗದ ಸಿರಿ ಬೆಳಕಿನಲ್ಲಿ…” ಕವಿ ನಿಸಾರ್ ಅಹಮದ್ ಅವರ ಲೇಖನಿಯಿಂದ ಹೊರಹೊಮ್ಮಿರುವ ಈ ಗೀತೆ ಕರ್ನಾಟಕದ ನಾಡಗೀತೆಯಷ್ಟೇ ಪ್ರಸಿದ್ಧ. ಜೋಗದ ವೈಭವವನ್ನು ಸಾರುವ ಈ ಕವಿತೆಯನ್ನು ನಿತ್ಯೋತ್ಸವ ಎಂದು ಕವಿಗಳು ಕರೆದಿದ್ದಾರೆ. ಜೋಗದ ವೈಭವವೇ, ಪರಿಸರ ಆರಾಧನೆಯನ್ನೇ ನಿತ್ಯ ಉತ್ಸವ ಎಂದು ಬರೆಯುವ ಕವಿಗಳು ಮುಸ್ಲಿಮರಾದರೂ ಅವರನ್ನು ‘ಕನ್ನಡಿಗರು, ಶ್ರೇಷ್ಠ ಕವಿಗಳಲ್ಲಿ ಒಬ್ಬರು’ ಎಂದಷ್ಟೇ ಹೆಮ್ಮೆಯಿಂದ ನೋಡಿದ ಜನರು ನಾವು.
ಎರಡನೆಯ ಸ್ಥಾನದಲ್ಲಿದ್ದ ಗೀತೆ ಕೆ ಎಸ್ ನರಸಿಂಹಸ್ವಾಮಿಯವರು ಬರೆದಿರುವ ದೀಪವು ನಿನ್ನದೇ, ಗಾಳಿಯು ನಿನ್ನದೇ. ಜೀವನದಲ್ಲಿ ಸರ್ವಶಕ್ತನಾದ ಭಗವಂತನಿಗಿರುವ ಶಕ್ತಿಯಲ್ಲಿ ನಂಬಿಕೆಯಿಡುತ್ತಾ, ಜೀವನ ಹಳಿ ತಪ್ಪದಿರಲಿ ಎಂಬ ಸಾರ ಈ ಕವನದ್ದು. ಇನ್ನು ಅಷ್ಟೇ ಶ್ರೇಷ್ಠವೆನಿಸುವ “ಯಾವ ಮೋಹನ ಮುರಳಿ ಕರೆಯಿತು…” ಕವಿ ಎಂ ಗೋಪಾಲಕೃಷ್ಣ ಅಡಿಗರ ಕವನದಲ್ಲಿ ಜೀವನದಲ್ಲಿ ಇರುವ ಸುಖಗಳನ್ನು ಬಿಟ್ಟು ಮತ್ತೆಲ್ಲಿಯದೋ ಸುಖಕ್ಕಾಗಿ ಹಂಬಲಿಸುವುದನ್ನು ಕುರಿತು ಗೀತೆ ರಚನೆಯಾಗಿದೆ. ಅಧ್ಯಾತ್ಮದ ಸಾರವನ್ನು ಸಾರುವ ಈ ಕವನದಲ್ಲಿ ಬರುವ ಸಾಲುಗಳಲ್ಲಿ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” ನಿಜಾರ್ಥದಲ್ಲಿ ಮನುಷ್ಯನ ಸಹಜ ವರ್ತನೆಯನ್ನು ಬಿಂಬಿಸಿದ್ದಾರೆ.

ನಮ್ಮ ಪಟ್ಟಿಯಲ್ಲಿ ಇದ್ದ ಆಯ್ಕೆಗಳೆಲ್ಲವೂ ಹಳೆಯ ಭಾವಗೀತೆಗಳೇ. ಇಂದು ಭಾವಗೀತೆಗಳು, ಕವನಗಳು ರಚಿತವಾಗುತ್ತಿವೆಯಾದರೂ, ಅವುಗಳು ಜನರನ್ನು ಸೆಳೆಯುತ್ತಿರುವುದು ಕಡಿಮೆಯೇ ಎಂದನಿಸದಿರದು. ಇಂದಿನ ಕಾಲ ಘಟ್ಟಕ್ಕೆ ಹಳೆಯ ಹಾಡುಗಳ ಜೊತೆಗೆ ಇಂದಿನ ಕಾಲಕ್ಕೆ ಸರಿಹೊಂದುವ ಅರ್ಥಪೂರ್ಣ ಅಧ್ಯಾತ್ಮ, ಭಾವನೆಗಳ ಮಿಶ್ರಿಸಿದ ಕವನಗಳು, ಅದಕ್ಕೆ ಸರಿಯಾದ ರಾಗ ಸಂಯೋಜನೆ, ಗಾಯನ ರೂಪದಲ್ಲಿ ಮೂಡಿಬಂದರೆ ಈ ಗೀತೆಗಳು ಹೊಸ ತಲೆಮಾರಿಗೆ ಒಳ್ಳೆಯ ಸಂದೇಶ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನಷ್ಟು ಭಾವಗೀತೆಗಳನ್ನು ಕೇಳುವಂತಾಗಲಿ, ಹೆಚ್ಚು ಕವಿಗಳು, ರಾಗ ಸಂಯೋಜಕರು, ಗಾಯಕರು ಪರಿಚಯವಾಗುವುದರಿಂದ ಕನ್ನಡಕ್ಕೆ, ಹಾಗೂ ಕರ್ನಾಟಕಕ್ಕೇ, ಹಾಗೂ ಸಾಹಿತ್ಯ-ಸಂಗೀತ ಲೋಕಕ್ಕೆ ಉತ್ತಮ ಕೊಡುಗೆಯಾದೀತು.

ಇನ್ನು ಜಾನಪದ ಹಾಡುಗಳಾದ ಚೆಲ್ಲಿದರು ಮಲ್ಲಿಗೆಯಾ, ಮಾಯದಂಥ ಮಳೆ ಬಂತಣ್ಣಾ, ಭಾಗ್ಯದ ಬಳೆಗಾರ ಕ್ರಮವಾಗಿ ಜನರ ಮತಗಳನ್ನು ಹೆಚ್ಚಾಗಿ ಪಡೆದ ಮೂರು ಗೀತೆಗಳು.

ಪ್ರವೀಣ್ ಪಟವರ್ಧನ್, ವಿ ಎಸ್ ಕೆ ಸಂಯೋಜಕ, ಐ ಟಿ ಉದ್ಯೋಗಿ

The post “ನಿಮ್ಮ ನೆಚ್ಚಿನ ಭಾವಗೀತೆ ಹಾಗೂ ಜಾನಪದ ಗೀತೆಗಳು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ first appeared on Vishwa Samvada Kendra.

ಚಲನಚಿತ್ರ ಹಾಗೂ ಸಂಬಂಧಿತ ವಿಷಯಗಳಿಗೆ ಕೇಳಲಾದ ಪ್ರಶ್ನೆಗಳಿಗೆ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

$
0
0

ಚಲನಚಿತ್ರ ಹಾಗೂ ಸಂಬಂಧಿತ ವಿಷಯಗಳಿಗೆ ಕೇಳಲಾದ ಪ್ರಶ್ನೆಗಳಿಗೆ ಮತಚಲಾವಣೆಯಾದ ಆಯ್ಕೆಗಳಿಗೆ ಶ್ರೀ ಶ್ರೀರಾಜ ಗುಡಿ, ಮಣಿಪಾಲದ ಸಂವಹನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು ಇವರು ಮಾಡಿರುವ ವಿಶ್ಲೇಷಣೆ

ಕನ್ನಡ ಚಲನಚಿತ್ರ ಕುರಿತು ಮಾಧ್ಯಮದಲ್ಲಿ ವಿಸ್ತ್ರತವಾಗಿ ನಡೆದಿರುವ ಸಮೀಕ್ಷೆಗಳು ಬಲು ಅಪರೂಪ ಎನ್ನಬಹುದು.ಸಂವಾದ ನಡೆಸಿರುವ ಈ ಸಮೀಕ್ಷೆ ಚಿತ್ರ ರಂಗದ ಒಳಗೂ ಮತ್ತು ಹೊರಗೂ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಬಲ್ಲಷ್ಟು ಸಮರ್ಥವಾಗಿದೆ. ಚಲನಚಿತ್ರ ಹೊಸ ಹೊಳಹುಗಳನ್ನು ಕಂಡು ಕೊಳ್ಳುತ್ತಿರುವ ಈ ನವ ಯುಗದಲ್ಲಿ, ನೋಡುಗನ ರುಚಿ ಕುರಿತಾಗಿಯೂ, ಚಿತ್ರ ರಂಗ ಅರಿಯಲು ಇದು ಸಹಾಯಕವಾಗಬಲ್ಲದು.


ಕರ್ನಾಟಕವನ್ನು ಪ್ರಭಾವಿಸಿದ ಸಿನೆಮಾಗಳ ಸಮೀಕ್ಷೆಯಲ್ಲಿ, ನಾಗರಹಾವು. ಬಂಗಾರದ ಮನುಷ್ಯ, ಮುಂಗಾರು ಮಳೆ, ಪ್ರೇಮಲೋಕ, ಸಾಂಗ್ಲಿಯಾನ, ಗೌರಿ ಗಣೇಶ, ಗಂಧದ ಗುಡಿ, ಜನುಮದ ಜೋಡಿ, ಅಂತ, ದ್ವೀಪ, ಚಿತ್ರಗಳನ್ನು ಓದುಗರ ಮುಂದೆ ಇಡಲಾಗಿತ್ತು. ಇವುಗಳಲ್ಲಿ ಬಂಗಾರದ ಮನುಷ್ಯ, ನಾಗರ ಹಾವು ಮತ್ತು ಗಂಧದ ಗುಡಿ ಚಿತ್ರಗಳು ಮೊದಲ ಮೂರು ಸ್ಥಾನ ಪಡೆದಿವೆ. ಎಲ್ಲ ಸಿನೆಮಾಗಳು ಪಡೆದಿರುವ ಮತವನ್ನು ಬದಿಗಿಟ್ಟು ನೋಡುವುದಾದರೇ, ಈ ಎಲ್ಲಾ ಚಿತ್ರ ಗಳು ತಮ್ಮದೇ ಆದ ಪ್ರಭಾವವನ್ನು ನೋಡುಗನ ಮೇಲೆ ಕಾಯಂ ಆಗಿ ಮೂಡಿಸಿದವು. ಪ್ರೇಮಲೋಕ, ಜನುಮದ ಜೋಡಿ ಚಿತ್ರಗಳು ಮೊದಲ್ ಮೂರು ಸ್ಥಾನ ಪಡೆಯಲು ವಿಫಲವಾಗಿದ್ದರೂ, ಗಲ್ಲಾ ಪೆಟ್ಟಿಗೆಯಲ್ಲಿ ಈ ಚಿತ್ರಗಳು ಮಾಡಿದ ಮೋಡಿಯನ್ನು ಮರೆಯಲಾಗದು. ರವಿಚಂದ್ರ ಈ ಚಿತ್ರದ ಮುಖಾಂತರ ನಾಡಿನ ರಸಿಕರ ಮುಂದೆ ಒನ್ದು ಹೊಸ ಸಾಧ್ಯತೆಯನ್ನೇ ತೆರೆದಿಟ್ಟರು. ಪೊಪ್ಯುಲರ ಸಿನೆಮಾಕ್ಕೆ ಆದ ಒಂದು ವಾಖ್ಯೆಯನ್ನು ಪ್ರೇಮಲೋಕ ನೀಡಿದ್ದು ಸುಳ್ಳಲ್ಲ. 

ಅದೇ ರೀತಿ ದ್ವೀಪದ ಮುಖಾಂತರ ನಿಜವಾಗಿಯೂ ನಿಂತ ನೀರಾಗಿದ್ದ ಕನ್ನಡ ಚಿತ್ರ ರಂಗಕ್ಕೆ, ಒಂದು ಆಶಾದ್ವೀಪವನ್ನುತೋರಿಸಿದವರು ಕಾಸರವಳ್ಳ್.  ಇದರಲ್ಲಿ ಸೌಂದರ್ಯ ಅಭಿನಯ ಒನ್ದು ಮಾದರಿ ಎನೆಸಿದರೇ, ಗಿರೀಶ ನಿರ್ದೇಶನವೇ ಇನ್ನೊಂದು ಮಾದರಿ ಎಂದರೇ ಆಶ್ಚರ್ಯವಿಲ್ಲ. ಸಾಂಗ್ಲಿಯಾನ, ಗೌರಿ ಗಣೇಶದಲ್ಲಿ ಅನಂತ ನಾಗ ಮತ್ತು ಶಂಕರ ನಾಗ ಅಭಿನಯ ಮಧ್ಯಮವರ್ಗವನ್ನು ಕಟ್ಟಿ ಹಾಕಿದ್ದಲ್ಲದೇ, ಗಣೇಶ ಸಿರೀಸ್ ಗಳ ಮುಖಾಂತರ ಫಣಿ ರಾಮಚಂದ್ರ ಕನ್ನಡಕ್ಕೆ ಇನ್ನೊಂದು ಸಾಧ್ಯತೆಯನ್ನು ತೋರಿಸಿದರು. ಇವೆಲ್ಲ್ದರ ಮಧ್ಯ ಸಮೀಕ್ಷೆಯನ್ನೇ ಮೂಲವಾಗಿಟ್ಟುಕೊಂಡು ನೊಡುವುದಾದರೇ, ರಾಜ್ ಯುಗ ಕನ್ನಡ ದ ಚಿತ್ರರಂಗದ ಪಾಲಿಗೆ ಸುವರ್ಣ ಯುಗವೆಂದೇ ಹೇಳಬಹುದು. ೬೦ ರಿಂದ ೯೦ ರ ಆದಿ ಭಾಗದವರೆಗೆ, ರಾಜ್ ಕಾಲದಲ್ಲಿ ಮೂಡಿಬಂದ ಚಿತ್ರಗಳು ಒಂದು ಪ್ರೇಕ್ಷಕ ವರ್ಗವನ್ನೇ ನಿರ್ಮಾಣಮಾಡಿದ್ದವು. ಸಿದ್ದಲಿಂಗಯ್ಯ ನಿರ್ದೇಶಿಸಿದ, ಬಂಗಾರದ ಮನುಷ್ಯ, ೧೦೪ ವಾರಗಳಕಾಲ ನಿರಂತರವಾಗಿ  ಪ್ರದರ್ಶನಗೊಂಡು, ಹೊಸ ದಾಖಲೆಯನ್ನೇ ಹುಟ್ಟುಹಾಕಿದವು. ಅದೇ ರೀತಿ, ತಾರಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ದಿಗ್ದರ್ಶನದಲ್ಲಿ ಮೂಡಿಬಂದ ವಿಷ್ಣುವರ್ಧನ ಅಭಿನಯದ ಮೊದಲ ಚಿತ್ರ ನಾಗರಹಾವು ಕೂಡ ತನ್ನ ನಟನೆ ಹಾಗು ಬಿಗು ಕಥಾಹಂದರಕ್ಕಾಗಿ ಪ್ರೇಕ್ಷಕನನ್ನು ಕಟ್ಟಿ ಹಾಕುವಂತಹದು. ಆದರೆ, ನವ ಹಾಗು ಇಂಟರ್ ನೆಟ್ ಯುಗದ ಚಿತ್ರಗಳಾದ ಮುಂಗಾರು ಮಳೆ, ತನ್ನ ಕಥೆ, ಹಾಡು ಹಾಗು ಗಣೇಶ್ ಅಭಿನಯ ಮತ್ತು ಭಟ್ಟರ ಕರ್ಣಧಾರತ್ವದ ಮುಖಾಂತರ ಗಲ್ಲಾ ಪಟ್ಟಿಗೆಯನ್ನು ಸೂರು ಮಾಡಿಹಾಕಿದರೂ, ಯಾಕೋ ಈ ಸಮೀಕ್ಷೆಯಲ್ಲಿ ಸ್ಥಾನಗಳಿಸಿಲ್ಲ. ಇದರ ಅರ್ಥ, ನಾಡಿನ ಚಿತ್ರ ವೀಕ್ಷಕ ಇವತ್ತಿಗೂ, ಪುಟ್ಟಣ್ಣ, ರಾಜ್, ವಿಷ್ಣು, ಅಥವಾ ಶಂಕರ್ ನಾಗ್ ತರಹದ ಆದರ್ಶವಾದಿ ನಟನೆಯನ್ನು ತೆರೆ ಮೇಲೆ ಇಶ್ಟಪಡುತ್ತಾನೆ ಎಂದು ಕಾಣಿಸುತ್ತದೆ.


ಆದರೆ ಜನಪ್ರೀಯ ನಿರ್ದೇಶಕರಲ್ಲಿ ಪುಟ್ಟಣ್ಣ ಕಣಗಾಲ ತಮ್ಮ ಸಮಕಾಲೀನ ಹಾಗು ನಂತರದ ಪೀಳಿಗೆಯ ದಿಗ್ದರ್ಶಕರನ್ನು ಬದಿಗೊತ್ತಿ, ಇವತ್ತಿಗೂ, ನಂಬರ್ ೧ ಸ್ಥಾನವನ್ನು ಉಳಿಸಿಕೊಂಡಿದ್ದು. ಇಂದಿನ ತಲೆಮಾರಿನ ಬಹುತೇಕ ಕನ್ನಡ ಚಿತ್ರ ನಿರ್ದೇಶಕರಿಗೆ ಪುಟ್ಟಣ್ಣ ಆದರ್ಶವಾಗಿ ಕಂಡಿರಲು ಸಾಕು. ತಮ್ಮ ಪ್ರತಿ ಚಿತ್ರವನ್ನೂ ಒಂದು ಪ್ರಯೋಗವಾಗಿ ಮುಂದಿಟ್ಟ ಪುಟ್ಟಣ್ಣ ಅವರಿಗೆ ಅವರೇ ಸಾಟಿ. ಚಲನಚಿತ್ರ ನಿರ್ದೇಶನ ಮತ್ತು ಅಧ್ಯಯನದಲ್ಲಿ ಜಪಾನ್, ಇರಾನಿ, ಫ್ರೆಂಚ್ ಮತ್ತು ಭಾರತೀಯ ಭಾಷೆಗಳಲ್ಲಿ ಬೆಂಗಾಲಿಗೆ ಪ್ರಾಶಸ್ತ ಕೊಡುವ ನಮ್ಮ ಶಿಕ್ಷಣ ಪಂಡಿತರಿಗೆ, ಪುಟ್ಟಣ್ಣ ಕಾಣದೇ ಇರುವುದೇ ನಮ್ಮ ದೌರ್ಭಾಗ್ಯ. ಮೂಲ ವಾಹಿನಿ ಹಾಗು ಕಲಾತ್ಮಕ ಎರಡಲ್ಲೂ ನವ ಭಾಷ್ಯ ಬರೆದ ಪುಟ್ಟಣ್ಣ  ಸಿನಿ ಜೀವನವೇ ನಿಜವಾಗಿಯೂ ಒಂದು ಅಧ್ಯಯನವೇ ಸರಿ. ಉಳಿದಂತೆ ಏ ಅನ್ನುತ್ತಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಉಪೇಂದ್ರ ಕೇವಲ ಬುದ್ಡಿವಂತರಿಗೆ ಮಾತ್ರವೇ ಉಳಿದಿಕೊಳ್ಳದೇ ಜನಮಾನಸದಲ್ಳಿ ಶ್ !!! ಎನ್ನುತ್ತಲೇ ಹೊಸ ಸದ್ದು ಮಾಡಿದವರು. ದೊರೆ-ಭಗವಾನ್ ಜೋಡಿ ಕನ್ನಡ ಸಿನೇಮಾದ ಕೋಟಿ ಚನ್ನಯ್ಯರೇ ಸರಿ. ೧೯೬೫ ರಿಂದ ೯೦ ರ ಆದಿ ಭಾಗದವರೆಗೆ ಸಂಧ್ಯಾರಾಗ, ಚಂದನದ ಗೊಂಬೆ, ಕಸ್ತೂರಿ ನಿವಾಸ ಮತ್ತು ಜೀವನ ಚೈತ್ರ ಮುಂತಾದವುಗಳು ಮುಖಾಂತರ ಬಾಕ್ಸ್ ಆಫೀಸನಲ್ಲಿ ಸಾಕಷ್ಟು ಸಂಚಲನ ತಂದಿದ್ದು, ಆದರೆ ತಾಂತ್ರಿಕವಾಗಿ ಚಿತ್ರಗಳನ್ನು ನೋಡಿದಾಗ ಅಷ್ಟೊಂದು ಮಹತ್ವ ಕೊಡದೇ, ಮಧ್ಯಮ ವರ್ಗ ಕುಳಿತು ನೋಡಬಹುದಾದ ಚಿತ್ರಗಳಿಗೆ ಪ್ರಾಧಾನ್ಯತೆ ನೀಡಿದ್ದು ಕಂಡುಬರುತ್ತದೆ. ಸಿದ್ದಲಿಂಗಯ್ಯ ಸ್ಥಾನವನ್ನು ಏಕೆ ಪಡಿಲಿಲ್ಲ ಎನ್ನುವುದು ಸಮೀಕ್ಷೆಯಲ್ಲಿ ಭಾಗವಹಿಸಿದವರ ವಿಮರ್ಶೆಗೆ ಬಿಟ್ಟಿದ್ದು.


ನೆಗೆಟಿವ್ ಪರ್ಸಾನಾಲಿಟಿಯನ್ನು ಹೋಲುವ ಅವಕಾಶವನ್ನು ಪಡೆದ ವಜ್ರಮುನಿ ಕನ್ನಡ ಚಿತ್ರರಂಗ ಕಂಡ ಅಂಬರೀಶ್ ಪುರಿ ಎನ್ನಬಹುದು. ತಮ್ಮ ಪ್ರತಿಚಿತ್ರದಲ್ಲೂ ನಾಯಕನಿಗೆ ಸಮನಾಗಿ ಛಾಪನ್ನು ಒತ್ತಿದ ಶ್ರೇಯಸ್ಸು ವಜ್ರಮುನಿ ಅವರದ್ದೂ. ಇನ್ನು ಪ್ರೋಫೆಸರ ಹುಚ್ಚುರಾಯರದ ನರಸಿಂಹ ರಾಜು, ನಟನೆ ಇವತ್ತಿಗೂ ಯಾರಿಗೂ ತುಂಬಲು ಸಾಧ್ಯವಾಗಿಲ್ಲ. ಚಾರ್ಲಿ ಚಾಪ್ಲಿನ್ ಹೋಲುವ ದೇಹ ಸೌಷ್ಟವ ಅವರದ್ದಾಗಿದ್ದೂ ಅಲ್ಲದೇ ನಟನೆ ಕೂಡ ಚಾಪ್ಲಿನ್ ಗೆ ಸಮಾನಾಂತರವೇ ಆಗಿತ್ತು, ಹಾಸ್ಯವನ್ನು ಯಾವುದೇ ಅಪಾರ್ಥಕ್ಕೆ ಎಡೆ ಮಾಡದೇ ಮುಂದಿಡುವಲ್ಲಿ ನರಸಿಂಹ ರಾಜು ನಿಜಕ್ಕೂ ಎತ್ತಿದ ಕೈ.


ಸಂಗೀತಕ್ಕೆ ಚಲನ ಚಿತ್ರ ನೀಡಿರುವ ಕಾಣಿಕೆಯೇ ಅದ್ಭುತ. ದಾಸರ ಪದಗಳು, ವಚನಗಳು, ನವೋದಯ, ನವ್ಯದ  ಸಾಕಷ್ಟು ರಚನೆಗಳನ್ನು ಜನಮಾನಸದಲ್ಲಿ ಜೀವಂತವಾಗಿರಿಸಿದ್ದೇ ಚಿತ್ರರಂಗ. ಅವುಗಳಿಗೆ ಬಹುತೇಕ ಯೋಗ್ಯಸ್ಥಾನ್ವನ್ನು ಕೊಟ್ಟ ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಅಳವಡಿಸಿಕೊಂಡಿರುವ ಉದಾಹರಣೆಗಳಿವೆ. ಕುಲದಲ್ಲಿ ಮೇಲಾವುದೋ ಹುಚ್ಚಪ್ಪ ಇದು ಯಾವ ಕಾಲಕ್ಕೂ ಹೋಲುವ ಅಪರೂಪದ ಹಾಡು. ಮನುಷ್ಯ ಜೀವ ಹಾಗೂ ಜೀವನ ಪ್ರೀತಿ ಉಳಿದೆಲ್ಲವುಕ್ಕಿಂತಲೂ ಮಿಗಿಲಾದದ್ದು ಎನ್ನುವ ಸಂದೇಶದ ಈ ಗೀತೆ, ಮಾಹಾಮಾರಿಯ ಸಂಕಷ್ಟದ ಈ ಕಾಲಕ್ಕಿಂತಲೂ ಬೇರೆ ಯಾವಗ ಪ್ರಸ್ತುತವಾಗಿರಲು ಸಾಧ್ಯ?ಮೂಲ ಕನ್ನಡಿಗರು ಅಲ್ಲದೇ ಇದ್ದರೂ, ಎಸ್ ಜಾನಕಿ, ವಾಣಿ ಜಯರಾಂ, ಪಿ ಸುಶೀಲಾ ಚಿತ್ರ ವೀಕ್ಷಕರು ಮನಸ್ಸಿನಲ್ಲಿ ಅಲ್ಲದೇ ಸಾಮಾನ್ಯ ಜನತೆಯ ಮನದಲ್ಲೂ ಖಾಯಂ ನಿವಾಸಿಗಳಾಗಿರುವರು.

ಏನೇ ಇರಲಿ, ವ್ಯಕ್ತಿಯೊಬ್ಬನ ಸಾಧನೆಗೆ ಒಂದು ಸಮೀಕ್ಷೆ ಮಾನದಂಡವಾಗಲು ಸಾಧ್ಯವಿಲ್ಲ. ಆದರೆ ಇಂತಹ ಪ್ರಯತ್ನಗಳ ಮುಖಾಂತರ ಗತ, ಪ್ರಸ್ತುತ ಹಾಗುಮುಂದಿನ ತಲೆಮಾರನ್ನು ಜೋಡಿಸುವ ಪ್ರಯತ್ನಕ್ಕೆ ಜೈ ಎನ್ನಲೇಬೇಕು. ಆದರೆ ಇದು ಕೇವಲ ನವೆಂಬರ ಪ್ರಯತ್ನವಾಗಿ ಮಾತ್ರ ಉಳಿಯದಿರಲಿ ಎಂಬುದೇ ಒಂದು ಆಶಯ.

ಶ್ರೀರಾಜ ಗುಡಿ, ಮಣಿಪಾಲದ ಸಂವಹನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು

The post ಚಲನಚಿತ್ರ ಹಾಗೂ ಸಂಬಂಧಿತ ವಿಷಯಗಳಿಗೆ ಕೇಳಲಾದ ಪ್ರಶ್ನೆಗಳಿಗೆ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ first appeared on Vishwa Samvada Kendra.

ಖ್ಯಾತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ನಿಧನ –ಬಹಳ ದುಃಖದ ಸುದ್ದಿ : ದತ್ತಾಜಿ ಶ್ರದ್ಧಾಂಜಲಿ

$
0
0




ಸಂಸ್ಕೃತ ವಿದ್ವಾಂಸರು, ಖ್ಯಾತ ವಾಗ್ಮಿಗಳಾದ ಬನ್ನಂಜೆ ಗೋವಿಂದಾಚಾರ್ಯರು ಇಂದು ನಿಧನರಾಗಿದ್ದಾರೆ. ಉಡುಪಿಯ ಅಂಬಲಪಾಡಿಯ ಸ್ವಗೃಹದಲ್ಲಿ ಬನ್ನಂಜೆಯವರು ಇಂದು ಬೆಳಿಗ್ಗೆ ಅಸುನೀಗಿದರು. ಅವರಿಗೆ ೮೪ ವರ್ಷ ವಯಸ್ಸಾಗಿತ್ತು. ಬನ್ನಂಜೆ ಎಂದೇ ಪ್ರಸಿದ್ಧರಾಗಿದ್ದ ಅವರು ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಹಲವಾರು ಲೇಖನಗಳನ್ನು ಬರೆದಿದ್ದಾರೆ.

ಬನ್ನಂಜೆಯವರ ಕಿರಿಯ ಪುತ್ರ ಕೆಲ ದಿನಗಳ ಹಿಂದೆ ನಿಧನರಾಗಿದ್ದರು. ತತ್ಸಂಬಂಧದ ವಿಧಿಗಳನ್ನು ಮನೆಯಲ್ಲಿಯೇ ನಡೆಸಲಾಗುತ್ತಿತ್ತು.

ಬನ್ನಂಜೆ ಗೋವಿಂದಾಚಾರ್ಯ 1936 – 2020
"ನಾಡಿನ ಖ್ಯಾತ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು ನಮ್ಮನ್ನು ಅಗಲಿರುವುದು ಬಹಳ ದುಃಖದ ಸುದ್ದಿ. ಒಂದೇ ಮನೆಯಲ್ಲಿ ೧೨ ದಿನಗಳ ಅಂತರದಲ್ಲಿ ಎರಡು ಪೀಳಿಗೆಯ ಇಬ್ಬರು (ತಂದೆ-ಮಗ) ಕಾಲವಾದುದು ಅತ್ಯಂತ ನೋವಿನ ಸಂಗತಿ. ಬನ್ನಂಜೆಯವರು ಈ ತಲೆಮಾರಿನ ಮೇರು ವಿದ್ವಾಂಸರು, ಉದ್ದಾಮ ಲೇಖಕರು, ಪ್ರಭಾವೀ ವಾಗ್ಮಿಯಾಗಿದ್ದರು. ಭಾರತೀಯ ಸಂಸ್ಕೃತಿಯ ಶ್ರೇಷ್ಠ ವ್ಯಾಖ್ಯಾನಕಾರರು. ಅವರ ನಿಧನದಿಂದ ದೇಶದ ವಿದ್ವದ್ವಲಯಕ್ಕೂ ಸಾಂಸ್ಕೃತಿಕ ರಂಗಕ್ಕೂ ಅಪಾರ ನಷ್ಟ ಉಂಟಾಗಿದೆ. ಧ್ವನಿಮುದ್ರಿತವಾಗಿರುವ ಅವರ ವಾಣಿ-ವಿವೇಕ ನಾಡಿನ ಜನತೆಯನ್ನು ಮುಂದೆಯೂ ನಿಶ್ಚಿತವಾಗಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತವೆ. ಅವರ ಸ್ಮೃತಿ ಅಮರವಾಗಿರಲೆಂದು ಪ್ರಾರ್ಥಿಸಿ ನನ್ನ ನಮನಗಳನ್ನು ಅರ್ಪಿಸುತ್ತೇನೆ. ದಿವಂಗತ ಆತ್ಮಕ್ಕೆ ಸದ್ಗತಿ ದೊರೆಯಲಿ," ಎಂದು ಆರೆಸ್ಸೆಸ್ ಸಹಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಅಗಲಿದ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಕುರಿತು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಆರೆಸ್ಸೆಸ್ ಸಹಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ

The post ಖ್ಯಾತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ನಿಧನ - ಬಹಳ ದುಃಖದ ಸುದ್ದಿ : ದತ್ತಾಜಿ ಶ್ರದ್ಧಾಂಜಲಿ first appeared on Vishwa Samvada Kendra.

ಖ್ಯಾತ ಏರೋಸ್ಪೇಸ್ ವಿಜ್ಞಾನಿ ರೊಡ್ಡಮ್ ನರಸಿಂಹ ನಿಧನ. ಆರೆಸ್ಸೆಸ್ ಕ್ಷೇತ್ರ ಸಂಘಚಾಲಕ ವಿ ನಾಗರಾಜ್ ಸಂತಾಪ.

$
0
0

ಖ್ಯಾತ ಏರೋಸ್ಪೇಸ್ ವಿಜ್ಞಾನಿ ರೊಡ್ಡಮ್ ನರಸಿಂಹ ನಿಧನ, ಆರೆಸ್ಸೆಸ್ ಕ್ಷೇತ್ರ ಸಂಘಚಾಲಕ ವಿ ನಾಗರಾಜ್ ಸಂತಾಪ.

ಬೆಂಗಳೂರು, ೧೫ ಡಿಸೆಂಬರ್ : ಭಾರತದ ಖ್ಯಾತ ಏರೋಸ್ಪೇಸ್ ವಿಜ್ಞಾನಿ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರೊಡ್ಡಮ್ ನರಸಿಂಹ ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೮೭ ವರ್ಷ ವಯಸ್ಸಾಗಿತ್ತು. ಫ್ಲ್ಯೂಯಿಡ್ ಡೈನಾಮಿಕ್ಸ್ ವಿಷಯದಲ್ಲಿ ಅವರಿಗೆ ಹೆಚ್ಚಿನ ಅಭಿರುಚಿ ಇತ್ತು. ಬೆಂಗಳೂರಿನ ಐಐಎಸ್ಸಿ ಯಲ್ಲಿ ಏರೋಸ್ಪೇಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಪ್ರತಿಷ್ಠಿತ ನ್ಯಾಷನಲ್ ಏರೋಸ್ಪೇಸ್ ಲಾಬೊರೇಟರಿಯಲ್ಲಿ ನಿರ್ದೇಶಕರಾಗಿ ರೊಡ್ಡಮ್ ನರಸಿಂಹ ಕಾರ್ಯ ನಿರ್ವಹಿಸಿದ್ದರು.

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರೊಡ್ಡಮ್ ನರಸಿಂಹ, 1933-2020
ದೇಶ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾದ ರೊಡ್ಡಮ್ ನರಸಿಂಹ ಅವರ ಅಗಲುವಿಕೆ ಅತ್ಯಂತ ನೋವಿನ ಸಂಗತಿ. ವಿಜ್ಞಾನ ಮತ್ತು ಅಧ್ಯಾತ್ಮಗಳನ್ನು ಬೇರೆಬೇರೆಯಾಗಿ ನೋಡದೇ, ಅವೆರಡೂ ಒಂದಕ್ಕೊಂದು ಪೂರಕವೆಂಬ ದೃಷ್ಟಿಯಲ್ಲಿ ಕೆಲಸ ಮಾಡಿದವರು. ನಮ್ಮ ಗಡಿಸುರಕ್ಷೆಗಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವ ಬಗ್ಗೆ ಉತ್ತಮ ಸಲಹೆಗಳನ್ನು ಅವರು ಸರ್ಕಾರಕ್ಕೆ ನೀಡಿದ್ದರು. ಆರೆಸ್ಸೆಸ್ಸಿನ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಅವರು ಬೆಂಗಳೂರಿಗೆ ಬಂದಿದ್ದಾಗ ನಡೆದ ಭೇಟಿಯಲ್ಲಿ ದೇಶದ ಆಗುಹೋಗುಗಳ ಬಗ್ಗೆ ಉತ್ತಮ ಚರ್ಚೆ ನಡೆದಿತ್ತು. ಇಂದಿನ ಯುವಪೀಳಿಗೆಗೆ ಅವರ ಜೀವನ ಮತ್ತು ಸಾಧನೆಗಳು ಪ್ರೇರಣೆ ನೀಡುವಂಥವು. ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ವ್ಯಕ್ತಪಡಿಸುತ್ತದೆ. ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಹಾಗೂ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರ ಸಂಘಚಾಲಕರಾದ ವಿ ನಾಗರಾಜ್ ತಮ್ಮ ಸಂದೇಶದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರ ಸಂಘಚಾಲಕ, ವಿ ನಾಗರಾಜ್

The post ಖ್ಯಾತ ಏರೋಸ್ಪೇಸ್ ವಿಜ್ಞಾನಿ ರೊಡ್ಡಮ್ ನರಸಿಂಹ ನಿಧನ. ಆರೆಸ್ಸೆಸ್ ಕ್ಷೇತ್ರ ಸಂಘಚಾಲಕ ವಿ ನಾಗರಾಜ್ ಸಂತಾಪ. first appeared on Vishwa Samvada Kendra.


VHP extends cooperation with Sri Ram Janmabhoomi Teerth Kshetra Trust to collect monetary offerings from Hindu society.

$
0
0

22 Dec 2020, Bengaluru: Shri Alok Kumar, Supreme Court Advocate, Central Working President of the Vishva Hindu Parishad, Chief of Sri Rama Janmabhoomi Teerth Kshetra Trust’s Nidhi Samarpana Abhiyana addressed a press conference here in the city today. Sri Na Thippeswamy, Kshetriya Karyavah of the RSS’ Dakshina Madhya Kshetra comprising of states of Karnatka, Andhra, and Telangana was also present in the press conference. He is also the Secretary of the Sri Ram Janmabhoomi Mandira Nirmana Nidhi Samarpana Samiti. The Press conference was organised at Rashtrotthana Parishat. Among the other dignitaries present were, Sri Keshava Hegde VHP’s Kshetra’s Organising Secretary and Sri Basavaraj, VHP’s Sanghatana Karyadarshi of Karnataka Dakshina Pranth were also present.

Sri Alok Kumar and Sri Na THippeswamy in the press conference today

PRESS STATEMENT OF SHRI ALOK KUMAR, CENTRAL WORKING PRESIDENT, VHP ON TUESDAY, 22.12.2020

The Vishva Hindu Parishad (VHP) has resolved to extend all cooperation to Shri Ram Janmabhoomi Teerth Kshetra Trust for collecting monetary offerings from across the Hindu Society. The VHP workers will reach out to more than 4 Lakh villages and 11 Crore families for their contribution to the construction of Shri Ramjanmabhoomi Temple and other facilities in Ayodhya.

In the state of Karnataka, the VHP expects to reach more than 27500 villages and some 90 Lakhs devotees for obtaining the donations for the Mandir. Udupi Pejawar Math Swami Pujya Shri Vishva Prasanna Teerth is a Trustee of Shri Ram Janmabhoomi Teerth Kshetra. 

The collections would be made by coupons printed in the denomination of Rs. 10, Rs. 100 and Rs. 1000. The donations for Rs. 2000 or more shall be against receipt and the donor shall have the benefit of Section 80G of the Income Tax Act.

The collection tolis would be of 5 volunteers each. They would report to a depositor. All collections would be deposited in the bank account of the Teerth Kshetra within 48 hours. Every depositor will have a registered code number at the nearest branch of one of the three banks namely State Bank of India, Bank of Baroda and Punjab National Bank. Full transparency would be maintained in the collection. 

Larsen and Toubro have been engaged to construct the Temple. Tata Consultancy services would be the Engineers for the construction. Engineers from IIT Mumbai, IIT Delhi, IIT Chennai, IIT Guwahati, CBRI Roorkee, Larsen & Toubro are working on the foundation drawing. The whole temple will be of stone blocks.

The Temple would have a total area of 2.7 acres. The construction area is 57,400 sq. ft. The length of the Temple would be 360 ft with 235 ft. The Temple would be three storied structure and with 5 Mandaps. The number of columns would be 160 on the Ground Floor, 132 on the First Floor and 74 on the Second Floor.

It is expected that by 2024 Shri Ram Lala shall be established in the sanctum sanctorum of the main Temple and the devotees invited to have His darshan in the grand Temple. 

Along with the Temple are to come up, of the international standards Library, Archives, Museum, Research Centre, Yagnyashala, Ved Pathshala, Satsangh Bhawan, Prasad distribution centre, amphitheatre, Dharmshala, Exhibition and other facilities.

All means of audio visual communications and media outreach would be employed to take the message to the entire length and breadth of the country. Dr. Chandraprakash Dwivedi, a renowned name in the film world has prepared a documentary containing a brief history and objects of the campaign together with an appeal from the cine actor Shri Akshay Kumar for the promotion of the campaign.

The VHP believes that this is not a movement merely for one more Temple but is a conscious effort of Hindu rejuvenation, freeing the Society of its ills such as the feelings of high and low, to eradicate the deficiencies of poverty, health, education and skills, to restore the dignity of women, to eradicate the scourge of terrorism from the face of the world and to realise the vedic goals of Sarve Bhavantu Sukhinah – may all be happy, may all be healthy, may all be discriminating and wise and let nobody suffer from sorrows. The VHP considers this to be the world mission of Hindus and is confident of achieving it. 

The post VHP extends cooperation with Sri Ram Janmabhoomi Teerth Kshetra Trust to collect monetary offerings from Hindu society. first appeared on Vishwa Samvada Kendra.

ಸುಕೃತಿ ಪುಸ್ತಕ ಪರಿಚಯ ಸರಣಿ: ‘ಪುಸ್ತಕ ಪರಿಚಯ ಮಾಡಿಕೊಳ್ಳಿ –ಮಸ್ತಕ ಜ್ಞಾನ ವೃದ್ಧಿಸಿಕೊಳ್ಳಿ’

$
0
0
ಜಪಾನಿ ಭಾಷೆಯಲ್ಲಿ ಸುಂದೋಕು(Tsundoku) ಎಂಬ ಪದ ಬಳಕೆ ಇದೆಯಂತೆ. ಪುಸ್ತಕಗಳನ್ನು ರಾಶಿ ರಾಶಿ ಕೊಂಡು ಪೇರಿಸಿಟ್ಟುಕೊಂಡು ಯಾವುದನ್ನೂ ಓದದ ಅಭ್ಯಾಸಕ್ಕೆ ಸುಂದೋಕು ಎಂಬ ಹೆಸರು. ಹಾಗೆ ಮಾರುಕಟ್ಟೆಗೆ ಬರುವ ಎಲ್ಲಾ ಪುಸ್ತಕಗಳು ಒಂದೆಡೆಯಾದರೆ ಅವುಗಳಲ್ಲಿ ಓದಲೇಬೇಕಾದ ಪುಸ್ತಕ ಯಾವುದು? ಓದಿ ತಿಳಿದುಕೊಳ್ಳಲು ಯಾವುದರಿಂದ ಆರಂಭಿಸಬೇಕು? ಎಂಥಹ ಪುಸ್ತಕ ನನಗಿಷ್ಟವಾಗಬಹುದು ಎಂದು ತಿಳಿಸಲು ಮಾರ್ಗೋಪಾಯಗಳಿವೆಯೇ?…. ಹೀಗೆ ಪ್ರಶ್ನೆಯ ಸುರಿಮಳೆಯೇ ಆದೀತು. ಸುಕೃತಿ ಯವರ ಪುಸ್ತಕ ಪರಿಚಯದ ಕೆಲಸದ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಲಕ್ಷಾಂತರ ಪುಸ್ತಕಗಳಿವೆ. ನೂರಾರು ಪುಸ್ತಕಗಳು ಹೊಸದಾಗಿ ಪ್ರಕಾಶವಾಗುತ್ತಿರುತ್ತವೆ. ಪುಸ್ತಕ ಓದಬೇಕು ಎಂಬ ಹಂಬಲವಿದೆಯಾದರೂ ಪುಸ್ತಕಗಳ ರಾಶಿಯಲ್ಲಿ ಉತ್ತಮ ಪುಸ್ತಕ (ಸುಕೃತಿ) ಯಾವುದು ಎಂಬುದೇ ಅನೇಕರ ಪ್ರಶ್ನೆ. ಎಲ್ಲಾ ಪುಸ್ತಕವನ್ನು ಒಮ್ಮೆ ತಿರುವು ಹಾಕಿ ನಿರ್ಣಯ ಮಾಡಲು ಸಮಯವೂ ಇಲ್ಲ ಅಸಾಧ್ಯವೇ ಸರಿ. ಈ ಸಮಸ್ಯೆಗೆ ಉತ್ತರ ರೂಪದಲ್ಲಿ ‘ಸುಕೃತಿ’ ಪ್ರಯತ್ನ ಮಾಡುತ್ತಲಿದೆ. ‘ಸುಕೃತಿ’ಯು ಕನ್ನಡ ರಾಜ್ಯೋತ್ಸವ ನಿಮಿತ್ತ ನವೆಂಬರ್ ತಿಂಗಳಲ್ಲಿ ಪ್ರತಿನಿತ್ಯ ಕೆಲವು ಪುಸ್ತಕದ ಪರಿಚಯ ವಿಡಿಯೋಗಳನ್ನು ಪ್ರಕಟಿಸುತ್ತ, ‘ಕನ್ನಡ ಸಾಹಿತ್ಯದ ತೇರ’ನ್ನು ಎಳೆಯುತ್ತಿದೆ. ಕನ್ನಡ ಕೃತಿಗಳ ತಿಳಿಯೋಣ – ಕನ್ನಡ ಕಂಪನು ಸವಿಯೋಣ ಎಂಬ ಉದ್ದೇಶದಿಂದ ಆರಂಭವಾದ ಈ ಪುಸ್ತಕ ಪರಿಚಯದ ಕೆಲಸ ಈಗಾಗಲೇ ಸಾವಿರಾರು ಜನರನ್ನು ತಲುಪಿದೆ. ನವೆಂಬರ್ ತಿಂಗಳಿನಲ್ಲಿ ೬೦ಕ್ಕೂ ಹೆಚ್ಚು ಪುಸ್ತಕಗಳ ಪರಿಚಯ ಪ್ರಕಟಗೊಂಡಿವೆ. ಅಲ್ಲದೆ ಈ ವರ್ಷ ಪರಿಚಯ ಸರಣಿ ಆರಂಭವಾದಾಗಿನಿಂದ ೧೦೦ಕ್ಕೂ ಹೆಚ್ಚು ವಿಡಿಯೋ ಲಭ್ಯವಿದೆ.

ನವೆಂಬರ್ ತಿಂಗಳ ಪ್ರತಿ ದಿನವೂ ಕನಿಷ್ಠ ಎರಡು ಕನ್ನಡ ಪುಸ್ತಕಗಳ ಪರಿಚಯದ ವಿಡಿಯೋ ಸುಕೃತಿ ತನ್ನ ಫೇಸ್ಬುಕ್ (https://www.facebook.com/Sukruthi-Pustaka-Parichaya-100200858329401/) ಹಾಗೂ ಯೂಟ್ಯೂಬ್(https://www.youtube.com/channel/UCnGmEgIenhA8R8vBK43jqKA) ವಾಹಿನಿಗಳಲ್ಲಿ ಪ್ರಕಟಿಸಿತು. ಅಲ್ಲದೇ ಪ್ರತಿದಿನವೂ ಹೊಸ ಮುಖಗಳು ಪುಸ್ತಕ ಪರಿಚಯ ಮಾಡುತ್ತಿದ್ದರು.

ಸುಕೃತಿ ವಾಹಿನಿಯಲ್ಲಿ ಪರಿಚಯವಾದ ಸಾಕಷ್ಟು ಪುಸ್ತಕಗಳೂ ಅಪರೂಪದ ಕೃತಿಗಳೇ. ನೂರಾರು ಪುಸ್ತಕಗಳು ಪ್ರಕಟವಾಗುತ್ತಿರುವಾಗ, ಆ ಪುಸ್ತಕಗಳ ಪರಿಚಯ, ಲೋಕಾರ್ಪಣೆಯ ಸಮಯದಲ್ಲಿ ಹೆಚ್ಚು ಗಮನ ಸೆಳೆಯುತ್ತದೆ.

ಪುಸ್ತಕ ಲೋಕಾರ್ಪಣೆಯ ದಿನ ಅದನ್ನು ಓದಿದ ಮಹನೀಯರು ಪುಸ್ತಕದ ಬಗ್ಗೆ, ಅದರಲ್ಲಿನ ಹೂರಣವನ್ನು ಉಣಬಡಿಸುತ್ತಾರೆ. ಇನ್ನು ಬಿಡುಗಡೆಯಾಗಿ ಕೆಲ ವಾರಗಳಲ್ಲಿ ಭಾನುವಾರದ ವಿರಾಮದ ಓದಿಗೆ ಪತ್ರಿಕೆಯ ಪುರವಣಿಯಲ್ಲಿ ೨೦೦ ಶಬ್ದದ ಒಳಗಿನ ಪರಿಚಯವೂ ಆಗುತ್ತದೆ. ಕೆಲ ವಾರ ಪುಸ್ತಕ ಅಂಗಡಿಯಲ್ಲಿ ಟಾಪ್ ಟೆನ್ ಪುಸ್ತಕಗಳು ಎಂದು ಜನರು ಆಸಕ್ತಿಯಿಂದ ಕೊಳ್ಳುವ ಪುಸ್ತಕಗಳನ್ನು ಪತ್ರಿಕೆಯವರು, ಪುಸ್ತಕ ಅಂಗಡಿಯ ಮಾಲೀಕರು ಪ್ರಕಟಿಸುತ್ತಾರಾದರೂ, ಕೃತಿಯೊಂದರ ಪ್ರತಿ ಅಂಗಡಿಯಲ್ಲಿ ಸಿಗದೇ ಇದ್ದರೂ ಒಂದು ಕಾಲದಲ್ಲಿ ಅದು ಜನರನ್ನು ಆಕರ್ಷಿಸಿದ್ದ ಕೃತಿಗಳ ಪರಿಚಯ ದೂರ ಉಳಿದುಬಿಡುತ್ತದೆ.

ಇದನ್ನು ಮನದಲ್ಲಿಟ್ಟುಕೊಂಡು, ಸು-ಕೃತಿಯನ್ನು ಪರಿಚಯಿಸುವ ಕನಸು ಹೊತ್ತ ಬೆಂಗಳೂರಿನ ಪ್ರಮೋದ್ ನವರತ್ನ ಒಬ್ಬ ಐಟಿ ಉದ್ಯೋಗಿ, ಪುಸ್ತಕಗಳ ಅಪಾರ ಓದುಗ. ಹಲವಾರು ವೇದಿಕೆಗಳಲ್ಲಿ ಪುಸ್ತಕ ಪರಿಚಯವನ್ನು ಪ್ರೇರೇಪಿಸುತ್ತಿದ್ದ ಅವರು ಕರೋನಾ ಲಾಕ್ ದೌನ್ ಸಮಯದಲ್ಲಿ ವಿಡಿಯೋ ಮೂಲಕ ಪುಸ್ತಕ ಪರಿಚಯ ಮಾಡುವಂತೆ ತಮ್ಮ ಸ್ನೇಹಿತರನ್ನು ಕೇಳಿಕೊಂಡರು. ಕೆಲ ಉತ್ತಮ ವಿಮರ್ಶಕರ ಪರಿಚಯದ ವಿಡಿಯೋ ಸುಕೃತಿ ವಾಹಿನಿಯಲ್ಲಿ ಇವೆಯಾದರೂ ಪ್ರಕಟವಾದ ಪ್ರತಿಯೊಬ್ಬರೂ ಖ್ಯಾತ ವಿಮರ್ಶಕರಲ್ಲದಿದ್ದರೂ ಘನ ಓದುಗರು.

ವಿಡಿಯೋ ಇಂದಿನ ಯುಗದ ಸಂವಹನ ಮಾಧ್ಯಮ, ಆದರೆ ಎಲ್ಲರಿಗೂ ವಿಡಿಯೋ ತಯಾರಿಸುವ ಕೌಶಲ್ಯವಿರುವುದಿಲ್ಲ. ಎಲ್ಲರೂ ಉತ್ತಮ ವಾಗ್ಮಿಗಳೂ ಅಲ್ಲ. ಆದರೆ ಸಾಮಾನ್ಯಾತಿ ಸಾಮಾನ್ಯರನ್ನು ಪರಿಚಯ ಮಾಡಿಕೊಂಡು ಪುಸ್ತಕದ ಪರಿಚಯ ಮಾಡಿಸಿರುವ ಪ್ರಮೋದ್, ಹೀಗೆನ್ನುತ್ತಾರೆ: “ಐದಾರು ನಿಮಿಷದಲ್ಲಿ ಒಂದು ಪುಸ್ತಕ ಪರಿಚಯ ಸಾಧ್ಯವಾದರೆ, ತನ್ಮೂಲಕ ಇನ್ನಷ್ಟು ಜನರು ಆ ಪುಸ್ತಕ ಓದಿದಂತೆ ಮಾಡಿದರೆ ಸುಕೃತಿ ಕೆಲಸ ಸಾಧಿಸಿದಂತೆ. ಓದುಗರು ಕಡಿಮೆಯಾಗುತ್ತಿರುವಾಗ, ಓದುವ ಹವ್ಯಾಸವನ್ನು, ಜ್ಞಾನವನ್ನು ಹಂಚಿಕೊಳ್ಳುವ ಪ್ರಯತ್ನವನ್ನು ರೂಢಿಸಬೇಕೆಂದು ಈ ಸಾಹಸಕ್ಕೆ ಕೈ ಹಾಕಿದ್ದು!” ಇಂದಿನ ಡಿಜಿಟಲ್ ಯುಗದಲ್ಲಿ ‘ಸುಕೃತಿ’ಯು ವಿಶಿಷ್ಟವಾದ ರೀತಿಯಲ್ಲಿ ಸಾಹಿತ್ಯ ಪ್ರಸಾರವನ್ನು ಮಾಡುತ್ತಾ ಬಂದಿದೆ.

ಕುಮಾರವ್ಯಾಸ, ಡಿ,ವಿ.ಜಿ, ಬೇಂದ್ರೆ, ಕುವೆಂಪು, ಕಾರಂತ, ಡಾ. ಎಸ್ ಎಲ್ ಭೈರಪ್ಪ ಕೃತಿಗಳಿಂದ ಪ್ರಾರಂಭಿಸಿ ಈಗಿನ ಕೆ.ಎಸ್. ನಾರಾಯಣಾಚಾರ್ಯ, ಎಚೆಸ್ವಿ, ಶತಾವಧಾನಿ ಗಣೇಶ್, ಎ. ಆರ್. ಮಣಿಕಾಂತ್ ರವೆರೆಗೆ ಹಲವಾರು ಕವಿ-ಲೇಖಕರ ಒಂದೆರಡು ಸಾಹಿತ್ಯವನ್ನು ಆರಿಸಿಕೊಂಡಿದ್ದಾರೆ. ಕನ್ನಡ ನಾಡಿನಲ್ಲಿ ಸುಪರಿಚಿತರಾದ ಡಾ. ಶತಾವಧಾನಿ ಆರ್. ಗಣೇಶ್, ಸಾಹಿತಿ ವಿಮರ್ಶಕ ಡಾ. ಜಿ.ಬಿ ಹರೀಶ್, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತ ಕುಮಾರ್, ಮಾಳವಿಕಾ ಅವಿನಾಶ್, ಪ್ರಾಧ್ಯಾಪಕರಾದ ಡಾ. ಅಜಕ್ಕಳ ಗಿರೀಶ ಭಟ್, ಲೇಖಕರಾದ ಮಂಜುನಾಥ ಅಜ್ಜಂಪುರ ಮುಂತಾದವರಿಂದ ಮೊದಲ್ಗೊಂಡು ಉದಯೋನ್ಮುಖ ಸಾಹಿತ್ಯ ಪ್ರೇಮಿಗಳೂ ಮಾಡಿರುವ ಪುಸ್ತಕ ಪರಿಚಯ ಅವರ ವಾಹಿನಿಯಲ್ಲಿ ಕಾಣಸಿಗುತ್ತವೆ.

ನವೆಂಬರ್ ತಿಂಗಳಿನಲ್ಲಿ ಕಾನೂರು ಹೆಗ್ಗಡತಿ, ಮೈಸೂರು ಮಲ್ಲಿಗೆ, ತಬ್ಬಲಿಯು ನೀನಾದೆ ಮಗನೆ, ದೇವರು, ಹಸುರು ಹೊನ್ನು, ರಾಮಾಯಣ ದರ್ಶನಂ ಎಂಬ ಪ್ರಸಿದ್ಧ ಕೃತಿಗಳೂ ಅಲ್ಲದೆ, ಬಿಡಿಮುತ್ತು, ಕಾರಡಗಿ ಮಹಾಲ್, ನಾಗರಿಕ, ರಾಜಾವಳಿ ಕಥಾಸಾರ, ನಿರ್ಭಯಾಗ್ರಫಿ ಸೇರಿದಂತೆ ಹೆಚ್ಚು ಪರಿಚಯವಿಲ್ಲದ ಕೃತಿಗಳು ಇಲ್ಲಿ ಪರಿಚಯವಾಗಿವೆ.

ಪುಸ್ತಕದಿಂದ ಮಸ್ತಕ ಬೆಳಗಬೇಕು. ಋತಂ ಚ ಸ್ವಾಧ್ಯಾಯ ಪ್ರವಚನೇಚ। ಸತ್ಯಂ ಚ ಸ್ವಾಧ್ಯಾಯ ಪ್ರವಚನೇಚ।। ಎಂಬ ಸನಾತನ ಧರ್ಮದ ಜ್ಞಾನದಂತೆ, ನಿರಂತರ ಅಧ್ಯಯನ ನಮ್ಮೆಲ್ಲರಿಗೂ ಅಗತ್ಯ. ಸುಕೃತಿಯ ಈ ಪ್ರಯತ್ನದಿಂದ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳೂವುದರ ಜೊತೆಗೆ ಮತ್ತೊಬ್ಬರಿಗೂ ಆ ಗೀಳು ಹತ್ತಿಸಬಹುದಾಗಿದೆ. ಒಂದು ಪುಸ್ತಕದ ಓದು ಮತ್ತೊಂದಿಷ್ಟು ಹೊಸ ಪುಸ್ತಕಗಳನ್ನು ಓದಿಸುವಂತೆ ಮಾಡಲಿ. ಈ ವಿಡಿಯೋ ಪರಿಚಯದ ಮೂಲಕ, ಕೃತಿಯ ಸ್ವರೂಪದ ಸೂಕ್ಮತೆಯನ್ನು ಬಿತ್ತುವಂತೆ ಆಗಲಿ ಎಂದು ಕನ್ನಡದ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಸುಕೃತಿಯ ಸಮಾರೋಪದ ವಿಡಿಯೋ ಸಂದೇಶದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

“ಸುಕೃತಿ” ಫೇಸ್‌ಬುಕ್‌ ಪುಟದಲ್ಲಿ ಪ್ರಸಾರವಾಗುತ್ತಿರುವ ಪುಸ್ತಕ ಪರಿಚಯ ಸರಣಿಯು ಪುಸ್ತಕ ಪ್ರೇಮಿಗಳು ಮತ್ತು ಸಾಹಿತ್ಯಾಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಾಡಿನ ಗಣ್ಯರು, ಸಾಹಿತಿಗಳು, ಪುಸ್ತಕ ಪ್ರಿಯ ಯುವ ಮನಸ್ಸುಗಳನ್ನು ಒಂದೆಡೆ ಕಲೆಹಾಕಿ ಕನ್ನಡದ ಅಪರೂಪದ ಪುಸ್ತಕಗಳನ್ನು ಪರಿಚಯಿಸುವ ಮೂಲಕ ಕನ್ನಡಕ್ಕೂ, ಪುಸ್ತಕಕ್ಕೂ ಧನಾತ್ಮಕ ಕೊಡುಗೆಯನ್ನು ನೀಡಿದೆ.‌ ಕನ್ನಡಿಗರು ಮರೆತಿರಬಹುದಾದ ಮತ್ತು ಎಂದಿಗೂ ಮರೆಯಬಾರದ ಪುಸ್ತಕಗಳ ಆಯ್ಕೆ ಮಾಡಿಕೊಂಡಿರುವುದು ಮಹತ್ವದ ವಿಷಯ ಎಂದು ಆರೆಸ್ಸೆಸ್, ಕರ್ನಾಟಕದ ಪ್ರಚಾರ ಪ್ರಮುಖರಾದ ಶ್ರೀ ಪ್ರದೀಪ್ ಅಭಿಪ್ರಾಯಪಟ್ಟಿದ್ದಾರೆ. ಸುಕೃತಿ ತಂಡದಿಂದ ಇನ್ನಷ್ಟು ಪುಸ್ತಕ ಮತ್ತು ಸಾಹಿತ್ಯ ಸೇವೆ ನಡೆಯಲಿ ಎಂದು ಆಶಿಸುತ್ತಾ, ಫೇಸ್‌ಬುಕ್‌ ಪುಟದ ಅಡ್ಮಿನ್ ತಂಡಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.

ಈ ಮೂಲಕ ಹೊಸಬರಿಗೆ ಅವಕಾಶ ಸಿಗುತ್ತದೆ, ಜ್ಞಾನಾರ್ಜನೆಯಾಗುತ್ತದೆ, ವಿಡಿಯೋಗಳಲ್ಲಿ ಮಾತನಾಡುವುದು ಕಲಿತಂತಾಗುತ್ತದೆ ಎಂದು ಹಲವಾರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪುಸ್ತಕ ಪರಿಚಯದ ವಿಡಿಯೋ, ವಿಷಯವನ್ನು ಆಧರಿಸಿ ಸರಣಿ ರೂಪದಲ್ಲಿ ಸುಕೃತಿ ಪುಸ್ತಕ ಪರಿಚಯವನ್ನು ಮಾಡುವ ವ್ಯವಸ್ಥೆ ಮಾಡಿಕೊಂಡಿದೆಯಂತೆ.

The post ಸುಕೃತಿ ಪುಸ್ತಕ ಪರಿಚಯ ಸರಣಿ: 'ಪುಸ್ತಕ ಪರಿಚಯ ಮಾಡಿಕೊಳ್ಳಿ - ಮಸ್ತಕ ಜ್ಞಾನ ವೃದ್ಧಿಸಿಕೊಳ್ಳಿ' first appeared on Vishwa Samvada Kendra.

ನಾವೇಕೆ ಅವರಂತಿರಬಾರದೆಂದು ನಮ್ಮನ್ನು ಪ್ರಶ್ನಿಸುವ ಪುಸ್ತಕ –‘ಇದ್ದರಿಂಥವರೆಮ್ಮ ನಡುವಲಿ’

$
0
0

ಪುಸ್ತಕ ಪರಿಚಯ: ಪ್ರವೀಣ್ ಪಟವರ್ಧನ್

“ಇದ್ದರಿಂಥವರೆಮ್ಮ ನಡುವಲಿ” ಎಂಬುದು ಹಿರಿಯ ಸಂಸ್ಕೃತ ವಿದ್ವಾಂಸರು ಹಾಗೂ ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ನಾನಾ ಪುಸ್ತಕಗಳ ಕರ್ತೃ ಡಾ. ಎಚ್ ಆರ್ ವಿಶ್ವಾಸ ಅವರ ನೂತನ ಕೃತಿ. ತಮ್ಮನ್ನು ಹಲವು ರೀತಿಯಲ್ಲಿ ಪ್ರೇರೇಪಿಸಿರುವ  ಮಹನೀಯರ ಬಗೆಗಿನ ಬರಹಗಳುಳ್ಳ ಕೃತಿ “ಇದ್ದರಿಂಥವರೆಮ್ಮ ನಡುವಲಿ” ಆಗಿದೆ. ಪ್ರಸ್ತುತ, ಡಾ. ವಿಶ್ವಾಸರು ಸಂಸ್ಕೃತ ಭಾರತೀಯ ಅಖಿಲ ಭಾರತೀಯ ಶಿಕ್ಷಣ ಪ್ರಮುಖ್ ಜವಾಬ್ದಾರಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. 

ಸಂಸ್ಕೃತ ಭಾರತಿ, ಹಿಂದೂ ಸೇವಾ ಪ್ರತಿಷ್ಠಾನದ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದು ಸಂಸ್ಕೃತ ಸರಳ ಭಾಷೆ, ಅದನ್ನು ಎಲ್ಲರೂ ನಿತ್ಯ ವ್ಯವಹಾರದಲ್ಲಿ ಬಳಸಬಹುದು ಹಾಗೂ ಎಲ್ಲರೂ ಸಂಸ್ಕೃತದಲ್ಲಿ ಸಂವಾದ ನಡೆಸುವಂತಾಗಲಿ ಎಂಬ ಉದ್ದೇಶದಿಂದ. ಸಂಸ್ಕೃತ ಭಾರತೀಯ ಆರಂಭದ ದಿನಗಳಿಂದ ಅನ್ಯಾನ್ಯ ಜವಾಬ್ದಾರಿಗಳಲ್ಲಿ ಹಲವರನ್ನು ಡಾ. ವಿಶ್ವಾಸರು ಸಂದರ್ಶಿಸಿದ್ದಾರೆ. ೮೦ರ ದಶಕದಲ್ಲಿ ಚ.ಮು. ಕೃಷ್ಣಶಾಸ್ತ್ರಿಗಳು, ಜನಾರ್ದನ ಹೆಗಡೆ ಇವರ ಜೊತೆ ಡಾ. ವಿಶ್ವಾಸರು ಸಂಸ್ಕೃತವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿದರು.

ಸಂಘಟನೆಯ ಕೆಲಸದ ವೈಖರಿ, ಸಂಸ್ಕೃತವನ್ನು ಜನಪ್ರಿಯಗೊಳಿಸುವುದಷ್ಟೇ ಅಲ್ಲದೇ, ಆ ಭಾಷೆಯನ್ನು  ಜನರಿಗೆ ಪ್ರಿಯಗೊಳಿಸುವ ಪಾವನ ಪುಣ್ಯ ಕೆಲಸವನ್ನು ಸಂಘಟನಾತ್ಮಕವಾಗಿ ರೂಪಿಸುವುದು ಹೇಗೆ ಎಂಬ ಬಗ್ಗೆ ಆರೆಸ್ಸೆಸ್ ನ ಹಿರಿಯರ ಸಂಪರ್ಕ, ಒಡನಾಟ, ಮಾರ್ಗದರ್ಶನ, ಡಾ. ವಿಶ್ವಾಸ ಅವರಿಗೆ ದೊರೆಯತೊಡಗಿತು. ಈ ಒಡನಾಟ ವಿಶ್ವಾಸರಿಗೆ ದೊರೆತದ್ದು ತಮ್ಮ ಸಂಸ್ಕೃತದ ಕೆಲಸವನ್ನು ಹೆಗಲಿಗೆ ಹೊತ್ತ ಮೇಲೆಯೇ. ಪ್ರತಿಯೊಬ್ಬರಿಂದಲೂ ಕಲಿಯಲು ಅಂಶಗಳಿದ್ದವಾದ್ದರಿಂದ, ಆ ಅಂಶಗಳನ್ನು ರೂಢಿಸಿಕೊಂಡಲ್ಲಿ  ಓದುಗರೂ ಲಾಭ ಪಡೆಯುತ್ತಾರೆಂಬ ಉದ್ದೇಶ ಈ ಪುಸ್ತಕದ್ದು ಎಂಬುದು ನನ್ನ ಅನಿಸಿಕೆ. ಅಲ್ಲದೆ ಇಡಿಯ ಪುಸ್ತಕದಲ್ಲಿ ಆ ಅಂಶಗಳನ್ನು ರಸವತ್ತಾಗಿ ಲೇಖಕರು ಕಟ್ಟಿಕೊಟ್ಟಿದ್ದಾರೆ.

ಸಂಘದ ಪ್ರಚಾರಕರು ಹೇಗಿರುತ್ತಾರೆ ಎಂಬುದು ಸಂಘವನ್ನು ಹತ್ತಿರದಿಂದ ನೋಡಿದವರಿಗಷ್ಟೇ ತಿಳಿದಿರುತ್ತದೆ. ತಮ್ಮ ಇಡಿಯ ಜೀವನವನ್ನು ದೇಶದ ಕೆಲಸಕ್ಕೆ ಹವಿಸ್ಸಾಗಿ ಅರ್ಪಿಸಿರುವ ಹಲವಾರು ಸಂಘದ ಪ್ರಚಾರಕರಿದ್ದಾರೆ. ತಾವು ಹತ್ತಿರದಿಂದ ಕಂಡ ಪ್ರಚಾರಕರನ್ನು ಕುರಿತು ತಮ್ಮ ಪುಸ್ತಕದಲ್ಲಿ ಕಿರು ಲೇಖನಗಳ ಮೂಲಕ ಡಾ. ವಿಶ್ವಾಸ ಬರೆದಿದ್ದಾರೆ. ಹಾಗೆಂದು ಕೇವಲ ಸಂಘದ ಪ್ರಚಾರಕರನ್ನೇ ಕುರಿತು ಬರೆದ ಲೇಖನಗಳು ಪುಸ್ತಕದಲ್ಲಿಲ್ಲ. ವಿದ್ವಾನ್ ರಂಗನಾಥಶರ್ಮ, ಪ್ರೊ. ಮುಡಂಬಡಿತ್ತಾಯ, ಪತ್ರಕರ್ತ ಮಾಗಡಿ ಗೋಪಾಲಕಣ್ಣನ್, ಬಿ.ಎಸ್. ರಾಮಕೃಷ್ಣ ರಾವ್, ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕ ಜಿ.ವಿ. ಅಯ್ಯರ್ ಅವರ ಕುರಿತಾದ ಲೇಖನಗಳೂ ಇವೆ. ಒಟ್ಟಿನಲ್ಲಿ ಡಾ. ವಿಶ್ವಾಸಾರ ಸುದೀರ್ಘ ಸಂಸ್ಕೃತ ಪಯಣದಲ್ಲಿ ಬಂದ ವಿವಿಧ ಸಹಪ್ರಯಾಣಿಕರ ಕಥೆಗಳು ಚೆನ್ನಾಗಿ ಮೂಡಿಬಂದಿವೆ. 

ಕರ್ನಾಟಕದಲ್ಲಿ ಸಂಘಕಾರ್ಯವನ್ನು ಬೆಳೆಸಿದ ಯಾದವರಾವ್ ಜೋಶಿ ಅವರು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಬಹುದಾಗಿದ್ದವರು. ಡಾಕ್ಟರ್ ಜಿ ಅವರ ಸಂಪರ್ಕಕ್ಕೆ ಬಂದು ದೇಶದ ಕೆಲಸದಲ್ಲಿ ಮುಂದಾದವರು. ಅವರಿಗಿದ್ದ ಸಂಸ್ಕೃತ ಸುಭಾಷಿತ, ಲೋಕೋಕ್ತಿಗಳ ಪರಿಚಯ, ಜ್ಞಾನದ ಕಿರು ಪರಿಚಯ ಡಾ. ವಿಶ್ವಾಸ ಮಾಡಿಕೊಡುತ್ತಾರೆ.

ಪುಸ್ತಕ ಖರೀದಿಸಲು:

ಇನ್ನು ಸಂಘದ ಸರಕಾರ್ಯವಾಹರಾಗಿದ್ದ ಹೊ.ವೆ. ಶೇಷಾದ್ರಿಗಳ ಧ್ಯೇಯತಪಸ್ವಿ ಸ್ವಭಾವ, ಪ್ರಚಾರಕ್ಕೆ ಎಂದೂ ಗಂಟು ಬೀಳದೇ, ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದ,  ಸಾಹಿತ್ಯ ಸೃಷ್ಟಿಗಾಗಿ ಬರೆಯದೇ ಕಾರ್ಯಕರ್ತರನ್ನು ರೂಪಿಸುವ ಸಲುವಾಗಿ ಉತ್ಕೃಷ್ಟ ಬರಹಗಳನ್ನು ಕೊಟ್ಟ ಶೇಷಾದ್ರಿಗಳ ಬಗ್ಗೆ, ಸಂಘದ ಜವಾಬ್ದಾರಿಗಳನ್ನು ಹೊಸ ತಲೆಮಾರಿನವರು ಹೊತ್ತುಕೊಳ್ಳಬೇಕು ಎಂದು ಪ್ರತಿಪಾದಿಸಿ, ತಾವೊಬ್ಬ ಸಂಘದ ನಿಷ್ಠಾವಂತ ಕಾರ್ಯಕರ್ತರಷ್ಟೇ ಎಂದು ಬದುಕಿದ್ದ ಕೃ. ಸೂರ್ಯನಾರಾಯಣ ರಾವ್, ಸಂನ್ಯಾಸಿಯಾಗದಿದ್ದರೂ ಅವರಂತೆ ಮಾರ್ಗದರ್ಶನ ಮಾಡಬಲ್ಲ, ಗೃಹಸ್ಥಾಶ್ರಮ ಕಾಣದಿದ್ದರೂ ಕುಟುಂಬಗಳಿಗೆ ಹಿಂದೂ ಸಂಸ್ಕೃತಿಯನ್ನು ಬೋಧಿಸುವ, ಹಲವರಿಗೆ ಪ್ರೇರಕ ಶಕ್ತಿಯಾದ, ಸಂಘದ ವಲಯವಲ್ಲದೇ ಸಮಾಜವೇ ಬಹುವಾಗಿ ಇಷ್ಟಪಡುತ್ತಿದ್ದ ನ ಕೃಷ್ಣಪ್ಪನವರ ಬಗ್ಗೆ ತಲಾ ಒಂದು ಲೇಖನವಿದೆ.

ಎರಡು ಇಂಜಿನಿಯರಿಂಗ್ ಚಿನ್ನದ ಪದಕ ಗಳಿಸಿದ್ದ, ದೊಡ್ಡ ಕೆಲಸಕ್ಕೆ ಸೇರಿಕೊಂಡು ಜೀವನ ಸುಗಮವಾಗಿಸಿಕೊಳ್ಳಬಹುದಾಗಿದ್ದರೂ, ಜೀವನವನ್ನು ಸಮಾಜದ, ಸಂಘಟನೆಯ ಕೆಲಸಕ್ಕೆ ತೊಡಗಿಸಿಕೊಂಡು, ಯೋಗ ಶಿಕ್ಷಕರಿಗೆ ಅತ್ಯುತ್ತಮ ಪಠ್ಯವೆನಿಸುವ ‘ಯೋಗಪ್ರವೇಶ’ ವೆಂಬ ಪುಸ್ತಕ ಬರೆದ, ಅಜಿತ್ ಕುಮಾರ್, ಸಂಘದ, ಕಾರ್ಯಾಲಯದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ, ಕೆ.ಎಸ್. ನಾಗಭೂಷಣ, ಅಮೋಘ ಪಾಂಡಿತ್ಯ, ಜ್ಞಾನ, ವಾಕ್ಪಟುತ್ವ ಬಳಸಿ ಇಡಿಯ ದೇಶಕ್ಕೆ ಭಾರತ ದರ್ಶನ ನೀಡಿದ ವಿದ್ಯಾನಂದ ಶೆಣೈ, ಹೊಸ ಪರಿಕಲ್ಪನೆಗಳನ್ನು ಯೋಜಿಸಿ, ದೂರದರ್ಶನದ ಖಾಸಗಿ ವಾಹಿನಿಯವರು ಆ ಯೋಜನೆಗಳನ್ನು ಕಾರ್ಯಕ್ರಮಗಳನ್ನಾಗಿ ಪರಿವರ್ತಿಸುವಲ್ಲಿ ಸಾಧಿಸಿದ ಚಕ್ರವರ್ತಿ ತಿರುಮಗನ್ ಜೊತೆಗಿನ ಡಾ. ವಿಶ್ವಾಸರ ಒಡನಾಟ ಪುಸ್ತಕದಲ್ಲಿ ಓದಲು ದೊರೆಯುತ್ತದೆ.

ಸಂಸ್ಕೃತ ವಿದ್ವಾಂಸರಾದ ರಂಗನಾಥ ಶರ್ಮರ ಪಾಂಡಿತ್ಯ, ಮಾಗಡಿ ಗೋಪಾಲಕಣ್ಣನ್ ಎಂಬ ಅಪರೂಪದ ಸೌಮ್ಯ ಸ್ವಭಾವದ ಪತ್ರಕರ್ತ, ಶಿಕ್ಷಣ ಕ್ಷೇತ್ರದ ಸಾಧಕ ಮುಡಂಬಡಿತ್ತಾಯ (ನನ್ನಂಥಹ ಸ್ಟೇಟ್ ಸಿಲಬಸ್ ನಲ್ಲಿ ಓದಿದವರಿಗೆ ಪ್ರತಿ ವರ್ಷದ ಪಠ್ಯ ಪುಸ್ತಕದಲ್ಲಿ ಕಾಣುತ್ತಿದ್ದ ಹೆಸರು), ಸಂಸ್ಕೃತ ಆಂದೋಲನ, ಭಾಷೆಯ ಬಗೆಗಿನ ಚಟುವಟಿಕೆಗಳಿಗೆ ನಿಷ್ಠುರವಾಗಲೂ  ಸಿದ್ಧರಿದ್ದ ಬಿ.ಎಸ್. ರಾಮಕೃಷ್ಣ ರಾವ್, ತಾವು ನಡೆದದ್ದೇ ದಾರಿ ಎಂಬಂತೆ ಬದುಕಿಯೂ, ಸಾಧನೆಯ ಹಾದಿಯಲ್ಲಿ ಮುನ್ನಡೆದ ಜಿ.ವಿ. ಅಯ್ಯರ್ ಬಗ್ಗೆ ಲೇಖನಗಳಿವೆ. 

ಲೇಖಕರೇ ನಿವೇದಿಸಿಕೊಂಡಂತೆ ಈ ಲೇಖನಗಳು ಹಿಂದೊಮ್ಮೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವಂಥವು. 14 ಲೇಖನಗಳಲ್ಲಿ 13 ವಿಶೇಷ ವ್ಯಕ್ತಿಗಳ ಗುಣಗಳ ಸಂಕ್ಷಿಪ್ತ ಪರಿಚಯ ಈ ಕೃತಿ ಮಾಡಿಕೊಡುತ್ತದೆ (ಕನ್ನಡದ ಸಿನಿಮಾ ನಿರ್ದೇಶಕರಾದ ಜಿ ವಿ ಅಯ್ಯರ್ ಕುರಿತಾಗಿ 2 ಲೇಖನಗಳಿವೆ). ಲೇಖಕರು ಬರೆದಿರುವ ಮಹನೀಯರ ಬಗ್ಗೆ ಹಲವಾರು ಲೇಖನ ಪುಸ್ತಕಗಳು ಪ್ರಕಟವಾಗಿವೆ. ಆದರೆ ಈ ಪುಸ್ತಕ ವಿಶೇಷವೆನಿಸುವುದು ಆ ಮಹನೀಯರ ಕೆಲ ಗುಣಗಳು ಹಾಗೂ ಅವು ನಮ್ಮನ್ನು ಕಾಡುವ ಬಗ್ಗೆ. ನಾವೇಕೆ ಅವರಂತಿರಬಾರದೆಂಬುದು ಆಗ್ಗಾಗ್ಗೆ ಪ್ರಶ್ನಿಸುವಂತೆ ಮಾಡುತ್ತದೆ. ಬಿಡಿ ಬಿಡಿ ಲೇಖನಗಳಾದ್ದರಿಂದ ಒಂದ್ಕಕೊಂದು ಸೇರಿಸಿಕೊಳ್ಳದೆಯೇ ಓದಬಹುದಾಗಿದೆ. ಸಂಪೂರ್ಣ ಪುಸ್ತಕ ಓದಿದ ಮೇಲೆ, ವಿಷಯ ಪುನರಾವರ್ತಿಸಿದೆ ಎಂಬ ಅಂಶ ಒಂದೆರಡು ಕಡೆ ಅನಿಸುತ್ತದಾದರೂ, ಬಿಡಿ ಲೇಖನಗಳಾದ್ದರಿಂದ ಈ ಆವರ್ತನೆ ಅಗತ್ಯವೆನಿಸುತ್ತದೆ. 

ಸಂಸ್ಕೃತ ಭಾರತೀಯ ಅಖಿಲ ಭಾರತ ಸಂಘಟನ ಮಂತ್ರಿ ಶ್ರೀ ದಿನೇಶ್ ಕಾಮತರ ಮುನ್ನುಡಿ ಈ ಪುಸ್ತಕಕ್ಕಿದೆ. ಪ್ರತಿ ವ್ಯಕ್ತಿಯ ರೇಖಾ ಚಿತ್ರಗಳನ್ನು ಒದಗಿಸಿರುವ ಶ್ರೀ ಸುಧಾಕರ ದರ್ಬೆಯವರ ಅಮೋಘ ಮುಖಪುಟ ವಿನ್ಯಾಸ ಲೇಖನಕ್ಕೂ ಸರಿಯಾಗಿ ಹೊಂದುತ್ತವೆ. 

ಮುಂದಿನ ದಿನಗಳಲ್ಲಿ ಇದೇ ಶೀರ್ಷಿಕೆಯಲ್ಲಿ ತಮ್ಮ ಪ್ರಯಾಣದ ಇನ್ನಷ್ಟು ಪಯಣಿಗರನ್ನು ಡಾ. ವಿಶ್ವಾಸರು ಪರಿಚಯಿಸುತ್ತಾರೆಂದು ನಂಬುತ್ತೇನೆ.

ಪುಸ್ತಕ ಪರಿಚಯ: ಪ್ರವೀಣ್ ಪಟವರ್ಧನ್

The post ನಾವೇಕೆ ಅವರಂತಿರಬಾರದೆಂದು ನಮ್ಮನ್ನು ಪ್ರಶ್ನಿಸುವ ಪುಸ್ತಕ - 'ಇದ್ದರಿಂಥವರೆಮ್ಮ ನಡುವಲಿ' first appeared on Vishwa Samvada Kendra.

ಅವರದು ರಕ್ತಸಿಕ್ತ ಕ್ರೌರ್ಯ, ಇವರದು ತಣ್ಣನೆಯ ಕ್ರೌರ್ಯ ಪರಂಪರೆ

$
0
0

ಕ್ರಿ.ಶ. 1590  ಮತ್ತು 1812ರ ನಡುವೆ ಗೋವಾದಲ್ಲಿ ಕ್ರೈಸ್ತರು ನಡೆಸಿದ ತಣ್ಣನೆಯ ಕ್ರೌರ್ಯದ ಚಿತ್ರಣ ಅಂದಿನ ಸಾಮಾಜಿಕ ಸನ್ನಿವೇಶವನ್ನು ಲೇಖಕ ಟಿ.ಎ.ಪಿ. ಶೆಣೈ ಅವರು ಈ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.

ಪುಸ್ತಕ ಪರಿಚಯ: ಉಮೇಶ್ ಕುಮಾರ್ ಶಿಮ್ಲಡ್ಕ, ಪತ್ರಕರ್ತ

ಸಾಮಾಜಿಕ, ರಾಜಕೀಯ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಸೂಕ್ಷ್ಮಜೀವಿಗಳ ಮನಸ್ಸಿಗೆ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅವರಲ್ಲಿ ಅನೇಕರು ಅವುಗಳ ದಾಖಲೀಕರಣದ ಕೆಲಸವನ್ನೂ ಮಾಡುತ್ತ ಸಾಗಿದ್ದಾರೆ ಕೂಡ. ಇಂತಹ ದಾಖಲೆಗಳೇ ಮುಂದಿನ ತಲೆಮಾರಿನಲ್ಲಿರುವ ಸೂಕ್ಷ್ಮಜೀವಿಗಳಿಗೆ ಆಕರವಾಗಿಬಿಡುತ್ತವೆ. ತುಲನೆಮಾಡಿ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಅಂಥದ್ದೊಂದು ಪುಸ್ತಕ ರಾಷ್ಟ್ರೋತ್ಥಾನ ಸಾಹಿತ್ಯ ೨೦೧೩ರಲ್ಲಿ ಪ್ರಕಟಿಸಿದ ’ಕ್ರೈಸ್ತ ಕ್ರೌರ್ಯ ಪರಂಪರೆ’. ಟಿ.ಎ.ಪಿ. ಶೆಣೈ ಇದರ ಲೇಖಕರು.

ಕ್ರೈಸ್ತ ಮತದ ಹುಟ್ಟು, ಧಾರ್ಮಿಕವಾಗಿ ಅದರ ವಿಸ್ತರಣೆಗಿಂತಲೂ ರಾಜಕೀಯವಾಗಿ ಅದರ ವಿಸ್ತರಣಾ ದಾಹ, ಜಗತ್ತನ್ನೇ ಸ್ವಾಧೀನಿಸುವುದಕ್ಕಾಗಿ ನಡೆಸಿದ, ನಡೆಸುತ್ತಿರುವ ತಣ್ಣನೆಯ ಕ್ರೌರ್ಯ ಪರಂಪರೆಗೆ ಕೈಗನ್ನಡಿ ಇದು. ಲೇಖಕರೇ ತಿಳಿಸಿರುವಂತೆ ನೀಳ್ಗತೆಯೊಂದರ ರೂಪದಲ್ಲಿ ಕ್ರೈಸ್ತ ಇತಿಹಾಸದ ಚೌಕಟ್ಟಿನೊಳಗೆ ಹುದುಗಿಕೊಂಡಿದ್ದ ಅನೇಕ ಘಟನಾವಳಿಗಳನ್ನು ಜೋಡಿಸಿಕೊಟ್ಟಿದ್ದಾರೆ. ಕ್ರೂಸೇಡ್ ಮತ್ತು ಇನ್ಕ್ವಿಜಿಷನ್ ಎಂಬ ಎರಡು ಪರಿಕಲ್ಪನೆಯ ಚಿತ್ರಣವೂ ಗಮನಸೆಳೆಯುತ್ತದೆ. ಜಗತ್ತಿನಾದ್ಯಂತ ಇದರ ಪ್ರಯೋಗ ಹೇಗಾಯಿತು ಎಂಬುದರ ವಿವರಣೆಯೂ ಇದ್ದು, ವಿಶೇಷವಾಗಿ ಕ್ರಿ.ಶ. ೧೫೯೦ ಮತ್ತು ೧೮೧೨ರ ನಡುವೆ ಗೋವಾದಲ್ಲಿ ಕ್ರೈಸ್ತರು ನಡೆಸಿದ ತಣ್ಣನೆಯ ಕ್ರೌರ್ಯದ ಚಿತ್ರಣ ಅಂದಿನ ಸಾಮಾಜಿಕ ಸನ್ನಿವೇಶದ ಕಲ್ಪನೆಗೆ ಅವಕಾಶ ಮಾಡಿಕೊಡುತ್ತದೆ.

ಕ್ರೂಸೇಡ್ ಮತ್ತು ಇಂಕ್ವಿಸಿಷನ್

ಕ್ರೂಸೇಡುಗಳ ಬಗ್ಗೆಯೂ ತಿಳಿದುಕೊಳ್ಳುವುದು ಅವಶ್ಯ. ಕ್ರೂಸೇಡ್ ಯುಗ ಎಂಬ ಮೊದಲ ಅಧ್ಯಾಯದಲ್ಲಿ ಈ ಬಗ್ಗೆ ವಿವರಣೆ ಹೀಗಿದೆ – ಮುಸ್ಲಿಂ ದೇಶಗಳ ಮತೀಯತೆಯು ಬರ್ಬರತೆಗೆ ಕಾರಣವಾದಂತೆ ಕ್ರೈಸ್ತ ದೇಶಗಳ ಮನಸ್ಸನ್ನು ನಿರ್ಮಿಸಿದ ಅವುಗಳ ಮತ ಪಂಥಗಳ ಜಾಡನ್ನೂ ಗಮನಿಸಬೇಕು. ಕ್ರೈಸ್ತಮತದ ವಿಸ್ತರಣಕಾಲದಲ್ಲಿ ಈ ದೇಶಗಳು ‘ಧರ್ಮಯುದ್ಧ’ದ ಹೆಸರಿನ ಕ್ರೂಸೇಡ್‌ಗಳ ಮೂಲಕ ದೇಶದೇಶಗಳ ಮೇಲೆ ಲಗ್ಗೆ ಇಟ್ಟವು. ಈ ಕ್ರೂಸೇಡುಗಳು ಪ್ರಾರ್ಥನೆ, ದಾನ, ಚರ್ಚುಗಳ ಚಟುವಟಿಕೆಗಳಿಗಷ್ಟೇ ಅಲ್ಲದೆ ಹಿಂಸೆಗೂ ಕೂಡಾ ಹೊಸ ವ್ಯಾಖ್ಯಾನವನ್ನು ನೀಡಿದವು. ಮತ ವಿಚಾರಗಳ ವಿಚಾರಣೆಯ ಇಂಕ್ವಿಸಿಷನ್‌ಗಳು ಕ್ರೈಸ್ತಮತವನ್ನು ಒಪ್ಪದವರ ಮೇಲೆ ಅತ್ಯಾಚಾರ ನಡೆಸಿದವು. ಈಗಲೂ ಅವು ಅನಸುರಿಸುತ್ತಿರುವ ಭಾವನಾರಹಿತ ಮತಾಂತರದ ವ್ಯವಹಾರಗಳು ಕ್ರೈಸ್ತ ಕ್ರೌರ್ಯಕ್ಕೆ ಕನ್ನಡಿ ಹಿಡಿಯುತ್ತವೆ.

ಇದೇ ರೀತಿ, ಇಂಕ್ವಿಸಿಷನ್ ಕುರಿತ ವಿವರಣೆ ತಿಳಿದುಕೊಳ್ಳಬೇಕು. ಅದನ್ನು ಲೇಖಕರು ಹೇಳುವುದು ಹೀಗೆ: ‘ಕ್ರೈಸ್ತ ಕರುಣೆಯ ಮುಖವಾದ ಹಿಂದೆ ಕ್ರೂಸೇಡಿಗಿಂತ ಕ್ರೂರವಾದ ಚರಿತ್ರೆಯ ಭಾಗವಿದ್ದರೆ ಅದು ಇಂಕ್ವಿಸಿಷನ್‌ಗಳು. ಕ್ರೈಸ್ತಮತ ‘ಪಾವಿತ್ರ ’ವನ್ನು ಉಳಿಸಿಕೊಳ್ಳಲು ನಡೆದ ಈ ‘ವಿಚಾರಣೆ’ಗಳು ನೀಡಿದ ‘ತೀರ್ಪು’ಗಳು, ಇದಕ್ಕೆ ಬಲಿಯಾದ ನಿರಪರಾಧಿಗಳು ಹಾಗೂ ಅದನ್ನು ಎದುರಿಸಿದ ಧೀಮಂತ ಜೀವಗಳದ್ದೇ ಒಂದು ವಿಸ್ತಾರವಾದ ಕಥೆ, ಕ್ರೌರ್ಯ, ದಬ್ಬಾಳಿಕೆ, ಅನ್ಯಾಯ, ಒಳಸಂಚು, ಬೆದರಿಕೆ, ವೈಚಾರಿಕ ಮನದ ದಮನ – ಇವೆಲ್ಲವೂ ಸೇರಿದ ಒಟ್ಟು ಪರಿಣಾಮವು ಇಂಕ್ವಿಸಿಷನ್ ಎನಿಸಿಕೊಳ್ಳುತ್ತಿತ್ತು.’

ಗೋವಾದಲ್ಲಾಗಿತ್ತು ತಣ್ಣನೆಯ ಕ್ರೌರ್ಯ

ಗೋವಾ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ೧೫ನೇ ಶತಮಾನದಲ್ಲಿ ಅಂದಿನ ಆಡಳಿತಗಾರರು ನಡೆಸಿದ ತಣ್ಣನೆಯ ಕ್ರೌರ್ಯಕ್ಕೆ ಬೆದರಿ ಜೀವ ಉಳಿಸಲು ತಮ್ಮ ಹುಟ್ಟೂರು ಬಿಟ್ಟು ನಡೆದ ಕುಟುಂಬಗಳೆಷ್ಟೋ.. ಈಗಲೂ ಅನೇಕರು ತಮ್ಮ ಮೂಲ ಅರಸುತ್ತ ಗೋವಾ, ಸುತ್ತಮುತ್ತಲಿನ ಪ್ರದೇಶದ ಬೊಟ್ಟು ಮಾಡುತ್ತಿರುವುದನ್ನು, ಹಿರಿಯರು ಆ ಕುರಿತ ಕಥೆಗಳನ್ನು ಹೇಳುವುದನ್ನು ಕೇಳುತ್ತಿದ್ದೇವೆ. ಅಂತಹ ಕೆಲವು ಅಂಶಗಳನ್ನು ಉಲ್ಲೇಖಗಳೊಂದಿಗೆ ಲೇಖಕರು ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇಂಕ್ವಿಸಿಷನ್ ಯುಗ ಎಂಬ ಅಧ್ಯಾಯದಲ್ಲಿ ಅವರು, ಗೋವಾಕ್ಕೆ ಬಂದ ಇಂಕ್ವಿಸಿಷನ್ ಎಂಬ ಉಪಶೀರ್ಷಿಕೆಯಲ್ಲಿ ‘ರಾಜನ ಧರ್ಮವೇ ಪ್ರಜೆಗಳದ್ದೂ’ ಎನ್ನುವ ಘೋಷಣೆಯೊಡನೆ ಬಂದಿಳಿದ ಪೋರ್ತುಗೀಸರು ಅಕ್ರಮ ಅನ್ಯಾಯದ ಮತಾಂತರವನ್ನು ಪ್ರಾರಂಭಿಸಿದರು’ ಎಂಬ ವಾಕ್ಯದೊಂದಿಗೆ ಇದನ್ನು ವಿವರಣೆ ನೀಡಿರುವುದು ಹೀಗೆ – ‘ಹಿಂದುಗಳ ಪಾಲಿಗೆ ಅದೊಂದು ಅವಿರತ ಧರ್ಮಯುದ್ಧದ ಕಾಲಖಂಡವಾಗಿತ್ತು. ಹಿಂದುಗಳು ತಮ್ಮ ಪರಂಪರೆಯನ್ನು ಉಳಿಸಿಕೊಳ್ಳಲು ತೋರಿದ ಕ್ಷಾತ್ರ ಕೆಚ್ಚಿನ ಇತಿಹಾಸವಾಗಿತ್ತು. ಭಾರತದಂತಹ ಸಜ್ಜನ ದೇಶದಲ್ಲೂ ಈ ಪರಕೀಯರು ತಮ್ಮ ಸತ್ತೆಯನ್ನು ಹೇರಿ ಇಂಕ್ವಿಸಿಷನ್ ಕಾನೂನುಗಳಿಂದ ಹಿಂದುಗಳನ್ನು ಹಿಂಸಿಸಿದರು…’ ಎನ್ನುತ್ತ ದೇವಾಲಯಗಳ ಜಾಗದಲ್ಲಿ ಚರ್ಚ್ಗಳು ತಲೆ ಎತ್ತಿದ್ದ ಬಗೆಯನ್ನು ವಿವರಿಸಿದ್ದಾರೆ.

ಅಲ್ಲದೆ, ೧೭ನೇ ಶತಕದ ಕೊನೆಯಲ್ಲಿ ಗೋವಾದಲ್ಲಿ ಎರಡೂವರೆ ಲಕ್ಷದಷ್ಟಿದ್ದ ಹಿಂದುಗಳ ಸಂಖ್ಯೆ ೨೦,೦೦೦ಕ್ಕೆ ಇಳಿದಿತ್ತು! ಅಲ್ಲಿಂದ ಹೊರಬಿದ್ದ ಹಿಂದುಗಳೆಲ್ಲ ಗೋವಾದಿಂದ ಹೊರಗೆ ಬೇರೆ ಬೇರೆ ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿದರು. ಅಲ್ಲೇ ದೇವಸ್ಥಾನಗಳನ್ನು ನಿರ್ಮಿಸಿಕೊಂಡರು. ಹಳೇ ಗೋವಾದ ಕಾರಂಬೋಲಿಮ್ ನಲ್ಲಿದ್ದ ಅಪೂರ್ವ ಬ್ರಹ್ಮ ದೇವಸ್ಥಾನದಿಂದ ವಿಗ್ರಹವನ್ನು ಪೂರ್ವಕ್ಕೆ ಪಶ್ಚಿಮಘಟ್ಟಗಳ ತಪ್ಪಲು ಪ್ರದೇಶಗಳಿಗೆ ಸಾಗಿಸಲಾಯಿತು. ಸಂಖಾವಲಯದಲ್ಲಿದ್ದ ವಿಜಯದುರ್ಗಾ, ಲಕ್ಷ್ಮೀನರಸಿಂಹರನ್ನೂ ಕೆರಿಮ್‌ಗೆ ಸ್ಥಾನಾಂತರಿಸಲಾಯಿತು. ಮಾಪುಸಾದಿಂದ ಶಾಂತಾದುರ್ಗೆಯನ್ನು ಮರಾಠಿ ಸಾವಂತವಾಡಿಯ ಸಾಂಕ್ವೆಲಿಯಮ್‌ಗೆ ಕೊಂಡುಹೋದರು. ಶ್ರೀ ಮಹಾಲಕ್ಷ್ಮೀ ವಿಗ್ರಹವು ತಾಲೆಗಾಂವ್‌ನಿಂದ ಮೊದಲು ಮಾಯೆಮ್‌ಗೆ ಸ್ಥಾನಾಂತರಗೊಂಡು ೩೦೦ ವರ್ಷಗಳ ತರುವಾಯ ಪೋರ್ತುಗೀಸರ ಜೊತೆ ನಡೆದ ಒಪ್ಪಂದದಂತೆ ೧೮೧೮ರಲ್ಲಿ ಪಣಜಿಯ ಭವ್ಯಮಂದಿರದಲ್ಲಿ ಸ್ಥಾಪಿಸಲ್ಪಟ್ಟಿತು.

ಇತ್ತೀಚೆಗೆ ಮೇಘಾಲಯದ ಕ್ರಿಶ್ಚಿಯನ್ ಬಾಹುಳ್ಯದ ಶಿಲ್ಲಾಂಗ್‌ನಲ್ಲಿದ್ದ ವಿವೇಕಮಂದಿರ (ಶ್ರೀ ರಾಮಕೃಷ್ಣ ಮಠ)ವನ್ನು ಬಲವಂತವಾಗಿ ಮುಚ್ಚಿಸಿದ ಪ್ರಕರಣದ ವರದಿ, ಇದಕ್ಕೆ ಪ್ರತಿಯಾಗಿ ಹಿಂದುಗಳಾರೂ ಕ್ರಿಸ್ಮಸ್ ಆಚರಣೆಯಲ್ಲಿ ಭಾಗವಹಿಸಬಾರದು, ಚರ್ಚ್‌ಗೆ ತೆರಳಬಾರದು ಎಂದು ಅಸ್ಸಾಂನ ಜಿಲ್ಲೆಯೊಂದರ ಬಜರಂಗದಳದ ಪ್ರಧಾನ ಕಾರ್ಯದರ್ಶಿ ಮಿಥು ನಾಥ್ ಸಾರ್ವಜನಿಕ ಸಮಾರಂಭದಲ್ಲಿ ಎಚ್ಚರಿಸಿದ ವರದಿಗಳಿಗೂ ಈ ಪುಸ್ತಕದಲ್ಲಿರುವ ವಿಚಾರಗಳು ತಾಳೆಯಾದರೆ ಪರಿಸ್ಥಿತಿ ಏನೆಂಬುದು ಎಂಥವರಿಗೂ ಮನವರಿಕೆಯಾದೀತು.

ಈ ಪುಸ್ತಕವನ್ನು ಓದುವುದಕ್ಕೆ ಅನುಕೂಲವಾಗುವಂತೆ ಮನಸ್ಸಿಗೆ ಬುನಾದಿ ಹಾಕಿಕೊಡುವ ಕೆಲಸವನ್ನು ಡಾ. ಎಸ್.ಆರ್. ರಾಮಸ್ವಾಮಿಯವರ ಪಸ್ತಾವನೆ ಮಾಡುತ್ತದೆ. ಪ್ರಸ್ತಾವನೆಯ ಆರಂಭದಲ್ಲೇ ಜಗತ್ತಿನ ಧರ್ಮ ಮತ್ತು ಮತಗಳ ಚಿಂತನೆಗೆ ಅಡಿಪಾಯವಾಗಿರುವ ಮೂರು ಆಯಾಮಗಳನ್ನು ಉಲ್ಲೇಖಿಸಿದ್ದಾರೆ. ೧) ಆಧ್ಯಾತ್ಮಿಕ ಅನುಭೂತಿ ೨) ನೈತಿಕ ಮೌಲ್ಯಗಳು ೩) ಬಹಿರಂಗ ವ್ಯಾವಹಾರಿಕತೆ. ಈ ಮೂರನ್ನೂ ಸ್ಫುಟವಾಗಿ ಗುರುತಿಸದೇ ಇದ್ದರೆ ವಿಷಯ ಗ್ರಹಿಕೆಯಲ್ಲಿ ಗೊಂದಲ ಉಂಟಾಗಬಹುದು ಎಂಬ ತಿಳಿವಳಿಕೆಯ ಕಿರು ಎಚ್ಚರಿಕೆ ಗಮನಸೆಳೆಯುತ್ತದೆ.

ಅಷ್ಟೇ ಅಲ್ಲ ‘ಎಲ್ಲ ಧರ್ಮಗಳೂ ಸಮಾನ’ವೆಂದು ಪ್ರತಿಪಾದಿಸುವ ‘ಸಮಾನತೆ’ಯ ಪರಿಕಲ್ಪನೆಯ ಬಗ್ಗೆಯೂ ಗಮನಸೆಳೆದಿರುವ ಅವರು, ಸಮಾನತೆ ಎಂಬ ಶಬ್ದ ಪ್ರಯೋಗ ಔಪಾಚರಿಕತೆಗೆ ಸೀಮಿತ. ಅದಕ್ಕೆ ತಾತ್ತ್ವಿಕ ನೆಲೆಗಟ್ಟಿಲ್ಲ. ವಿಷಯದ ಆಳಕ್ಕೆ ಇಳಿದಷ್ಟೂ ಮತಗಳ ನಡುವಣ ಹೋಲಿಕೆಗೆ ಹೆಚ್ಚು ಅರ್ಥ ಇರಲ್ಲ ಎನ್ನುತ್ತ, ವೇದದ ಯಾವುದೋ ವಾಕ್ಯ, ಬೈಬಲಿನ ಯಾವುದೋ ವಾಕ್ಯ, ಕುರಾನಿನ ಯಾವುದೋ ವಾಕ್ಯವನ್ನು ಹೆಕ್ಕಿ ತೆಗೆದು ವರಸೆಯಾಗಿ ಜೋಡಿಸಿ ಎಲ್ಲ ಮತಗಳೂ ಸಮಾನವೆಂದು ಮಂಡನೆ ಮಾಡುವುದು ಅಮಾಯಕತೆ ಮತ್ತು ಅತಾರ್ಕಿಕತೆಯ ಪರಮಾವಧಿ ಎಂಬ ಆಶಯ ಪ್ರಸ್ತಾವನೆಯಲ್ಲಿ ವ್ಯಕ್ತವಾಗಿದೆ.

ವ್ಯಾಹವಾರಿಕ ಜಾಣ್ಮೆಯೇ ಬುನಾದಿ

ಕ್ರೈಸ್ತ ಧರ್ಮವು ವ್ಯಾವಹಾರಿಕ ಜಾಣ್ಮೆಯಲ್ಲಿ ಅಳವಡಿಸಿಕೊಂಡ ಬಗ್ಗೆ ಬೆಳಕು ಚೆಲ್ಲಿರುವ ಲೇಖಕ ಟಿ.ಎ.ಪಿ. ಶೆಣೈ ಅದನ್ನು ವಿವರಿಸಿದ್ದು ಹೀಗೆ- ಯೇಸುವು ಶಿಲುಬೆಯನ್ನೇರಿದ ನಂತರದ ೧೦ ವರ್ಷಗಳವರೆಗೂ ಅವನ ಉಪದೇಶಗಳನ್ನು ಮೆಚ್ಚಿದವರು ಕ್ರೈಸ್ತರೆಂದು ಕರೆಯಿಸಿಕೊಂಡಿರಲಿಲ್ಲ. ಪೌಲ್ ಎನ್ನುವ ರೋಮಿನ ಪ್ರಜೆ ಯೇಸುವಿನ ಈ ಅನುಯಾಯಿಗಳನ್ನು ಕ್ರೈಸ್ತರೆನ್ನುವ ಹೆಸರಿನಲ್ಲಿ ಒಂದಾಗುವಂತೆ ಮಾಡಿದ. ಹೀಗಾಗಿ ಪೌಲನನ್ನೇ ಕ್ರೈಸ್ತಮತದ ಎರಡನೇ ಸ್ಥಾಪಕನೆಂದು ಗುರುತಿಸುವಂತಾಯಿತು. ಹೀಗೆ ಯೇಸುವೇ ಸ್ಥಾಪಿಸದ ಕ್ರೈಸ್ತಮತವು ಅವನ ಹೆಸರನ್ನು ತನ್ನ ಉಪಯೋಗಕ್ಕಾಗಿ ವಿನಿಯೋಗಿಸಿಕೊಂಡಿತು. ಹುಟ್ಟಿನಿಂದಲೇ ಇಂಥದ್ದೊಂದು ಅಸಂಬದ್ಧತೆಯನ್ನು ಪ್ರದರ್ಶಿಸಿದ ಕ್ರೈಸ್ತಮತವನ್ನು ಒಪ್ಪುವುದು ಮೂರನೇ ಶತಮಾನದವರೆಗೆ ಲಾಭದ ವಿಚಾರವಾಗಿರಲಿಲ್ಲ. ಕಾನ್‌ಸ್ಟಾಂಟೈನ್ (ಕ್ರಿ.ಶ. ೩೦೬-೩೩೭) ಎನ್ನುವ ರೋಮಿನ ದೊರೆಯು ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಕ್ರೈಸ್ತನಾದ ನಂತರವೇ ಯಾರಿಗೇ ಆದರೂ ಕ್ರೈಸ್ತನೆನ್ನಿಸಿಕೊಳ್ಳುವುದು ಲೌಕಿಕ ಲಾಭದ ಮಾರ್ಗವಾಯಿತು. ಈ ಕ್ರೈಸ್ತ ವ್ಯಾವಹಾರಿಕ ಜಾಣ್ಮೆಯೇ ಈವೆರಗೂ ರೂಪಾಂತರಗೊಳ್ಳುತ್ತ, ಬದಲುಗೊಳ್ಳುತ್ತ, ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುತ್ತ, ಪರಿವರ್ತಿತವಾದಂತೆ ತೋರಿಸಿಕೊಳ್ಳುತ್ತ, ಲಾಭದಾಯಕ ಉದ್ಯೋಗವೆನಿಸಿ ಮುಂದುವರಿಯುತ್ತಿದೆ.

ಸಮಾನತೆಯ ಸೋಗು !

ಟಿ.ಎ.ಪಿ. ಶೆಣೈ ಅವರ ವ್ಯಾವಹಾರಿಕ ಜಾಣ್ಮೆಯ ಧರ್ಮ ಇದು ಎಂಬ ವಿವರಣೆಯನ್ನು ಆಧಾರವಾಗಿಟ್ಟುಕೊಂಡು ಇಂದಿನ ಸನ್ನಿವೇಶವನ್ನು ಗಮನಿಸಿದರೆ ಕ್ರೈಸ್ತ ಧರ್ಮದ ರೂಪಾಂತರವನ್ನು ಉಲ್ಲೇಖಿಸಬಹುದು. ಮೂರ್ತಿ ಪೂಜೆ ವಿರೋಧಿಸುತ್ತಿದ್ದವರು ಶ್ರೀಕೃಷ್ಣನ ಸ್ಥಾನದಲ್ಲಿ, ಮುರುಗನ ಸ್ಥಾನದಲ್ಲಿ ಕ್ರಿಸ್ತನ ಮೂರ್ತಿಗಳು ಕಾಣಿಸಿಕೊಂಡಿವೆ. ಹಿಂದುದೇಗುಲಗಳಲ್ಲಾಗುವಂತೆ ಒಂದೊಂದು ವಾರದ ಜಾತ್ರೆಯನ್ನು, ಆನೆ ಮೇಲೆ ದೇವರ ಮೆರವಣಿಗೆ, ಚರ್ಚ್ ಎದುರು ಧ್ವಜಸ್ತಂಭ ಹೀಗೆ ಸಾಲು ಸಾಲು ಆಚರಣೆಗಳ ಅನುಕರಣೆಗಳಾಗಿವೆ. ಹಿಂದು ಧರ್ಮ ಬೇರೆಯಲ್ಲ, ಕ್ರೈಸ್ತ ಧರ್ಮ ಬೇರೆಯಲ್ಲ ಎಂಬ ಭಾವನೆ ಬೇರೂರಲು, ತಥಾಕಥಿತ ‘ಸಮಾನತೆ’ಯ ಔಪಚಾರಿಕ ಶಬ್ದ ಪ್ರಯೋಗಕ್ಕೆ ಇಷ್ಟು ಸಾಲದೇ? ಇದೇ ರೀತಿ ಮುಂದುವರಿದರೆ, ಏನಾಗಬಹುದು ಎಂದು ಊಹಿಸುವುದಕ್ಕೆ ಸಾಕಷ್ಟು ನಿದರ್ಶನಗಳೂ ಕಣ್ಣಮುಂದೆ ಸಿಗುತ್ತವೆ. ಅಂತಹ ಒಂದೆರಡು ನಿದರ್ಶನಗಳನ್ನೂ ಈ ಪುಸ್ತಕದಲ್ಲಿ ಶೈಣೈ ಅವರು ಉಲ್ಲೇಖಿಸಿದ್ದಾರೆ.

ಹಿಂದೂ-ಕ್ರೈಸ್ತ ಸಾಂಸ್ಕೃತಿಕ ಮುಖಾಮುಖಿ ಎಂಬ ಅಧ್ಯಾಯದಲ್ಲಿ ಅವರು ಪ್ರತ್ಯೇಕತೆಯು ಬೀಜಾಂಕುರ ಉಪಶೀರ್ಷಿಕೆಯಡಿ ವಿವರಿಸಿರುವುದು ಹೀಗೆ – “…೧೮ನೇ ಶತಮಾನದ ಹೊತ್ತಿಗೆ ವಿದೇಶಿ ಕ್ರೈಸ್ತ ವಿದ್ವಾಂಸರೂ ಅವರ ಜೊತೆಗೂಡಿದ ಇತರರೂ ಕ್ರೈಸ್ತರನ್ನು ಯೇಸುವಿನ ಶಿಷ್ಯರಲ್ಲೊಬ್ಬರಾದ ಸಂತ ಥಾಮಸನ ಜೊತೆಯಲ್ಲಿ ಭಾರತಕ್ಕೆ ಬಂದವರು ಎಂದು ನಿರ್ಣಯಿಸಿದರು. ಇದೇ ತರ್ಕವನ್ನು ಮುಂದುವರಿಸುತ್ತಾ ಭಾರತದ ಆಚಾರ್ಯ- ಪ್ರಣೀತ ದ್ವೈತ-ಅದ್ವೈತ-ವಿಶಿಷ್ಟಾದ್ವೈತ ಸಿದ್ಧಾಂತಗಳಿಗೂ ಭಕ್ತಿ-ಮುಕ್ತಿ ಮಾರ್ಗಗಳೆಲ್ಲಕ್ಕೂ ಯೇಸುವಿನ ಬೋಧನೆಯೇ ಸ್ಫೂರ್ತಿ ಎನ್ನುವ ಊಹೆಯನ್ನು ತೇಲಿಬಿಟ್ಟರು. ಇದಕ್ಕೆ ಈ ಸಿರಿಯನ್ ಗುಂಪಿ ಪ್ರಭಾವವೇ ಕಾರಣವೆಂದೂ ಆರೋಪಿಸಿ ಬಿಟ್ಟರು. ಹಿಂದೊಮ್ಮೆ ರಾಷ್ಟ್ರಪತಿಗಳಾಗಿದ್ದ ಕೆ.ಆರ್. ನಾರಾಯಣನ್ ಮಾತನಾಡುತ್ತ, ‘ಆಚಾರ್ಯ ಶಂಕರರು ಕೂಡ ಕ್ರೈಸ್ತ ಮತ್ತು ಇಸ್ಲಾಂ ತತ್ತ್ವಗಳಿಂದ ಪ್ರಭಾವಿತರಾಗಿದ್ದರು’ ಎಂದು ಹೇಳಿದುದಕ್ಕೆ ಈ ಕುಹಕ ಸಂಶೋಧನೆಗಳೇ ಕಾರಣ.”

ಬದಲಾಗುತ್ತಿರುವ ಅವರ ಧರ್ಮಾಚರಣೆಗಳು ಹಿಂದು ಸಮುದಾಯದವರ ದಾರಿತಪ್ಪಿಸುವಂಥದ್ದು. ದೇಶದ ಪ್ರಥಮ ಪ್ರಜೆಯಾಗಿದ್ದವರ ಚಿಂತನೆಯನ್ನೂ ದಾರಿ ತಪ್ಪಿಸಿದವರು, ಸಾಮಾನ್ಯರ ದಾರಿತಪ್ಪಿಸದೇ ಇರುತ್ತಾರೆಯೇ? ರಾಜಕೀಯವಾಗಿಯೂ ಪ್ರಭಾವವನ್ನು ಬೀರುತ್ತಿರುವ ಇವರು ‘ಸೇವೆ’ಯ ನೆರಳಿನಲ್ಲಿ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಾರೆ. ಇದು ಕೂಡ ಕ್ರೈಸ್ತತಂತ್ರವೇ ಎಂಬುದನ್ನು ಲೇಖಕರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇದನ್ನು ಓದುತ್ತಿರುವ ಜಾತಿ ಮೀಸಲಾತಿ ಲಾಭ ಪಡೆಯುವುದಕ್ಕಾಗಿ ಮತಾಂತರವಾದರೂ ಅವರಿಗೂ ಮೀಸಲಾತಿ ಬೇಕೆನ್ನುವ ‘ದಲಿತ’ ಕ್ರಿಶ್ಚಿಯನ್ನರ ಬೇಡಿಕೆಯ ನೆನಪಾಗದೇ ಇರದು.

ರಾಷ್ಟ್ರ, ರಾಷ್ಟ್ರೀಯತೆಗಳು ಎಷ್ಟು ಮುಖ್ಯವೋ ಅಷ್ಟೇ ಪ್ರಾಮುಖ್ಯತೆಯನ್ನು ನಮ್ಮ ಧರ್ಮ, ಸಂಸ್ಕೃತಿ ಪರಂಪರೆಗಳಿಗೆ ಕೊಡಬೇಕು. ವೈವಿಧ್ಯಮಯ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಹೊಣೆಗಾರಿಕೆಯೂ ಎಲ್ಲರ ಮೇಲೂ ಇರುವ ಕಾರಣ ಇಂತಹ ಇತಿಹಾಸಗಳ ಅರಿವೂ ಇರಬೇಕಾದ್ದು ಅವಶ್ಯ. ಲೇಖಕರು ಪುಸಕ್ತದ ಕೊನೆಯಲ್ಲಿ ಒಂದಷ್ಟು ಆಕರ ಗ್ರಂಥಗಳು ವಿವರನ್ನೂ ನೀಡಿದ್ದಾರೆ. ಕ್ರೈಸ್ತ ಕ್ರೌರ್ಯ ಪರಂಪರೆ ಕುರಿತ ವಿಸ್ತೃತ ತಿಳಿವಳಿಕೆಗಾಗಿ ಆಕರ ಗ್ರಂಥಗಳು ಅಧ್ಯಯನಕ್ಕೆ ಈ ಪುಸ್ತಕ ಪ್ರೇರಣೆಯಾದೀತು.

ಉಮೇಶ್ ಕುಮಾರ್ ಶಿಮ್ಲಡ್ಕ, ಪತ್ರಕರ್ತ

The post ಅವರದು ರಕ್ತಸಿಕ್ತ ಕ್ರೌರ್ಯ, ಇವರದು ತಣ್ಣನೆಯ ಕ್ರೌರ್ಯ ಪರಂಪರೆ first appeared on Vishwa Samvada Kendra.

ಹಾಲು, ಪೌಲ್ಟ್ರಿಗೆ ಎಂಎಸ್‌ಪಿ ಇಲ್ಲ. ಆದರೂ ಬೆಳವಣಿಗೆ ದಾಖಲಿಸಿದ್ದು ಹೇಗೆ? ನೂತನ ಕೃಷಿ ಕಾಯಿದೆಯಿಂದ ಯಾರಿಗೆ ಲಾಭ?

$
0
0

ದೇಶದ ಕೃಷಿ ಮಾರುಕಟ್ಟೆಯಲ್ಲಿ ಬ್ರಿಟಿಷರ ಕಾಲದಿಂದಲೂ ಜಾರಿಯಲ್ಲಿದ್ದ ಹಳೆಯ ಹಾಗೂ ಅಪ್ರಸ್ತುತ ಮತ್ತು ಈಗಿನ ಸಮೃದ್ಧ ಉತ್ಪಾದನೆಯ ಕಾಲಕ್ಕೆ ಸೂಕ್ತವಲ್ಲದ ಕಾಯಿದೆಗಳನ್ನು ಬದಲಿಸಿ, ಕೃಷಿ ಮಾರುಕಟ್ಟೆಯ ಚಾರಿತ್ರಿಕ ಸುಧಾರೆಣೆಗೆ ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯಿದೆಗಳು ಸಂಚಲನ ಸೃಷ್ಟಿಸಿವೆ. ಇವುಗಳ ಪರ-ವಿರೋಧ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಹಾಗಾದರೆ ಕಾಯಿದೆಯಲ್ಲಿ ಏನಿದೆ? ಇದರ ಪ್ರಯೋಜನವೇನು? ಇಲ್ಲಿದೆ ವಿವರ.
===================
ಲೇಖಕರು:  ಕೇಶವ ಪ್ರಸಾದ್ ಬಿ., ಪತ್ರಕರ್ತರು

ಹಾಲಿಗೆ ಕನಿಷ್ಠ ಬೆಂಬಲ ಬೆಲೆ ಇಲ್ಲ, ಆದರೂ ಅದರ ಅವಲಂಬನೆ ಬಯಸದೆ ಜಗತ್ತಿನಲ್ಲೇ ಭಾರತ ನಂ. 1 ಕ್ಷೀರೋತ್ಪಾದಕ ರಾಷ್ಟ್ರವಾಗಿದ್ದು ಹೇಗೆ?! ಕುಕ್ಕುಟೋದ್ಯಮಕ್ಕೂ (ಪೌಲ್ಟ್ರಿ) ಎಂಎಸ್‌ಪಿ ಇಲ್ಲ, ಆದರೂ ಬೆಳವಣಿಗೆ ದಾಖಲಿಸಿದ್ದು ಹೇಗೆ? ಎಂಎಸ್‌ಪಿ ಅಡಿಯಲ್ಲಿ ಧಾನ್ಯ ಖರೀದಿಗೆ ಆಹಾರ ನಿಗಮ ಪಡೆದ ಸಾಲ 3 ಲಕ್ಷ ಕೋಟಿ ರೂ.ಗಳ ಸನಿಹಕ್ಕೇರಿದ್ದು ಗಮನಿಸಬೇಡವೇ? ಹೊಸ ಕೃಷಿ ಕಾಯಿದೆಗಳ ಪರಿಣಾಮ ಮುಂದಿನ 3-5 ವರ್ಷಗಳಲ್ಲಿ ಏನಾಗಬಹುದು? – ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಕೃಷಿ ಮಾರುಕಟ್ಟೆ ಸಂಶೋಧಕ ಅಶೋಕ್ ಗುಲಾಟಿ. ಕಳೆದ ಹಲವು ದಶಕಗಳಿಂದಲೂ ಅವರು ದೇಶದ ಕೃಷಿ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ನಿರಂತರ ಸಂಶೋಧನೆ ಮಾಡಿದ್ದಾರೆ.

“ಎಂಎಸ್‌ಪಿ ಆಧರಿತ ವ್ಯವಸ್ಥೆ ಅಥವಾ ಉದಾರೀಕರಣಗೊಂಡ ಮಾರುಕಟ್ಟೆ ಎರಡೂ ಪರಿಪೂರ್ಣವಲ್ಲ, ಆದರೆ ಎಂಎಸ್‌ಪಿ ದುಬಾರಿ ಮತ್ತು ದಕ್ಷತೆ ಕಡಿಮೆ ಇರುವಂಥದ್ದು”  ಎನ್ನುವ ಅಶೋಕ್ ಗುಲಾಟಿ ಅವರ ಸಂಶೋಧನಾತ್ಮಕ ಲೇಖನ ಹಲವು ಆಯಾಮಗಳನ್ನು ವಿವರಿಸುತ್ತದೆ.

ಕಳೆದ ಕೆಲ ದಶಕಗಳಿಂದ ಎಂಎಸ್‌ಪಿ ವ್ಯವಹಾರವನ್ನು ವಿಶ್ಲೇಷಣೆ ಮಾಡಿರುವುದರಿಂದ ಹೇಳ ಬಯಸುತ್ತೇನೆ. ಖಂಡಿತವಾಗಿಯೂ ಇದು ಆಹಾರ ಧಾನ್ಯಗಳಿಗೆ ಕೊರತೆ ಇದ್ದ 1960ರ ಮಧ್ಯ ಭಾಗದ ಪದ್ಧತಿ. ಅಂದಿನಿಂದ ಭಾರತ ಆಹಾರೋತ್ಪಾದನೆಯಲ್ಲಿ ಕೊರತೆಯಿಂದ ಹೆಚ್ಚುವರಿ ಉತ್ಪಾದನೆಯ ರಾಷ್ಟ್ರವಾಗಿ ಬದಲಾಗಿದೆ ಎನ್ನುತ್ತಾರೆ ಗುಲಾಟಿ.

“ಆಹಾರ ಧಾನ್ಯಗಳ ಕೊರತೆ ಇದ್ದಾಗ ಸರಕಾರಗಳು ಪಾಲಿಸುವ ನಿರ್ವಹಣೆಯ ನೀತಿಗೂ, ಸಮೃದ್ಧಿಯಾಗಿದ್ದಾಗ ಅಗತ್ಯವಿರುವ ನೀತಿಗೂ ವ್ಯತ್ಯಾಸ ಇರುತ್ತವೆ. ಉತ್ಪಾದನೆ ಸಮೃದ್ಧವಾದಾಗ ಮಾರುಕಟ್ಟೆಗೆ ಹೆಚ್ಚಿನ ಪಾತ್ರವನ್ನು ನೀಡಬೇಕಾಗುತ್ತದೆ. ಕೃಷಿಯನ್ನು ಬೇಡಿಕೆ ಆಧಾರಿತವಾಗಿಸಬೇಕಾಗುತ್ತದೆ. ಇಲ್ಲದಿದ್ದರೆ ಕೇವಲ ಎಂಎಸ್‌ಪಿ ಮಾರ್ಗವೊಂದೇ ಇದ್ದರೆ, ಅದು ಆರ್ಥಿಕ ವಿಪತ್ತಿಗೆ ದಾರಿ ಮಾಡಿಕೊಡುತ್ತದೆ” ಎಂದು ಎಚ್ಚರಿಸುತ್ತಾರೆ ಗುಲಾಟಿ.

“ಇದು ಸರಕಾರ ಎಷ್ಟು ಬೆಂಬಲ ಬೆಲೆ ನೀಡಬೇಕು ಹಾಗೂ ಮಾರುಕಟ್ಟೆ ಆಧಾರಿತ ದರ ಎಷ್ಟಿರಬೇಕು” ಎಂಬುದರ ಪರಿಷ್ಕರಣೆ. ಹೊಸ ಕೃಷಿ ಕಾಯಿದೆಯು ಈಗಿನ ಎಂಎಸ್‌ಪಿ ವ್ಯವಸ್ಥೆಯನ್ನು ಬದಲಿಸದೆಯೇ, ಮಾರುಕಟ್ಟೆಯ ಪಾತ್ರವನ್ನು ಹೆಚ್ಚಿಸಲು ಯತ್ನಿಸುತ್ತಿದೆ. ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಸದ್ಯಕ್ಕೆ ಯಾವುದೇ ವ್ಯವಸ್ಥೆ ಪರಿಪೂರ್ಣವಲ್ಲ. ಅದು ಎಂಎಸ್‌ಪಿ ಆಗಿರಬಹುದು, ಮಾರುಕಟ್ಟೆ ಆಧಾರಿತವಾಗಿರಬಹುದು. ಆದರೆ ಎಂಎಸ್‌ಪಿ ವ್ಯವಸ್ಥೆ ಬಹಳ ದುಬಾರಿ ಮತ್ತು ಅದಕ್ಷತೆಯದ್ದು. ಮಾರುಕಟ್ಟೆ ಆಧಾರಿತವಾಗಿರುವಂಥದ್ದು ಹೆಚ್ಚು ಸ್ಥಿರವಾದದ್ದು” ಎನ್ನುತ್ತಾರೆ ಅವರು.

ಅಶೋಕ್ ಗುಲಾಟಿ, ಪದ್ಮಶ್ರೀ ಪುರಸ್ಕೃತರು, ಕೃಷಿ ಮಾರುಕಟ್ಟೆ ಸುಧಾರಣೆಯ ಚಿಂತಕ,
ಕೃಷಿ ವೆಚ್ಚ ಮತ್ತು ದರ ಆಯೋಗದ ಮಾಜಿ ಅಧ್ಯಕ್ಷರು

ಎಂಎಸ್‌ಪಿಯ ಒಳನೋಟ:

ಎಂಎಸ್‌ಪಿ ಮುಖ್ಯವಾಗಿ ಭತ್ತ ಮತ್ತು ಗೋಧಿಗೆ ಲಭ್ಯವಿದೆ. ಇತೀಚೆಗೆ ಇತರ ಹಲವು ಬೇಳೆಕಾಳುಗಳನ್ನೂ ಎಂಎಸ್‌ಪಿ ಅಡಿಯಲ್ಲಿ ಖರೀದಿಸುತ್ತಿದೆ. ಒಟ್ಟು 23 ಬೆಳೆಗಳಿಗೆ ವಿಸ್ತರಿಸಲಾಗಿದೆ. ಹೀಗಿದ್ದರೂ ಈಗಲೂ ಎಂಎಸ್‌ಪಿ ಬಹುಪಾಲು ಅಕ್ಕಿ ಮತ್ತು ಗೋಧಿ ಖರೀದಿಯದ್ದೇ ಪ್ರಾಬಲ್ಯವಿದೆ. ಸರಕಾರದ ಕಾಪು ದಸ್ತಾನಿನ ಅಂಕಿ ಅಂಶಗಳು ಇದನ್ನು ಬಿಂಬಿಸುತ್ತಿವೆ.

ಸರಕಾರಕ್ಕೆ ಎಂಎಸ್‌ಪಿ ಅಡಿಯಲ್ಲಿ ಖರೀದಿಸುವ ಅಕ್ಕಿಗೆ ಪ್ರತಿ ಕೆ.ಜಿಗೆ ಸುಮಾರು 37 ರೂ. ಹಾಗೂ ಗೋಧಿಗೆ ಪ್ರತಿ ಕೆ.ಜಿಗೆ 27 ರೂ. ವೆಚ್ಚವಾಗುತ್ತದೆ. ಭಾರತೀಯ ಆಹಾರ ನಿಗಮಕ್ಕೆ (ಎಂಎಸ್‌ಪಿ) ಕಾರ್ಮಿಕರ ಸಲುವಾಗಿ ತಗಲುವ ವೆಚ್ಚವು ಮಾರುಕಟ್ಟೆಯಲ್ಲಿನ ಗುತ್ತಿಗೆ ಆಧಾರಿತ ಕಾರ್ಮಿಕರಿಗಿಂತ ೬ ಪಟ್ಟು ಹೆಚ್ಚು. ಎಂಎಸ್‌ಪಿಗೆ ಅಕ್ಕಿ ಮತ್ತು ಗೋಧಿ ಖರೀದಿಗೆ ತಗಲುವ ಆರ್ಥಿಕ ವೆಚ್ಚಕ್ಕಿಂತಲೂ ಮಾರುಕಟ್ಟೆಯ ದರಗಳು ಕಡಿಮೆಯಾಗಿರುವುದರಲ್ಲಿ ಅಚ್ಚರಿ ಇಲ್ಲ. ಉದಾಹರಣೆಗೆ ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ ರಿಟೇಲ್ ಮಾರುಕಟೆಯಲ್ಲಿನ ಅಕ್ಕಿಯ ದರ ಕೆ.ಜಿಗೆ 23-25 ರೂ. ಗಳಾಗಿರುತ್ತದೆ. ಹೀಗಾಗಿ ಎಂಎಸ್‌ಪಿಗೆ ತಾನು ಸಂಗ್ರಹಿಸುವ ಹೆಚ್ಚುವರಿ ಧಾನ್ಯಗಳನ್ನು ರಫ್ತು ಮಾಡಬೇಕಿದ್ದರೆ ಸಬ್ಸಿಡಿಯ ನೆರವು ಇಲ್ಲದೆ ಸಾಧ್ಯವೇ ಇಲ್ಲ. ಹಾಗೆ ಸಬ್ಸಿಡಿ ಕೊಟ್ಟರೆ ಅದಕ್ಕೆ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಆಕ್ಷೇಪಿಸುತ್ತದೆ.


ಆಹಾರ ನಿಗಮದ ಸಾಲದ ಹೊರೆ 3 ಲಕ್ಷ ಕೋಟಿ ರೂ.ಗಳ ಸನಿಹ:

ಆಹಾರ ಸಬ್ಸಿಡಿ ಸಲುವಾಗಿ ಸರಕಾರಕ್ಕೆ ತಗಲುವ ನಿಜವಾದ ವೆಚ್ಚ ಕೇಂದ್ರ ಬಜೆಟ್‌ನಲ್ಲಿ ಗೊತ್ತಾಗುವುದಿಲ್ಲ. ಏಕೆಂದರೆ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಎ) ಹೆಚ್ಚೆಚ್ಚು ಸಾಲ ಮಾಡುವಂತೆ ತಿಳಿಸಲಾಗಿದೆ. ಹೀಗಾಗಿ ಎಎಫ್‌ಸಿಎಯ ಸಾಲದ ಹೊರೆ ೩ ಲಕ್ಷ ಕೋಟಿ ರೂ.ಗಳ ಸನಿಹದಲ್ಲಿದೆ. ಇದರ ಪರಿಣಾಮ ಆಹಾರ ನಿರ್ವಹಣೆಯ ವ್ಯವಸ್ಥೆಯಲ್ಲಿ ಹಣಕಾಸು ಬಿಕ್ಕಟ್ಟನ್ನು ಮುಂದೂಡಲಾಗುತ್ತಿದೆ. ಆದರೆ ಬಡವರ ಹೆಸರಿನಲ್ಲಿಪೂರ್ವಾಗ್ರಹಪೀಡಿತ ವಾದ ನಡೆಯುವಾಗ ದಕ್ಷತೆ, ಆರ್ಥಿಕ ವೆಚ್ಚ, ವಿಪತ್ತಿನ ಬಗ್ಗೆ ಲಕ್ಷಿಸುವವರು ಯಾರು?

ಕೆಲವರು ಕಬ್ಬಿನ ದರ ಮತ್ತು ಹಾಲಿನ ದರ ನಿರ್ಣಯವೂ ಎಂಎಸ್‌ಪಿಯೂ ಸಮಾನ ಎನ್ನುತ್ತಾರೆ. ಆದರೆ ತಾಂತ್ರಿಕವಾಗಿ ಭಿನ್ನ. ಎಂಎಸ್‌ಪಿ ಎನ್ನುವುದು ಸರಕಾರ ರೈತರಿಗೆ ನೀಡುವ ಭರವಸೆ. ಕಾನೂನಾತ್ಮಕ ಬದ್ಧತೆಯಲ್ಲ. ಮಾರುಕಟ್ಟೆಯಲ್ಲಿ ನಿರ್ದಿಷ್ಟ ಮೊತ್ತಕ್ಕಿಂತ ಕಡಿಮೆ ಮಟ್ಟಕ್ಕೆ ಬೆಲೆ ಕುಸಿದರೆ ತಾನು ಖರೀದಿಸುತ್ತೇನೆ ಎಂದು ನೀಡುವ ಭರವಸೆ. ಕಬ್ಬಿನ ವಿಚಾರದಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಕಬ್ಬಿನ ದರದ ಬಗ್ಗೆ ಫೇರ್ ಆಂಡ್ ರೆಮ್ಯುನರೇಟಿವ್ ಪ್ರೈಸ್ (ಎಂಎಸ್‌ಪಿ) ನಿರ್ಣಯಿಸುತ್ತದೆ. ಉತ್ತರಪ್ರದೇಶ ಕಬ್ಬಿನ ದರ ನಿರ್ಣಯಕ್ಕೆ ತನ್ನದೇ ಸ್ಟೇಟ್ ಅಡ್ವೈಸ್ಡ್ ಪ್ರೈಸ್ (ಎಸ್‌ಎಪಿ) ಅನ್ನು ಹೊಂದಿದೆ. ಸಕ್ಕರೆ ವಲಯದಲ್ಲಾಗಿರುವ ಗೊಂದಲ ನೋಡಿ. ಪ್ರತಿ ವರ್ಷ ರೈತರಿಗೆ ಸಕ್ಕರೆ ಕಾರ್ಖಾನೆಗಳು ನೀಡಬೇಕಿರುವ ಬಾಕಿ ಸಾವಿರಾರು ಕೋಟಿ ರೂ.ಗೂ ಹೆಚ್ಚು ಇರುತ್ತದೆ.  ಭಾರಿ ಪ್ರಮಾಣದ ಸಕ್ಕರೆಯನ್ನು ರಫ್ತು ಮಾಡಲೂ ಆಗುತ್ತಿಲ್ಲ. ಏಕೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ದರ ಇನ್ನೂ ಕೆಳಮಟ್ಟದಲ್ಲಿದೆ. ಅಲ್ಲಿ ಸ್ಪರ್ಧೆ ನೀಡಲು ಭಾರತದ ಕಾರ್ಖಾನೆಗಳಿಗೆ ಆಗುತ್ತಿಲ್ಲ.

ಹಾಲಿಗೆ ಎಂಎಎಸ್ಪಿ ಇಲ್ಲ!

ಹಾಲಿನ ದರ ನಿರ್ಣಯದಲ್ಲಿ ಗಮನಿಸಿ. ಇದರ ಮೌಲ್ಯವು ಅಕ್ಕಿ, ಗೋಧಿ, ಸಕ್ಕರೆಗಿಂತಲೂ ಹೆಚ್ಚು. ಹಾಲಿನ ಕೋ-ಆಪರೇಟಿವ್ ವ್ಯವಸ್ಥೆಯಲ್ಲಿ ಕಂಪನಿ ಮತ್ತು ಹಾಲಿನ ಒಕ್ಕೂಟ ದರವನ್ನು ನಿರ್ಧರಿಸುತ್ತವೆ. ಸರಕಾರ ನಿರ್ಧರಿಸುವುದಿಲ್ಲ. ಇದು ಗುತ್ತಿಗೆ ದರವನ್ನು ಹೋಲುತ್ತದೆ.
“ಹಾಲಿಗೆ ಯಾವುದೇ ಎಂಎಸ್‌ಪಿ ಇಲ್ಲ. ಭಾರತದ ಕ್ಷೀರ ವಲಯವು ಖಾಸಗಿ ಕಂಪನಿಗಳ ಜತೆ ಪೈಪೋಟಿ ನಡೆಸುತ್ತಿದೆ. ಅದು ನೆಸ್ಲೆ, ಹ್ಯಾಟ್ಸನ್ ಅಥವಾ ಶ್ರೈಬರ್ ಡೈನಾಮಿಕ್ಸ್  ಇರಬಹುದು, ಕ್ಷೀರೋದ್ಯಮ ಅಕ್ಕಿ, ಗೋಧಿ, ಕಬ್ಬಿಗಿಂತ ವಾರ್ಷಿಕ ಸರಾಸರಿ 2-3 ಪರ್ಸೆಂಟ್ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದೆ.

ಭಾರತ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರ. ವಾರ್ಷಿಕ 18.7 ಕೋಟಿ ಟನ್ ಹಾಲು ಉತ್ಪಾದಿಸಲಾಗುತ್ತಿದೆ.

ಹೊಸ ಕೃಷಿ ಕಾಯಿದೆಗಳ ಪರಿಣಾಮ ಮುಂದಿನ ೩-೫ ವರ್ಷಗಳಲ್ಲಿ ಸಾವಿರಾರು ಕಂಪನಿಗಳು ಕೃಷಿ ಉತ್ಪನ್ನಗಳ ಪೂರೈಕೆಯ ವ್ಯವಸ್ಥೆಯನ್ನು ಬಲಪಡಿಸಲು ಉತ್ತೇಜನ ಸಿಗಲಿದೆ. ಕ್ಷೀರೋದ್ಯಮದಲ್ಲಿ ಆದಂತೆ ಕೃಷಿ ಉತ್ಪನ್ನ ಮಾರಾಟ ವಲಯದಕ್ಕೂ ಸುಧಾರಣೆಯಾಗಲಿದೆ. ರೈತರ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಅಭಿವೃದ್ಧಿಯಾಗಲಿವೆ. ಅವುಗಳಲ್ಲಿ ಹಲವು ವಿಫಲವಾಗಬಹುದು. ಆದರೆ ಹಲವು ಯಶಸ್ವಿಯೂ ಆಗಬಹುದು. ಇದು ಉತ್ಪಾದಕೆಯನ್ನು ಹೆಚ್ಚಿಸಲಿದೆ. ಕುಕ್ಕುಟೋದ್ಯಮ ಮತ್ತು ಹೈನುಗಾರಿಕೆಯಂತೆ ಕೃಷಿ ಉತ್ಪನ್ನ ಮಾರಾಟದಲ್ಲೂ ವಿಕಾಸದ ಸಾಧ್ಯತೆ ಇದೆ.  ಹಾಲು ಮತ್ತು ಕುಕ್ಕುಟೋದ್ಯಮದಲ್ಲಿ ರೈತರು ಎಂಎಸ್‌ಪಿ ಪಡೆಯುವುದಿಲ್ಲ.  ಮಂಡಿಗಳಿಗೆ ಹೋಗಬೇಕಿಲ್ಲ, ಮಂಡಿ ಶುಲ್ಕ, ಸೆಸ್ ನೀಡಬೇಕಿಲ್ಲ.

ನಾನಂತೂ ಹೇಳುವುದೇನೆಂದರೆ, ಎಂಎಸ್‌ಪಿ ಆಧರಿತ ದರ ನಿರ್ಣಯ ವ್ಯವಸ್ಥೆಗೆ (ಪ್ರೈಸಿಂಗ್ ಸಿಸ್ಟಮ್) ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತನ್ನದೇ ಇತಿ ಮಿತಿಗಳಿವೆ. ಇದಕ್ಕೆ ಪರಿಹಾರ ಏನೆಂದರೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ವೈವಿಧ್ಯಮಯಗೊಳಿಸುವುದು, ಹೆಚ್ಚು ಮೌಲ್ಯಯುತ ಬೆಳೆಗಳನ್ನೂ ಬೆಳೆಯುವುದು, ರೈತ ಸಮುದಾಯದಲ್ಲಿ ಬಹಳಷ್ಟು ಮಂದಿಯನ್ನು ಹೆಚ್ಚು ಆದಾಯ ಇರುವ ಬೇರೆ ಕ್ಷೇತ್ರಗಳಿಗೆ ಸ್ಥಳಾಂತರಿಸುವುದು. ಆದರೆ ಈ ಸಂದರ್ಭ ಇದರ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ.

ಈ ದೇಶದಲ್ಲಿ  ರೈತರಿಗೆ ತಾವು ಉತ್ಪಾದಿಸುವ ನಾನಾ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ಆದಾಯ ಗಳಿಸಲು ಮಾರುಕಟ್ಟೆ ವಿಸ್ತಾರವಾಗಬೇಕು. ಈ ನಿಟ್ಟಿನಲ್ಲಿ ಹೊಸ ಕೃಷಿ ಕಾಯಿದೆಗಳು ಅಗತ್ಯ. ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಸಾವಿರಾರು ಕಂಪನಿಗಳು ಕೃಷಿ ಉತ್ಪನ್ನಗಳ ಪೂರೈಕೆಯ ವಹಿವಾಟಿನಲ್ಲಿ ಕಾರ್ಯಪ್ರವೃತ್ತವಾಗಲು ಉತ್ತೇಜನ ಸಿಗಲಿದೆ. ಇದರ ಪ್ರಯೋಜನ ರೈತರಿಗೆ ದೊರೆಯುವ ನಿರೀಕ್ಷೆ ಇದೆ.

ನೂತನ ಕೃಷಿ ಕಾಯಿದೆಗೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಯ ಅಲೆಗಳಲ್ಲಿ ಭಾರತೀಯ ಪ್ರಜಾಪ್ರಭುತ್ವದ ಪೂರ್ಣ ಪ್ರಮಾಣದ ಪಾತ್ರವನ್ನು ಗಮನಿಸಬಹುದು. ಸರಕಾರ ಇದನ್ನು ಐತಿಹಾಸಿಕ ಕಾಯಿದೆ ಎಂದು ಕರೆದರೆ, ಪ್ರತಿಪಕ್ಷಗಳು “ರೈತರ ಪಾಲಿಗೆ ಕರಾಳ ಅಧ್ಯಾಯ’ ಎಂದು ಬಣ್ಣಿಸಿವೆ. ಮತ್ತೆ ಕೆಲವರು ಕಾರ್ಪೊರೇಟ್ ಕುಳಗಳಿಗೆ ಕೃಷಿ ಮಾರುಕಟ್ಟೆಯ ಮಾರಾಟ ಎಂದಿದ್ದಾರೆ. ಹಠಾತ್ತನೆ ಎಲ್ಲರ ಹೃದಯ ರೈತರಗೋಸ್ಕರ ಮಿಡಿಯುತ್ತಿರುವುದು ಹೇಗೆ ಎಂಬುದೇ ಸೋಜಿಗ.

ಹೀಗಿದ್ದರೂ, ಉಭಯ ರಾಜಕೀಯ ಬಣಗಳಲ್ಲಿರೈತರ ಆದಾಯ ಹೆಚ್ಚಬೇಕು ಎಂಬುದಕ್ಕೆ ಭಿನ್ನಮತವಿಲ್ಲ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಪ್ರತಿಪಕ್ಷಗಳು ವಾದಿಸುತ್ತಿವೆ. ಸರಕಾರವು ರೈತರಿಗೆ ಈಗಿನ ಎಂಎಸ್‌ಪಿ ವ್ಯವಸ್ಥೆಯನ್ನು ಇಟ್ಟುಕೊಂಡೇ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳನ್ನು ನೀಡಲು ಕಾಯಿದೆ ನೆರವಾಗಲಿದೆ ಎನ್ನುತ್ತಿದೆ. ಹೀಗಿದ್ದರೂ, ಯಾವುದು ಯುಕ್ತ ಎಂಬ ಸಮಾಲೋಚನೆ ಮುಖ್ಯ. ಇಲ್ಲಿ ಗುಲಾಟಿಯವರು ಹಾಲನ್ನು ಸಾಂಕೇತಿಕವಾಗಿ ಉದಾಹರಣೆಗೆ ಹೇಳಿದ್ದಾರೆ. ಒಟ್ಟಾರೆಯಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯ ವಿಸ್ತರಣೆ, ಅದಕ್ಕಿರುವ ಕಾಯಿದೆಗಳ ತೊಡಕು ನಿವಾರಣೆ, ಪೂರಕ ಪರಿಸರ ನಿರ್ಮಾಣದ ಅಗತ್ಯವನ್ನು ವಿವರಿಸಿದ್ದಾರೆ ಎಂಬುದು ಮುಖ್ಯ.

ನೂತನ ಕೃಷಿ ಕಾಯಿದೆಗಳ ಬಗ್ಗೆ ಮಣಿಪಾಲ್ ಗ್ಲೋಬಲ್ ಎಜ್ಯುಕೇಷನ್ ಸಂಸ್ಥೆಯ ಅಧ್ಯಕ್ಷ ಟಿ.ವಿ ಮೋಹನ್ ದಾಸ್ ಪೈ ಅವರು ಹೇಳುವ ಅಂಶಗಳು ಮಾಹಿತಿಪೂರ್ಣ. ಅವರು ಹೀಗೆನ್ನುತ್ತಾರೆ-
ಕೃಷಿ ಕ್ಷೇತ್ರದಲ್ಲಿ ಒಟ್ಟಾರೆಯಾಗಿ ನಿವ್ವಳ ಮೌಲ್ಯ ವರ್ಧನೆ (ಜಿವಿಎ) ತ್ವರಿತವಾಗಿ ಬದಲಾಗುತ್ತಿರುವ ಹೊತ್ತಿನಲ್ಲಿ ಉದಾರೀರಣದ ಭಾಗವಾಗಿ ಹೊಸ ಕೃಷಿ ಕಾಯಿದೆಗಳು ಬಂದಿವೆ. ಕೃಷಿ ವಲಯದಲ್ಲಿ ಈ ಹಿಂದೆ ದವಸ ಧಾನ್ಯಗಳ ಬೆಳೆಗಳೇ ಪ್ರಾಧಾನ್ಯತೆ ಗಳಿಸಿದ್ದವು. ಆಹಾರೋತ್ಪನ್ನಗಳ ಸಂಗ್ರಹ, ವಿತರಣೆ ಮತ್ತು ಪೂರೈಕೆಗೆ ಹಲವು ಕಟ್ಟುಪಾಡುಗಳು ಇದ್ದಂಥ ಕಾಲದಿಂದ ಉದಾರೀಕರಣಕ್ಕೆ ಕಾಯಿದೆಗಳು ಹಾದಿ ಸುಗಮಗೊಳಿಸಿವೆ.

ಆಹಾರ ಧಾನ್ಯಗಳ ವಲಯದಲ್ಲಿ ಬೇಡಿಕೆ ಮತ್ತು ಪೂರೈಕೆಯಲ್ಲಾಗುವ ವ್ಯತ್ಯಯಗಳ ಏರಿಳಿತಗಳಿಂದ ರೈತರಿಗೆ ರಕ್ಷಣೆ ನೀಡಲು ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ರೈತರು ಮತ್ತು ಕೃಷಿ ಉತ್ಪಾದಕರು ವೈವಿಧ್ಯಮಯ ಉತ್ಪನ್ನಗಳನ್ನು ಬೆಳೆಯುತ್ತಿದ್ದಾರೆ. ಕೇವಲ ದವಸ ಧಾನ್ಯಗಳಿಗೆ ಅವರು ಸೀಮಿತರಾಗಿಲ್ಲ. ಹಳೆಯ ನಿಯಂತ್ರಕ ವ್ಯವಸ್ಥೆ ಅಪ್ರಸ್ತುತವಾಗಿವೆ.


ರೈತರು ನೇರವಾಗಿ ಮಾರುಕಟ್ಟೆಯ ಸಂಪರ್ಕ ಗಳಿಸುವುದರಿಂದ ಅವರ ಕನಿಷ್ಠ ೨೦-೩೦ ಪರ್ಸೆಂಟ್ ಆದಾಯ ವೃದ್ಧಿಸುತ್ತದೆ. ಕಳೆದ 5-7 ವರ್ಷಗಳಲ್ಲಿ 600ಕ್ಕೂ ಹೆಚ್ಚು ಅಗ್ರಿಟೆಕ್ ಕಂಪನಿಗಳ ಅಧ್ಯಯನದಲ್ಲಿ ಇದು ತಿಳಿದುಬಂದಿದೆ. ಆದರೆ ಈ ಪ್ರಯೋಜನ ವ್ಯಾಪಕವಾಗಿ ರೈತ ಸಮುದಾಯಕ್ಕೆ ಸಿಗಬೇಕಿದ್ದರೆ ಪೂರಕವಾದ ಕೃಷಿ ಕಾಯಿದೆ ಬೇಕು.

ಭಾರತದಲ್ಲಿ ಕಳೆದೊಂದು ದಶಕದಲ್ಲಿ ಕೃಷಿ ವಯಲದಲ್ಲಿ ಮಹತ್ತರ ಬದಲಾವಣೆ ಸಂಭವಿಸಿದೆ. 2001-12 ರಿಂದ 2008-19ರ ಅವಧಿಯಲ್ಲಿ ಕೃಷಿಯ ಮೌಲ್ಯ ವರ್ಧನೆಯಲ್ಲಿ ದವಸ ಧಾನ್ಯಗಳ ಪಾಲು ಶೇ. 65.4ರಿಂದ ಶೇ. 55.3ಕ್ಕೆ ಇಳಿಕೆಯಾಗಿದೆ. 2024-25ರ ವೇಳೆಗೆ ಇದು  ಶೇ. 45.6ಕ್ಕೆ ತಗ್ಗುವ ನಿರೀಖ್ಷೆ ಇದೆ. ಬೆಳೆಗಳಲ್ಲಿ ದವಸ ಧಾನ್ಯ÷ಗಳಿಗೆ ಮಾತ್ರ ಎಂಎಸ್‌ಪಿ ಸಿಗುತ್ತಿದೆ. ಇದೇ ಅವಧಿಯಲ್ಲಿ ಪಶು ಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಕುಕ್ಕುಟೋದ್ಯಮ ಇತ್ಯಾದಿಗಳ ಪಾಲು ಹೆಚ್ಚುತ್ತಿದೆ. ಕೃಷಿಯಲ್ಲಿ ಉಪ ಕಸುಬುಗಳಂತಿದ್ದ ತೋಟಗಾರಿಕೆ, ಹಾಲು, ಮಾಂಸೋತ್ಪಾದನೆಯ ವಲಯದ ಮೌಲ್ಯ ಗಮನಾರ್ಹ ಏರುತ್ತಿದೆ. ಇದು ಕೃಷಿ ವಲಯದ ವೈವಿಧ್ಯತೆ ಹಾಗೂ ರೈತರ ಆದಾಯ ವೃದ್ಧಿಗೆ ಪೂರಕ ಬೆಳವಣಿಗೆಗಳಾಗುತ್ತಿವೆ.

ವೈವಿಧ್ಯವಾದ ಕೃಷಿ ಉತ್ಪಾದನಾ ಕಾರ್ಯತಂತ್ರ, ದವಸ ಧಾನ್ಯಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ರೈತರ ಆದಾಯ ವೃದ್ಧಿಯ ದೃಷ್ಟಿಯಿಂದ ನಿರ್ಣಾಯಕವಾಗಿದೆ. ತಮ್ಮ ಉತ್ಪನ್ನಗಳಲ್ಲಿ ವೈವಿಧ್ಯತೆಯೊಂದಿಗೆ ಏಕ ಬೆಳೆಯ ಮೇಲಿನ ಅವಲಂಬನೆಯ ರಿಸ್ಕ್ ಅನ್ನು ರೈತರು ಇನ್ನಿಲ್ಲವಾಗಿಸುತ್ತಿದ್ದಾರೆ.

ಇತ್ತೀಚಿನ ಮೂರೂ ಕೃಷಿ ಕಾಯಿದೆಗಳು ರೈತರನ್ನು ಹೆಚ್ಚು ಸ್ವಂತAತ್ರಗೊಳಿಸುತ್ತವೆ. ಅವರ ಆದಾಯ ಗಳಿಕೆಯ ಸಾಮರ್ಥ್ಯವನ್ನು ವೃದ್ಧಿಸುತ್ತವೆ. ಒಂದೇ ಬೆಳೆಯ ಮೇಲಿನ ಅವಲಂಬನೆಯ ಅಪಾಯಗಳನ್ನು ದೂರ ಮಾಡುತ್ತವೆ. ಎಲ್ಲಿ ಉತ್ತಮ ದರ ಸಿಗುತ್ತದೆಯೋ ಅಲ್ಲಿ ಅವರು ಮಾರುವ ಸ್ವಾತಂತ್ರ್ಯ ಸಿಗುತ್ತದೆ.

ಗುತಿಗೆ ಆಧಾರಿತ ಕೃಷಿ ಪದ್ಧತಿ ಈಗ ಮತ್ತಷ್ಟು ಸುಧಾರಿತವಾಗುತ್ತಿದೆ. ರೈತರು ಗುತ್ತಿಗೆಯ ಮೂಲಕ ವೈವಿಧ್ಯಮಯ ಉತ್ಪನ್ನಗಳನ್ನು ಬೆಳೆಯಬಹುದು. ಖರೀದಿಯ ಖಾತರಿಯೂ ಗುತ್ತಿಗೆಯಿಂದ ಲಭಿಸುತ್ತದೆ. ಆಹಾರ ಸಂಸ್ಕರಣೆ ಉದ್ದಿಮೆಯ ಬೆಳವಣಿಗೆಗೂ ಇದು ಪೂರಕ. ಇದೇ ವೇಳೆ ಸರಕಾರದ ಎಂಎಸ್‌ಪಿ ಕೂಡ ಇರುತ್ತದೆ.  ಸರಕಾರ ೨೦೨೦ರ ಸೆಪ್ಟೆಂಬರ್ ವೇಳೆಗೆ ೧,೦೮೨ ಕೋಟಿ ರೂ. ವೆಚ್ಚದಲ್ಲಿ 5.73 ಲಕ್ಷ ಟನ್ ಭತ್ತವನ್ನು ಎಂಎಸ್‌ಪಿ ಅಡಿಯಲ್ಲಿ ಖರೀದಿಸಿತ್ತು.

ಭಾರತೀಯ ರೈತರ ಜೀವನೋಪಾಯ ಸುಧಾರಣೆಗೆ ಕೃಷಿ ವ್ಯವಸ್ಥೆಯ ಸುಧಾರಣೆ ಅವಶ್ಯಕ.  ಅವರನ್ನು ಸಬ್ಸಿಡಿ ಮತ್ತು ಎಪಿಎಂಸಿ ಹಾಗೂ ಅಗತ್ಯ ವಸ್ತುಗಳ ಕಾಯಿದೆಗಳಂಥ ಕಾಯಿದೆಗಳ ಕಟ್ಟುಪಾಡಿಗೆ ಒಳಗಾಗಿಸುವುದು ಅವರ ಹಾಗೂ ದೇಶದ ದೀರ್ಘಕಾಲೀನ ಹಿತದೃಷ್ಟಿಯಿಂದ ಉಚಿತವಲ್ಲ. ಇದನ್ನು ಮನಗಂಡು ಮೋದಿ ಸರಕಾರ ಅಗತ್ಯವಾಗಿರುವ ಬದಲಾವಣೆಗಳನ್ನು ತರುತ್ತಿದೆ.

ಸುಧಾರಣೆಯ ಪ್ರಕ್ರಿಯೆಗಳು ಕೃಷಿ ಉತ್ಪನ್ನಗಳಿಗೆ ಆನ್‌ಲೈನ್ ಟ್ರೇಡಿಂಗ್ ಕಲ್ಪಿಸುವುದರೊಂದಿಗೆ ಆರಂಭವಾಗಿತ್ತು. ಕೃಷಿ ಉತ್ಪಬನ್ನಗಳ ಮಾರಾಟಕ್ಕೆ ನ್ಯಾಶನಲ್ ಅಗ್ರಿಕಲ್ಚರ್ ಮಾರ್ಕೆಟ್ (ಇ-ನ್ಯಾಮ್) ಸ್ಥಾಪಿಸಲಾಯಿತು. ನಂತರ ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ  ೯ ಕೋಟಿ ರೈತರಿಗೆ ವಾರ್ಷಿಕ 6,000ರೂ. ಪ್ರಾಥಮಿಕ ನೆರವು ನೀಡುವ ಯೋಜನೆಗೆ ಚಾಲನೆ ನೀಡಲಾಯಿತು. ಎಂಎಸ್‌ಪಿಯಿಂದ ಪ್ರಯೋಜನ ಪಡೆಯದಿರುವ ರೈತರಗೆ ಈ ನೆರವು ವಿತರಿಸಲಾಯಿತು. ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಪ್ರಯೋಜನ ಪಡೆಯುತ್ತಿರುವ ರೈತರು ಕೇವಲ 6 ಪರ್ಸೆಂಟ್ ಮಾತ್ರ. ಅದೂ ಮುಖ್ಯವಾಗಿ ಪಂಜಾಬ್ ಹಾಗೂ ಹರಿಯಾಣದ ರೈತರಿಗೆ ಮಾತ್ರ. ಹೀಗಾಗಿ ಕೋವಿಡ್ ಬಿಕ್ಕಟ್ಟಿನ ಸಂದರ್ಭ ರೈತರ ಹಿತದೃಷ್ಟಿಯಿಂದ ಯೋಜನೆನಿರ್ಣಾಯಕವಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದ ರೈತರ ಬೆಂಬಲಕ್ಕೆ ಕೆಲ ಮಹತ್ವದ ಯೋಜನೆಗಳು ಬಂದಿವೆ. ಮುಖ್ಯವಾಗಿ ಒಟ್ಟು ೨ ಲಕ್ಷ ಕೋಟಿ ರೂ. ಸಾಲ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ. ಬೆಳೆಗಳ ಕೊಯ್ಲಿನ ಸಂದರ್ಭ ಒದಗುವ ಕಾರ್ಮಿಕ ವೆಚ್ಚಗಳಿಗೆ ಇದು ಆಸರೆಯಾಗಿದೆ. ಈ ಸಾಲ ಸೌಲಭ್ಯಕ್ಕೆ ಆಧಾರ್ ಅನ್ನು ಸಂಪರ್ಕಿಸುವುದರಿಂದ ಕ್ರೆಡಿಟ್ ಹಿಸ್ಟರಿ ಸೃಷ್ಟಿಯಾಗುತ್ತದೆ ಹಾಗೂ ಅದರ ಆಧಾರದಲ್ಲಿ ಸಾಲ ವಿಸ್ತರಣೆಯೂ ಸುಗಮವಾಗುತ್ತದೆ.

ಆತ್ಮನಿರ್ಭರ್ ಭಾರತ್ ಯೋಜನೆಯಡಿಯಲ್ಲಿ 1 ಲಕ್ಷ ಕೋಟಿ ರೂ.ಗಳ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪಿಸಲಾಗಿದೆ. ಇದು ಬಹಳ ಮಹತ್ವಪೂರ್ಣ. ಇದರಿಂದ ರೈತರ ಕೃಷಿ ಸಹಕಾರ ಸೊಸೈಟಿ, ರೈತರ ಉತ್ಪಾದಕ ಸಂಸ್ಥೆಗಳು (ಎಫ್ ಪಿಒ), ಕೃಷಿ ಉದ್ಯಮಿಗಳು, ಸ್ಟಾರ್ಟಪ್‌ಗಳ ಅಭಿವೃದ್ಧಿಗೆ ನೆರವು ಸಿಗಲಿದೆ. ಕೊಯ್ಲಿನ ನಂತರದ ನಿರ್ವಹಣೆ, ಶೀಥಲೀಕರಣ ಘಟಕ ಸ್ಥಾಪನೆ, ಗೋದಾಮುಗಳ ಸ್ಥಾಪನೆ, ಕಿರು ಆಹಾರ ಸಂಸ್ಕರಣೆ ಘಟಕಗಳ ಸ್ಥಾಪನೆಗೆ ಸಹಾಯಕವಾಗಲಿದೆ.

ಕೃಷಿ ಕಾಯಿದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಮತ್ತು ಸ್ಥಾಪಿತ ಹಿತಾಸಕ್ತಿಗಳ ಮುಖವಾಡಗಳನ್ನು ಬಯಲುಗೊಳಿಸಿವೆ. ಕೃಷಿ ಕಾಯಿದೆಗಳ ನಂತರವೂ ಸರಕಾರ ಎಂಎಸ್‌ಪಿ ಮೂಲಕ ಧಾನ್ಯ÷ಗಳನ್ನು ಖರೀದಿಸಿದೆ. ಪಿಎಂ ಕಿಸಾನ್ ಸಮ್ಮಾನ್ ಮೂಲಕ ಹಣಕಾಸು ನೆರವು ವಿತರಿಸಿದೆ. ಸಬ್ಸಿಡಿ ಯೋಜನೆಗಳನ್ನು ಮುಂದುವರಿಸಿದೆ.

ಸದ್ಯಕ್ಕೆ ಭಾರತದ ಜಿಡಿಪಿಯಲ್ಲಿ (ಆರ್ಥಿಕ ಬೆಳವಣಿಗೆ) ಕೃಷಿಯ ಪಾಲು ಶೇ.೧೭ರಷ್ಟಿದೆ. ಕಾಲಾಂತರದಲ್ಲಿ ಈ ಸರಕಾರಿ ಬೆಂಬಲಿತ ಮಾದರಿಗಳ ಅವಲಂಬನೆಯಿAದ ಸ್ವತಂತ್ರವಾದಾಗ ರೈತರ ಆದಾಯ ವೃದ್ಧಿಯಾಗಲಿದೆ. ಜಿಡಿಪಿಗೆ ಕೃಷಿ ವಲಯದ ಪಾಲೂ ಹೆಚ್ಚಲಿದೆ. ಸದ್ಯ ದೇಶದ ದುಡಿಯುವ ವಗ್ದಲ್ಲಿ ೪೩ ಪರ್ಸೆಂಟ್ ಮಂದಿ ಕೃಷಿ ಮತ್ತು ಸಂಬAಧಿತ ವಲಯದಗಳನ್ನು ಅವಲಂಬಿಸಿದ್ದಾರೆ. ಅವರಿಗೂ ಈ ಉದಾರೀಕರಣದ ಪ್ರಯೋಜನ ಸಿಗಲಿದೆ.

(ಮುಂದುವರಿಯುವುದು)

ಲೇಖಕರ ಫೇಸ್ ಬುಕ್ ಬರಹವನ್ನು ಇಲ್ಲಿ ಬಳಸಲಾಗಿದೆ.

ಲೇಖಕರು:  ಕೇಶವ ಪ್ರಸಾದ್ ಬಿ., ಕಿರಿಯ ಸಹಾಯಕ ಸಂಪಾದಕ, ವಿಜಯ ಕರ್ನಾಟಕ

The post ಹಾಲು, ಪೌಲ್ಟ್ರಿಗೆ ಎಂಎಸ್‌ಪಿ ಇಲ್ಲ. ಆದರೂ ಬೆಳವಣಿಗೆ ದಾಖಲಿಸಿದ್ದು ಹೇಗೆ? ನೂತನ ಕೃಷಿ ಕಾಯಿದೆಯಿಂದ ಯಾರಿಗೆ ಲಾಭ? first appeared on Vishwa Samvada Kendra.

ಜಗತ್ತು ಗೆದ್ದವನಿಂದ ಸಾವಿಗೆ ‌ತೊಡೆ ತಟ್ಟಿದವರ ವರೆಗಿನ ಜೀವಂತ ಬದುಕುಗಳು ‘ಗಂಧದ ಮಾಲೆ’ಯಲ್ಲಿದೆ.

$
0
0
ಲೇಖಕರು: ರೋಹಿತ್ ಚಕ್ರತೀರ್ಥ
ಪ್ರಕಾಶಕರು: ಅಯೋಧ್ಯೆ ಪ್ರಕಾಶನ
ಪುಸ್ತಕಗಳಿಗಾಗಿ ಸಂಪರ್ಕಿಸಿ: 9620916996
ಪುಸ್ತಕ ಪರಿಚಯ : ಸಚಿನ್ ಪಾರ್ಶ್ವನಾಥ್

ಈ ಪುಸ್ತಕದ ಕರ್ತೃ ರೋಹಿತ್ ಚಕ್ರತೀರ್ಥ. ರಾಶಿ ರಾಶಿ ಮಾಹಿತಿಗಳ ಆಸ್ಥೆಯಿಂದ ಆರಿಸಿ ತಂದು ತಂದು ಚಂದದ ಮಾಲೆ ಕಟ್ಟುವುದು ರೋಹಿತರಿಗೆ ಸಿದ್ಧಿಸಿದ ವಿದ್ಯೆ. ಅವರ ಅಂಕಣಗಳ ಗುಚ್ಛವೇ ಈ ಗಂಧದ ಮಾಲೆ. ಬದುಕಿನಲ್ಲಿ ಎಷ್ಟೇ ವೈರುಧ್ಯವಿರಲಿ, ವ್ಯಸ್ತತೆಯಿರಲಿ ಎಲ್ಲವನ್ನೂ ಬದಿಗೆ ಸರಿಸಿ ಒಮ್ಮೆ ಅವರ ಯಾವುದಾದರೊಂದು ಪುಸ್ತಕ ತೆರೆಯಿರಿ. ತುಟಿಯ ಮೇಲೆ ಒಂದು ಪುಟ್ಟ ನಗು, ಕಣ್ಣುಗಳಲ್ಲಿ ನಿಲ್ಲದೇ ಓಡುವ ಕಾತುರ ಎಲ್ಲಿಯಾದರೂ ನಿಂತಿತು ಎಂದರೆ ಕೇಳಿ. ಮಿಗಿಲಾಗಿ ಈ ಸಾಲುಗಳು ನನ್ನ ವಿಮರ್ಶೆಯಲ್ಲ, ನನ್ನ ಅನುಭವ.

ಶ್ರೀ ರೋಹಿತ್ ಚಕ್ರತೀರ್ಥ ಅವರು ದಿನಪತ್ರಿಕೆಗೆ‌ ಬರೆಯುತ್ತಿದ್ದ ವ್ಯಕ್ತಿಚಿತ್ರಗಳ ಸಂಗ್ರಹ ಈ ಗಂಧದ ಮಾಲೆ. ಇನ್ನಷ್ಟು ಬೇಕೆನಿಸುವ ರುಚಿ ಹುಟ್ಟಿಸುವ ಹಲವು ವಿಶಿಷ್ಟತೆಗಳ ಸಂಗ್ರಹ. ನಿಮ್ಮ ಮೇಜಿನ ಮೇಲಿನ ಕಾಫಿ ಹಾಗೇ‌ ಇರುತ್ತದೆ, ಆದರೆ ಪುಸ್ತಕದೊಳಗಿನ ನಿಮ್ಮ ತಲೆಯನ್ನು ಹೊರ ಜಗತ್ತಿಗೆ ಬಿಡದಷ್ಟು ಕುತೂಹಲ ಕಟ್ಟುವ ಪುಸ್ತಕ. ಓದಲು ಕುಳಿತಿರೆಂದರೆ ಪದಗಳ ಪರ್ಯಟನೆಗೆ ಕುಳಿತಂತೆ. ಅಮೆರಿಕೆಯ ಈಸಿ ಎಡ್ಡಿಯಿಂದ ಹಿಡಿದು ವಿರಾಟ್ ಕೊಹ್ಲಿ, ಕಲ್ಪನಾ ಚಾವ್ಲಾ ಹೀಗೆ ಹಲವರು ತಮ್ಮ ಬಗ್ಗೆ ಹೇಳುತ್ತಾರೆ. ಬದುಕು ಕಟ್ಟಿಕೊಂಡವನ ಕತೆಯಿಂದ ಹಿಡಿದು ನಾಡು ಕಟ್ಟಿದವ, ದೇಶ ಕಟ್ಟಿದವ, ಜಗತ್ತು ಗೆದ್ದವ ಕೊನೆಗೆ ಸಾವಿಗೂ ‌ತೊಡೆ ತಟ್ಟಿದವರ ಜೀವಂತ ಬದುಕುಗಳಿದೆ. ಎಲ್ಲಿಯ ತನಕ ಎಂದರೆ ಅಕ್ಷರಮತ್ತನಾದ ಓದುಗನ ಪಾತ್ರಗಳು ಬಂದು ತೋಳುಗಳಿಗೆ ಭುಜ ಕೊಟ್ಟು ದೂರ ಒಯ್ದಂತೆ.

ಗಂಧದ ಮಾಲೆ ಹೊತ್ತಿಗೆಯ ಒಂದೆರಡು ತುಣುಕುಗಳ ಹಂಚಿಕೊಳ್ಳುವೆ. ಪುಟ್ಟ ಕಂದಮ್ಮಗಳ ಚಂದದ ಕಿರು ಪದ್ಯಗಳ ಹೆಕ್ಕಿ ತಂದು ಗಂಧದ ಮಾಲೆಗೆ ಘಮ್ಮೆನ್ನುವ ಗುಲಾಬಿ ಬಣ್ಣದ ಹೂಗಳ ಪೊಣಿಸಿದ್ದಾರೆ.

ಈ ಒಂದು ಮನೆಯನ್ನು

ನಾವು ಬಿಡುತ್ತಿದ್ದೇವೆ

ಆ ಮನೆಗೆ ಬೇರೆಯವರು

ಬರುತ್ತಾರೆ

ಇದು ಅಕಾಲಿಕ ಮರಣ ಹೊಂದಿದ ಹತ್ತರ ಹರೆಯದ ಪೂರ್ಣನ ಕವಿತೆ ಎಂದರೆ ನೀವು ನಂಬಲೇಬೇಕು. ಇನ್ನೊಂದು ಘಟನೆ. ತನ್ನ ನಾಯಿಯ ಕಳೆದುಕೊಂಡ ಪುಟ್ಟ ಬಾಲಕನ ಕುರಿತು.

ಕ್ಯಾನ್ಸರ್ ಪೀಡಿತ ಕೊನೆಯ ಹಂತದಲ್ಲಿದ್ದ ಸಾಕು ನಾಯಿ ಬೇಲ್ಕರ್‌ಗೆ ದಯಾಮರಣದ ಚುಚ್ಚುಮದ್ದು ಕೊಟ್ಟ ಡಾಕ್ಟರ್ ಮೈಕ್ ಶಿಷ್ಟಾಚಾರ ಪಾಲಿಸಿ, ರಾನ್ ಕುಟುಂಬದೊಂದಿಗೆ ಕೆಲವು ನಿಮಿಷಗಳನ್ನು ಕಳೆದರು. ಬೆಕ್ಕು ನಾಯಿಗಳಿಗೆಲ್ಲ ಹೆಚ್ಚೆಂದರೆ 12 ವರ್ಷ ಬದುಕುತ್ತವೆ. ಪಾಪ ಅಷ್ಟು ಚಿಕ್ಕ ಆಯುಸ್ಸನ್ನು ದೇವರು ಯಾಕೆ ಕೊಟ್ಟನೋ ಏನೋ – ಎಂಬ ಮಾತು ಬಂತು. ಅದುವರೆಗೆ ಆ ಎಲ್ಲ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ರಾನ್ ಮಗ ಶೇನ್ ಥಟ್ಟನೆ “ಯಾಕೆ ಅನ್ನೋದು ನನಗೆ ಗೊತ್ತು ಡಾಕ್ಟರ್” ಎಂದ.

“ಹೌದ?”

“ಹೌದು” ಎನ್ನುತ್ತಾ ಎಲ್ಲರ ಮಧ್ಯೆ ಜಿಗಿದು ಡಾಕ್ಟರ್ ಮೈಕ್ ರನ್ನು ನೋಡುತ್ತ ಹೇಳಿದ “ನೋಡಿ ಡಾಕ್ಟರ್, ಈಗ ಮನುಷ್ಯ 100 ವರ್ಷ ಬದುಕ್ತಾ‌ನೆ. ಯಾಕೆ ಅಷ್ಟು ದೊಡ್ಡ ಲೈಫ್ ಕೊಟ್ಟಿದ್ದಾನೆ ದೇವರು ಹೇಳಿ. ಯಾಕೇ ಅಂದ್ರೆ ಮನುಷ್ಯ ಹುಟ್ಟಿದ ಮೇಲೆ ಬೇರೆಯವರ ಜೊತೆ ಹೊಂದಿಕೊಂಡು ಹೋಗೋದನ್ನು ಕಲೀಬೇಕು. ಎಲ್ಲರನ್ನೂ ಪ್ರೀತಿಯಿಂದ ನೋಡೋದನ್ನು ಕಲೀಬೇಕು. ಮನೆಯವರ ಜೊತೆ ಯಾವತ್ತೂ ಖುಷಿಯಾಗಿರೋದು ಹೇಗೆ ಅನ್ನೋದನ್ನು ಕಲೀಬೇಕು. ಪ್ರಾಮಾಣಿಕನಾಗಿರುವುದನ್ನು ಕಲೀಬೇಕು. ಇಷ್ಟೆಲ್ಲಾ ವಿಷಯ ಕಲಿತು ಅಳವಡಿಸಿಕೊಂಡು ಬದುಕಬೇಕು ಅಂದ್ರೆ ನೂರು ವರ್ಷ ಬೇಕು. ಆದ್ರೆ ನಾಯಿಗೆ ಅದೆಲ್ಲ ವಿಷಯ ಕಲೀಬೇಕಾದ ಅಗತ್ಯವೇ ಇರೋದಿಲ್ಲ. ಯಾಕೇಂದ್ರೆ ಹೊಂದಿಕೊಂಡು ಹೋಗೋದು, ಪ್ರೀತಿ ಮಾಡೋದು, ಪ್ರಾಮಾಣಿಕನಾಗಿರೋದು ಇವನ್ನೆಲ್ಲ ಅದು ಹುಟ್ತಾನೇ ಕಲ್ತೇ ಬಂದಿರೋದ್ರಿಂದ, ಇಲ್ಲಿ ಈ ಜಗತ್ತಲ್ಲಿ ಕೇವಲ ಬದುಕಿಹೋದ್ರೆ ಆಯ್ತು ನೋಡಿ! ಅದಕ್ಕೆ ದೇವರು ನಾಯಿಗೆ 12 ವರ್ಷ ಬದುಕೋದಕ್ಕೆ ಅಂತ ಮಾತ್ರ ಕೊಟ್ಟಿದ್ದಾನೆ.”

ಎಂತಹ ಘಟನೆ. ಇಂತಹ ನೂರಾರು ಘಟನೆಗಳ ಸಂಗ್ರಹ ರೋಹಿತ್‌ಚಕ್ರತೀರ್ಥ ಅವರ ಗಂಧದಮಾಲೆ. ಓದಲೇಬೇಕಾದ ಪುಸ್ತಕ.

ಯಾವುದೇ ವಿಷಯವನ್ನು ಈಚೆಯಿಂದ ಆಚೆಗೆ ಯಾರಾದರೂ ಮುಟ್ಟಿಸಿ ಬಿಡುತ್ತಾರೆ. ಆದರೆ ತನ್ನತನವನ್ನು ಬೆರೆಸುವುದು ಆ ವಿಷಯವನ್ನು ಅರ್ಥೈಸಿಕೊಂಡವರಿಗೆ ಮಾತ್ರ ಸಾಧ್ಯ. ಅನವರತ ಮಮತೆಯಿಂದ ಚಕ್ರತೀರ್ಥ ಅವರು ಪುಟ್ಟ ಪುಟ್ಟ ವೈಶಿಷ್ಟ್ಯತೆಗಳನ್ನು ಹೆಕ್ಕಿ ಪೋಣಿಸಿದ್ದಾರೆ. ಮೂಲ ವಸ್ತುವಿಗೆ ಧಕ್ಕೆ ಬಾರದಂತೆ ಆಪ್ತತೆಯ ಹೆಣೆಯುವ ಕೆಲಸ ಅವರಿಗೆ ಸಿದ್ಧಿಸಿದೆ. ಒಮ್ಮೆಯಾದರೂ ಗಂಧದ ಮಾಲೆ ಆಸ್ವಾದಿಸಿ ಬಿಡಿ.

ಪುಸ್ತಕ ಪರಿಚಯ : ಸಚಿನ್ ಪಾರ್ಶ್ವನಾಥ್
ಬ್ಯಾಂಕ್ ಉದ್ಯೋಗಿ ಮತ್ತು ಹವ್ಯಾಸಿ ಬರಹಗಾರ, ಸಾಗರ, ಶಿವಮೊಗ್ಗ

The post ಜಗತ್ತು ಗೆದ್ದವನಿಂದ ಸಾವಿಗೆ ‌ತೊಡೆ ತಟ್ಟಿದವರ ವರೆಗಿನ ಜೀವಂತ ಬದುಕುಗಳು ‘ಗಂಧದ ಮಾಲೆ’ಯಲ್ಲಿದೆ. first appeared on Vishwa Samvada Kendra.

ಸೋನಿಯಾ ಗಾಂದಿಗೆ ಆಪ್ತರಾಗಿರುವುದೇ ಅಮರ್ತ್ಯಸೇನ್ ರ ಅರ್ಹತೆ

$
0
0

ಅಮರ್ತ್ಯಸೇನ್ ದೇಶದ ಪ್ರತಿಷ‍್ಠಿತ ಯೋಜನೆಗಳಿಗೆ ಹಳ್ಳ ಹಿಡಿಸಿರುವುದಕ್ಕೇ ಹೆಸರುವಾಸಿ. ಯಾವುದೇ ಅರ್ಹತೆ ಇಲ್ಲದಿದ್ದರೂ ಪ್ರತಿಷ್ಠಿತ ಹುದ್ದೆಗಳು ಅಮರ್ತ್ಯಸೇನ್ ಗೆ ದೊರಕುತ್ತಿದ್ದವು. ಅಮರ್ತ್ಯಸೇನ್ ಅವರಿದ್ದ ಏಕೈಕ ಅರ್ಹತೆ ಅವರು ಗಾಂಧಿ ಕುಟುಂಬ ಅದರಲ್ಲಿಯೂ ಮುಖ್ಯವಾಗಿ ಸೋನಿಯಾ ಗಾಂಧಿಯವರಿಗೆ ನಿಕಟವರ್ತಿಯಾಗಿದ್ದರು ಎಂಬುದು.

ಇದಕ್ಕೆ ತಾಜಾ ಉದಾಹರಣೆ ನಾಲಂದಾ ವಿಶ್ವವಿದ್ಯಾಲಯದ ಪುನರುಜ್ಜೀವನದಂತಹ ಉದಾತ್ತ ಯೋಜನೆ ಅಮರ್ತ್ಯಸೇನರಂತಹ ಅಡಕಸಬಿಗಳ ಕೈಯಲ್ಲಿ ಸಿಲುಕಿ ನಲುಗುತ್ತಿರುವುದು. ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕನಸಿನ ಈ ಯೋಜನೆಯನ್ನು ಅಮರ್ತ್ಯಸೇನ್ ಹೇಗೆ ಕುಲಗೆಡಿಸಿದರು ಎಂದು ತಿಳಿದಲ್ಲಿ ಅಮರ್ತ್ಯಸೇನ್ ಯಾರು ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ.

ನಲಂದಾ ವಿಶ್ವವಿದ್ಯಾಲಯ:

ಹಿಂದೂಧರ್ಮ, ಬೌದ್ಧಧರ್ಮ – ಎರಡೂ ಉಚ್ಛ್ರಾಯಸ್ಥಿತಿಯಲ್ಲಿದ್ದ ಕಾಲದಲ್ಲಿ ಭಾರತದ ಪ್ರಮುಖ ಮಹಾವಿದ್ಯಾಲಯವಾಗಿ ಏರ್ಪಟ್ಟಿದ್ದುದು ಬಿಹಾರದ ನಾಲಂದಾ. ಎಲ್ಲ ಆಸಕ್ತರಿಗೆ ವಸತಿಸಹಿತ ನಿಃಶುಲ್ಕ ಶಿಕ್ಷಣ ಅಲ್ಲಿ ಲಭ್ಯವಿತ್ತು. ಭಾರತದೆಲ್ಲೆಡೆಯಿಂದ ಮಾತ್ರವಲ್ಲದೆ ಟಿಬೆಟ್, ಚೀನಾ, ಜಪಾನ್, ಶ್ರೀಲಂಕಾ, ಜಾವಾ, ಸುಮಾತ್ರಾ, ಕೋರಿಯಾ, ಇಂಡೊನೇಷಿಯ, ಇರಾನ್, ಟರ್ಕಿ, ಗ್ರೀಸ್ ಮೊದಲಾದ ದೇಶಗಳಿಂದಲೂ ವಿದ್ಯಾರ್ಥಿಗಳು ನಾಲಂದಾಕ್ಕೆ ಬರುತ್ತಿದ್ದರು. ಸಂಸ್ಕೃತ ಮಾಧ್ಯಮದಲ್ಲಿ ಅಲ್ಲಿ ಬೋಧಿಸಲ್ಪಡುತ್ತಿದ್ದ ಪ್ರಮುಖ ವಿಷಯಗಳು ವ್ಯಾಕರಣ, ತರ್ಕ, ಖಗೋಳಶಾಸ್ತ್ರ, ಜ್ಯೌತಿಷ, ವೈದ್ಯಕೀಯ, ಗಣಿತ, ವೇದ-ವೇದಾಂಗಳು, ಯೋಗ, ದರ್ಶನಶಾಸ್ತ್ರ.

ಯೂರೋಪಿನಲ್ಲಿ ಕ್ರೈಸ್ತಮತದ ಪ್ರಭಾವ ಅಧಿಕಗೊಂಡಂತೆ ಅಧ್ಯಯನ ಹಿಂದೆ ಬಿದ್ದಿತ್ತು. ಅಲೆಕ್ಸಾಂಡ್ರಿಯದ ಅಪಾರ ಗ್ರಂಥಸಂಗ್ರಹದ ದಹನ, ಹಿಪೇಶಿಯಾಳಂತಹ ಜಗದ್ವಿಖ್ಯಾತ ವಿದುಷಿಯನ್ನು ಕ್ರೈಸ್ತರು ಅವಮಾನಿಸಿ ಕೊಂದದ್ದು – ಇವೆಲ್ಲ ಪ್ರಸಿದ್ಧ ಸಂಗತಿಗಳು. ಇಂತಹ ಕ್ರೈಸ್ತ ಮತಾವೇಶದಿಂದಾಗಿ ಹಲವು ಶತಮಾನಗಳ ಕಾಲ ವಿದ್ವತ್ತೆಯ ದೃಷ್ಟಿಯಿಂದ ಯೂರೋಪ್ ಅಂಧಕಾರಮಯವಾಗಿತ್ತು.

ಸುವರ್ಣಯುಗ

ಭಾರತದಲ್ಲಾದರೋ ಅದು ಸಾರಸ್ವತೋಪಾಸನೆಯ ದೃಷ್ಟಿಯಿಂದ ಸುವರ್ಣಯುಗವೇ ಆಗಿದ್ದಿತು. ಬಿಹಾರದಲ್ಲಿ ನಾಲಂದಾ, ವಿಕ್ರಮಶೀಲ, ಓದಂತಪುರಿ; ಬಂಗಾಳದಲ್ಲಿ ಜಗದ್ದಲ ಮತ್ತು ಸೋಮಪುರ; ಒಡಿಶಾದಲ್ಲಿ ಪುಷ್ಪಗಿರಿ; ಉತ್ತರಪ್ರದೇಶದಲ್ಲಿ ವಾರಾಣಸಿ; ಆಂಧ್ರಪ್ರದೇಶದಲ್ಲಿ ನಾಗಾರ್ಜುನಕೊಂಡ; ತಮಿಳುನಾಡಿನಲ್ಲಿ ಕಂಚಿ; ಕರ್ನಾಟಕದಲ್ಲಿ ಮಾನ್ಯಖೇಟ; ಗುಜರಾತಿನಲ್ಲಿ ವಲ್ಲಭೀ; ಕಶ್ಮೀರದಲ್ಲಿ ಶಾರದಾ; ತಕ್ಷಶಿಲಾ (ಈಗಿನ ಪಾಕಿಸ್ತಾನ); ಹೀಗೆ ಭಾರತದೆಲ್ಲೆಡೆ ವಿದ್ಯಾಕೇಂದ್ರಗಳು ವಿಜ್ಯಂಭಿಸಿದ್ದವು. ಅವುಗಳಿಗೆ ಮಕುಟಪ್ರಾಯವಾಗಿದ್ದದ್ದು ಬಿಹಾರದಲ್ಲಿ ಪಟ್ನಾಕ್ಕೆ ೯೫ ಕಿ.ಮೀ ಆಗ್ನೇಯದಿಕ್ಕಿನಲ್ಲಿ ಕ್ರಿ.ಶ. ೫ನೇ ಶತಮಾನದಲ್ಲಿ ಸ್ಥಾಪನೆಗೊಂಡಿದ್ದ ನಾಲಂದಾ. ಅಲ್ಲಿಂದಾಚೆಗೆ ಆರುನೂರು ವರ್ಷಗಳೇ ಅದು ಉತ್ತುಂಗಸ್ಥಿತಿಯಲ್ಲಿ ಮುಂದುವರಿದಿತ್ತು. ಇಂತಹ ಭವ್ಯ ಶಿಕ್ಷಣಸಂಕೀರ್ಣವು ವಿಧ್ವಂಸಕ ಬಖ್ತಿಯಾರ್ ಖಿಲ್ಜಿಗೆ ಕ್ರಿ.ಶ. ೧೧೯೭ರಲ್ಲಿ ಆಹುತಿಯಾದದ್ದು ಇತಿಹಾಸ.

ಒಂದೊಮ್ಮೆ ಏಕಕಾಲದಲ್ಲಿ ೧೦,೦೦೦ ವಿದ್ಯಾರ್ಥಿಗಳೂ ೩,೦೦೦ ಆಚಾರ್ಯರೂ ವಾಸಿಸುತ್ತಿದ್ದು ಅನೇಕ ಸಭಾಗೃಹಗಳೂ ಅಧ್ಯಯನಕಕ್ಷಗಳೂ ಮಾತ್ರವಲ್ಲದೆ ೮ ವಿಶಾಲ ಉದ್ಯಾನಗಳು, ೧೦ ಭವ್ಯ ಮಂದಿರಗಳು, ಜಗತ್ತಿನಲ್ಲಿಯೆ ಪ್ರತಿಷ್ಠಿತವೆನಿಸಿದ್ದ ಗ್ರಂಥಭಂಡಾರ ಮೊದಲಾದವುಗಳಿಂದ ವಿರಾಜಮಾನವಾಗಿದ್ದುದು ನಾಲಂದಾ.

`ಧರ್ಮಗಂಗಾ’ ಎಂಬ ಹೆಸರಿನ ೯ ಅಂತಸ್ತಿನ ಗ್ರಂಥಭಂಡಾರದಲ್ಲಿ ಎಲ್ಲ ಜ್ಞಾನಾಂಗಗಳಿಗೆ ಸಂಬಂಧಿಸಿದ ಲಕ್ಷಾಂತರ ಗ್ರಂಥಗಳು ಸಂಗ್ರಹಗೊಂಡಿದ್ದವು. ಖಿಲ್ಜಿಯಿಂದ ದಹಿಸಲ್ಪಟ್ಟ ಗ್ರಂಥಭಂಡಾರ ತಿಂಗಳುಗಳ ಕಾಲ ಉರಿಯುತ್ತಿತ್ತೆಂಬ ಹೇಳಿಕೆಗಳಿವೆ.

ವಿದ್ಯಾರ್ಥಿಗಳ ಆಯ್ಕೆ ಎಷ್ಟು ಕಟ್ಟುನಿಟ್ಟಾಗಿ ಇರುತ್ತಿತ್ತೆಂದರೆ ಅವರಿಗೆ ಕನಿಷ್ಠ ಸಂಸ್ಕೃತಜ್ಞಾನ ಇದೆಯೆ ಎಂಬುದನ್ನು ದ್ವಾರಪಾಲಕರೇ ಪರೀಕ್ಷಿಸಿ ನಿರ್ಣಯಿಸುತ್ತಿದ್ದರು.

ಬಿಹಾರದಲ್ಲಿಯೆ ಇದ್ದ ವಿಕ್ರಮಶೀಲ, ಓದಂತಪುರಿ ವಿದ್ಯಾಲಯಗಳಲ್ಲಿಯೂ ನಾಲ್ಕಾರು ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಇವೂ ಮುಸ್ಲಿಂ ಆಕ್ರಮಕರ ದಾಂಧಲೆಗೆ ಗುರಿಯಾದವು.

ಆ ಭವ್ಯ ನಾಲಂದಾ ವಿದ್ಯಾಲಯದ ಪುನರುಜ್ಜೀವನ ಪ್ರಯತ್ನವನ್ನು ನಗೆಪಾಟಲಾಗಿಸಿದ ಕೀರ್ತಿಗೆ ಅಮರ್ತ್ಯಸೇನ್ ಭಾಜನರಾಗಿದ್ದಾರೆ.

ನಿರೀಕ್ಷೆ; ಭ್ರಮನಿರಸನ

ಭಾರತೀಯ ಸಂಸ್ಕೃತಿಯ ಮತ್ತು ಇಡೀ ಜಗತ್ತಿನ ಶಿಕ್ಷಣಪರಂಪರೆಯ ಒಂದು ಅತ್ಯುನ್ನತ ಪ್ರತೀಕವೆಂದು ವಿಶ್ವಮಾನ್ಯತೆಗೆ ಪಾತ್ರವಾಗಿದ್ದ ನಾಲಂದಾ ವಿಶ್ವವಿದ್ಯಾಲಯವನ್ನು ಒಂದು ಜಾಗತಿಕ ಮಟ್ಟದ ವಿದ್ಯಾಕೇಂದ್ರವಾಗಿ ಪುನರುಜ್ಜೀವಿಸುವ ಯೋಜನೆ ಘೋಷಿತವಾದಾಗ ಸಹಜವಾಗಿ ಭಾರತದೆಲ್ಲೆಡೆ ಉತ್ಸಾಹದ ಅಲೆಯೆದ್ದಿತ್ತು. ಕ್ರಿ.ಶ. ೧೨ನೇ ಶತಮಾನದ ಅಂತ್ಯದಲ್ಲಿ ಧ್ವಂಸಗೊಳ್ಳುವುದಕ್ಕೆ ಹಿಂದಿನ ಕಾಲದಲ್ಲಿ ಜಪಾನ್, ಕೋರಿಯಾ ಮೊದಲಾದ ಅನೇಕ ದೇಶಗಳಿಂದಲೂ ದೊಡ್ಡಸಂಖ್ಯೆಯಲ್ಲಿ ಶಿಕ್ಷಾರ್ಥಿಗಳನ್ನು ಆಕರ್ಷಿಸುತ್ತಿದ್ದ ನಾಲಂದಾ ವಿಶ್ವವಿದ್ಯಾಲಯದ ಹಿರಿಮೆಯ ಬಗೆಗೆ ಚೀನೀ ಪ್ರವಾಸಿಗ ಹ್ಯೂಯನ್‌ತ್ಸಾಂಗ್ ದಾಖಲೆ ಮಾಡಿರುವ ವಿವರಗಳು ಪ್ರಸಿದ್ಧವಾದುವು. ನಾಲಂದಾ ಪುನರುತ್ಥಾನ ಯೋಜನೆಗೆ ಆಸ್ಟ್ರೇಲಿಯ, ಜಪಾನ್, ವಿಯೆಟ್ನಾಂ ಮೊದಲಾದ ದೇಶಗಳಿಂದ ಉತ್ಸಾಹಪೂರ್ವಕ ಪ್ರತಿಕ್ರಿಯೆ ಬಂದಿತು. ಇಂತಹ ಉದಾತ್ತವೂ ಪ್ರತಿಷ್ಠಿತವೂ ಆದ ಯೋಜನೆ ಆರಂಭ ದಶೆಯಿಂದಲೇ ವಿವಾದಕ್ಕೆ ಸಿಲುಕಿದುದು ವಿಷಾದನೀಯ. ಪಾರಂಪರಿಕ ಜ್ಞಾನಾಂಗಗಳ ಅಧ್ಯಯನ-ಅಧ್ಯಾಪನಗಳೇ ಹೃದಯವಾಗಿದ್ದ ಜಗತ್ಪ್ರಸಿದ್ಧ ವಿದ್ಯಾಕೇಂದ್ರದ ಪುನರವತರಣಕ್ಕೆ ಪಾರಂಪರಿಕ ಜ್ಞಾನಾಂಗಗಳ ಎಷ್ಟು ಮಾತ್ರ ಹಿನ್ನೆಲೆಯೂ ಇಲ್ಲದ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರನ್ನು ಉಪಕುಲಪತಿಯಾಗಿ ನಿಯುಕ್ತಿ ಮಾಡಿದಾಗಲೇ ಈ ಯೋಜನೆಯ ಬಗೆಗೆ ಸಾರ್ವಜನಿಕರಲ್ಲಿ ಭ್ರಮನಿರಸನ ಶುರುವಾಯಿತು.

ಅಮರ್ತ್ಯಸೇನ್ ಅನೇಕ ವರ್ಷಗಳಿಂದ ಪಾರಂಪರಿಕವಾದದ್ದನ್ನೆಲ್ಲ ಭರ್ತ್ಯನೆ ಮಾಡುವ ಜಾಯಮಾನದವರೆಂಬುದು ಸುವಿದಿತವೇ ಆಗಿದೆ. ಈ ಹಿನ್ನೆಲೆಯಲ್ಲಿ ಅವರು ನೂತನ ವಿಶ್ವವಿದ್ಯಾಲಯ ಯೋಜನೆಯನ್ನು ತಮ್ಮ ಎಂದಿನ `ಅಜೆಂಡಾ’ಕ್ಕಾಗಿ ಬಳಸಿಕೊಂಡರು ಎಂಬ ಆಪಾದನೆ ನಿರಾಧಾರವೆನಿಸದು.

ಮುಸ್ಲಿಮರ ಹಿಂಸಾಪ್ರವಣತೆಯನ್ನು `ಇದು ಅವರ ರಕ್ತಗತ ಸ್ವಭಾವ’ ಎಂದು ಅಮರ್ತ್ಯಸೇನ್ ಸಮರ್ಥಿಸಿದ್ದಿದೆ. ಆದರೆ ಅದಕ್ಕೆ ಪ್ರತೀಕಾರವೆಸಗುವ ಅಧಿಕಾರ ಹಿಂದೂಗಳಿಗೆ ಇಲ್ಲವೆಂಬುದು ಅಮರ್ತ್ಯಸೇನ್ ಅವರ ಪ್ರಾಜ್ಞ ಮಂಡನೆ. ವಿವರಣೆ ಅನಾವಶ್ಯಕ. ತಮ್ಮ `ರಕ್ತಗತ ಸ್ವಭಾವ’ದ ಬಗೆಗೆ ಹೆಮ್ಮೆಪಡುವ ಅಧಿಕಾರವನ್ನು ಅಮರ್ತ್ಯಸೇನ್ ಮುಸ್ಲಿಮರಿಗೆ ಮಾತ್ರ ನೀಡಿದ್ದಾರೆ.

ಅಮರ್ತ್ಯಸೇನ್ ಸೋನಿಯಾಗಾಂಧಿಯವರಿಗೂ ಮನಮೋಹನ್ಸಿಂಗ್ರವರಿಗೂ ನಿಕಟವರ್ತಿಯಾಗಿದ್ದುದು ಹುದ್ದೆಗೆ ಅವರ ಏಕೈಕ ಅರ್ಹತೆಯಾಗಿತ್ತು

ನಾಲಂದಾದಂತಹ ವಿಶ್ವವಿದ್ಯಾಲಯದ ಕುಲಪತಿ ಉಪಕುಲಪತಿ ಸ್ಥಾನಗಳಿಗೆ ಇಡೀ ದೇಶದಲ್ಲಿಯೆ ವಿದ್ವತ್ತಿಗಾಗಿ ಪ್ರತಿಷ್ಠಿತರಾದಂತಹವರನ್ನು ನೇಮಿಸಬೇಕು – ಎಂದು ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ೪ನೇ ಜುಲೈ ೨೦೧೧ರಷ್ಟು ಹಿಂದೆಯೆ ಆಗಿನ ಕೇಂದ್ರ ಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಪತ್ರ ಬರೆದಿದ್ದರು. ಅಮರ್ತ್ಯಸೇನ್ ನಡವಳಿಗಳಿಂದ ಡಾ| ಅಬ್ದುಲ್ ಕಲಾಂ ಎಷ್ಟು ನಿರಾಶರಾಗಿದ್ದರೆಂದು ಇದರಿಂದ ಊಹಿಸಬಹುದು. (ನಾಲಂದಾ ವಿಶ್ವವಿದ್ಯಾಲಯ ಪುನರುತ್ಥಾನ ಯೋಜನೆಗೆ ೨೦೦೬ರಲ್ಲಿ ಜನ್ಮವಿತ್ತಿದ್ದವರೇ ಡಾ|| ಕಲಾಂ.) ಹಲವಾರು ಶ್ರೇಷ್ಠ ವಿದ್ವಾಂಸರು ಲಭ್ಯವಿರುವಾಗ ವಿದ್ವತ್ತಿನ ಹಿನ್ನೆಲೆಯಿಲ್ಲದ ಅಮರ್ತ್ಯಸೇನ್ ಅಂತಹವರನ್ನು ಪ್ರಮುಖರನ್ನಾಗಿ ನೇಮಿಸಿದುದನ್ನು ಡಾ|| ಕಲಾಂ ಹಲವು ಬಾರಿ ಟೀಕಿಸಿದ್ದರು.

ಸ್ವೈರಾಚಾರ; ನಿಯಮೋಲ್ಲಂಘನ ಸರಣಿ

೨೦೧೦ರ ಮೇ ತಿಂಗಳಿನಷ್ಟು ಹಿಂದೆಯೆ ಸರ್ಕಾರವು ವಿಧಿಬದ್ಧವಾಗಿ ಅಧಿನಿಯಮವನ್ನು ರಚಿಸಿದ್ದು ಅದೇ ವರ್ಷ ಸೆಪ್ಟೆಂಬರ್ ೨೧ರಂದು ಅದಕ್ಕೆ ರಾಷ್ಟ್ರಪತಿಗಳು ಅನುಮೋದನೆಯ ಅಂಕಿತ ಮಾಡಿದ್ದರು. ಆ ಸೂಚನಾವಳಿಯನ್ನು ಅಮರ್ತ್ಯಸೇನ್ ಅವರಾಗಲಿ ಯಾರೇ ಆಗಲಿ ಅಲಕ್ಷಿಸುವುದನ್ನು ಸಮರ್ಥನೀಯ ಎನ್ನಬಹುದೆ?

ನಾಲಂದಾ ಯೋಜನೆಯ ಪೂರ್ವಪರಿಶೀಲನೆಗಾಗಿ ಅಮರ್ತ್ಯಸೇನ್ ಅವರನ್ನೊಳಗೊಂಡ ೧೧ ಸದಸ್ಯರ ಸಮಾಲೋಚನ ಸಮಿತಿಯೊಂದು ಯು.ಪಿ.ಎ. ಸರ್ಕಾರದಿಂದ ಘಟಿತವಾಗಿತ್ತು. ಆದರೆ ನಾಲಂದಾ ವಿಶ್ವವಿದ್ಯಾಲಯ ಅಧಿಕೃತವಾಗಿ ಉದ್ಘಾಟನೆಗೊಂಡ ಮೇಲೂ ಅಮರ್ತ್ಯಸೇನ್ ಮೇಲೆ ಪ್ರಸ್ತಾವಿಸಿದ ಸಮಾಲೋಚನ ಸಮಿತಿಯ ಪರಾಮರ್ಶನೆಯನ್ನೆ ಆಧಾರವಾಗಿರಿಸಿಕೊಂಡು ನೂತನ ವಿದ್ಯಾಲಯದ ಪಾಠ್ಯಾದಿ ಕಾರ್ಯಕ್ರಮಗಳನ್ನು ನಿರ್ಣಯಿಸತೊಡಗಿದರು. ಇದು ವಿವಾದಾಸ್ಪದವಾಯಿತು. ಆ ವೇಳೆಗೇ ಸರ್ಕಾರದಿಂದ ಪ್ರಕಟಗೊಳಿಸಲಾಗಿದ್ದ ಅಧಿನಿಯಮಗಳನ್ನು ಉಪೇಕ್ಷಿಸಲಾಗಿತ್ತು.

೯ ತಿಂಗಳೊಳಗೆ ನಾಲಂದಾಕ್ಕೆ ಸಂಬಂಧಿಸಿದ ಸವಿವರ `ಪ್ರಾಜೆಕ್ಟ್ ರಿಪೋರ್ಟ್’ ಸಲ್ಲಿಸಬೇಕಾಗಿದ್ದ ಅಮರ್ತ್ಯಸೇನ್ ೩ ವರ್ಷಗಳಾದ ಮೇಲೂ ಅದನ್ನು ಸಿದ್ಧಪಡಿಸಲಿಲ್ಲ. ಆದರೂ ಅವರದೇ ಮಂಡಳಿ ಅವರನ್ನು  ಚಾನ್ಸೆಲರ್ ಪದವಿಗೆ ೨೦೧೧ರಲ್ಲಿ ನಿಯುಕ್ತಿ ಮಾಡಿದುದು ಒಂದು ವೈಚಿತ್ರ್ಯ.

ಅಲ್ಲಿಂದೀಚೆಗೆ ನಿಯಮೋಲ್ಲಂಘನೆಗಳ ಸರಣಿಯೇ ಶುರುವಾಯಿತು. ಉಪಕುಲಪತಿ ಸ್ಥಾನಕ್ಕೆ ನಿಯುಕ್ತಿಗೊಂಡ ಗೋಪಾ ಸಬರವಾಲ್ ಅವರು ಆ ಸ್ಥಾನಕ್ಕೆ ಯಾವ ದೃಷ್ಟಿಯಿಂದಲೂ ಅರ್ಹರಾಗಿರಲಿಲ್ಲ. ಅವರು ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗದಲ್ಲಿ ರೀಡರ್ ಮಾತ್ರವಾಗಿದ್ದವರು; ನಾಲಂದಾದ ಪೂರ್ವಾಪರಗಳ ಬಗೆಗೆ ಪರಿಜ್ಞಾನ ಇರದವರು. ಯಾವುದೇ ಉಪಕುಲಪತಿ ಸ್ಥಾನದ ಅಭ್ಯರ್ಥಿಗಳಿಗೆಂದು ಯುಜಿಸಿ ವಿಧಿಸಿರುವ ಅರ್ಹತೆಗಳನ್ನೂ ಅವರು ಪಡೆದವರಲ್ಲ. ನಾಲಂದಾದಲ್ಲಿ ಅವರಿಗೆ ನೀಡಲಾದ ಮಾಸಿಕ ವೇತನ ರೂ. ೫.೬ ಲಕ್ಷ ಎಂದರೆ ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿಯ ವೇತನದ ಎರಡರಷ್ಟು.

ವಿಷಯ ಅಲ್ಲಿಗೆ ಮುಗಿಯಲಿಲ್ಲ. ಗೋಪಾ ಸಬರವಾಲ್ ಅವರು ತಮ್ಮ ಓರಗೆಯವರಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರಾಧ್ಯಾಪಕ ಅಂಜನಾ ಶರ್ಮಾ ಅವರನ್ನು ನಾಲಂದಾಕ್ಕೆ `ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ’ ಆಗಿ ಕರೆಯಿಸಿಕೊಂಡರು. (ಮಾಸಿಕ ವೇತನ ರೂ. ೩.೩ ಲಕ್ಷ. ಇದೂ ದೇಶದ ಯಾವುದೇ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿರುವುದಕ್ಕಿಂತ ಅಧಿಕ.)

ನೇಮಕಾತಿಗಳೂ ಕಲಾಪಗಳೂ ಸ್ವೇಚ್ಛೆಯಾಗಿ ನಡೆದಿದ್ದವೆನ್ನಲು ಪುರಾವೆಗಳ ಕೊರತೆಯಿಲ್ಲ. ಅಮರ್ತ್ಯಸೇನ್ ತಮ್ಮ ಸ್ವಘಟಿತ ಸಲಹಾ ಮಂಡಳಿಯಲ್ಲಿ ತತ್ಕಾಲೀನ ಪ್ರಧಾನಮಂತ್ರಿಗಳ ಪುತ್ರಿ ಉಪಂದಿರ್ ಸಿಂಹರನ್ನೂ ಸೇರಿಸಿದ್ದರು; ಆಕೆಯ ಸಹಯೋಗಿ ನಯನಜ್ಯೋತಿ ಲಾಹಿರಿ ಎಂಬಾಕೆಗೂ `ತಜ್ಞ’ ಪಟ್ಟವನ್ನು ಕೊಟ್ಟಿದ್ದರು. ಈ ಇಬ್ಬರೂ ಯಾವುದೇ ಶಾಸ್ತ್ರದ ತಜ್ಞರೆಂದು ಪ್ರತಿಷ್ಠಿತರಾದವರಲ್ಲ.

ನೂತನ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ತರುವಾಯವೂ ಅಮರ್ತ್ಯಸೇನ್ ತಮ್ಮ ಕಾರುಬಾರುಗಳನ್ನು ದೆಹಲಿಯಲ್ಲಿದ್ದುಕೊಂಡೇ ನಡೆಸಿದ್ದರು.

ದಿಶಾಹೀನತೆ

ಹಣಕಾಸಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ದೂರವಿರಿಸುವ ಆಶಯದಿಂದ ಮನಮೋಹನ್‌ಸಿಂಗ್ ಸರ್ಕಾರ ನಾಲಂದಾವನ್ನು `ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ’ ಎಂದು ಕರೆದರೂ, ವ್ಯಾವಹಾರಿಕ ಸ್ತರದಲ್ಲಿ ಅದನ್ನು ಒಂದು `ಕೇಂದ್ರೀಯ ವಿಶ್ವವಿದ್ಯಾಲಯ’ ಎಂದೇ ಸರ್ಕಾರ ಪರಿಗಣಿಸಿತ್ತು. ಅದರ ಖರ್ಚಿನ (ರೂ. ೧೦೦೦ ಕೋಟಿ) ಅಧಿಕಾಂಶವನ್ನು ನೀಡಿರುವವರು ಭಾರತದ ತೆರಿಗೆದಾರರು.

ಆರಂಭದಿಂದಲೇ ನಿರೀಕ್ಷೆ ಇದ್ದದ್ದು ನೂತನ ವಿಶ್ವವಿದ್ಯಾಲಯವು ಕೂಡಿದಮಟ್ಟಿಗೂ ಹಿಂದೆ ಎಂದರೆ ೧೨ ನೇ ಶತಮಾನದವರೆಗೆ ಇದ್ದ ಸ್ಥೂಲ ಪ್ರಾಕಾರವನ್ನು (ಉದಾ: ಬೌದ್ಧಧರ್ಮ ಅಧ್ಯಯನಕ್ಕೆ ಪ್ರಾಧಾನ್ಯ, ಇತ್ಯಾದಿ) ಉಳಿಸಿಕೊಂಡಿರಬೇಕೆಂಬುದು. ಹೀಗಿದ್ದಾಗ ನೂತನ ವಿಶ್ವವಿದ್ಯಾಲಯದ ಅಂಗವಾಗಿ ಮಾಹಿತಿ ತಂತ್ರಜ್ಞಾನ ವಿದ್ಯಾಲಯವನ್ನು ಸ್ಥಾಪಿಸಿದುದು ಅಮರ್ತ್ಯಸೇನ್ ಪಡೆಯ ದಿಶಾಹೀನತೆಯನ್ನು ಇನ್ನಷ್ಟು ಸ್ಫುಟಪಡಿಸಿತು.

ಎಂತಹವರೂ ಲಜ್ಜೆಪಡಬೇಕಾದ ರೀತಿಯಲ್ಲಿ ಸ್ವೈರವಾಗಿ ನಿಯಮಗಳನ್ನು ಗಾಳಿಗೆ ತೂರಿ ಸದುದ್ದೇಶದ ಯೋಜನೆಯನ್ನು ಪಥಭ್ರಷ್ಟಗೊಳಿಸಿರುವ ಅಮರ್ತ್ಯಸೇನ್ ಈಗಿನ ಅವಧಿಯ ನಂತರ (ಜುಲೈ ೨೦೧೫) ಸರ್ಕಾರವು ತಮ್ಮ ಚಾನ್ಸೆಲರ್ ಹುದ್ದೆಯನ್ನು ಮುಂದುವರಿಸುವ ಇಚ್ಛೆಯನ್ನು ತೋರದಿರುವಾಗ “ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮಧ್ಯಪ್ರವೇಶ ನಡೆಯುತ್ತಿದೆ” (`ದಿ ಇಂಡಿಯನ್ ಎಕ್ಸ್‌ಪ್ರೆಸ್’, ೨೦-೫-೨೦೧೫) ಎಂದೆಲ್ಲ ಹಾರಾಡಿದ್ದಾರೆ.

ಒಂದು ವಿಕಟತೆಯನ್ನು ಗಮನಿಸಬಹುದು: ಉದ್ದಿಷ್ಟ ನಾಲಂದಾ ಯೋಜನೆಗೆ ನಿರ್ದೇಶಕರಾಗಿ ಎಷ್ಟು ಮಾತ್ರವೂ ಯೋಗ್ಯತೆ ಇಲ್ಲದ ತಮ್ಮನ್ನು ಮನಮೋಹನ್‌ಸಿಂಗ್ ಸರ್ಕಾರವು ನೇಮಿಸಿದ್ದಾಗ ಅದು `ಶಿಕ್ಷಣದಲ್ಲಿ ರಾಜಕಿಯ ಹಸ್ತಕ್ಷೇಪ’ ಎಂದು ಅಮರ್ತ್ಯಸೇನ್ ಮಹಾಶಯರಿಗೆ ಅನಿಸದಿದ್ದದ್ದು ವಿಚಿತ್ರವಲ್ಲವೆ?

ಸ್ವತಂತ್ರರಾಗಿರಬೇಕಾಗಿದ್ದ ಅಮರ್ತ್ಯಸೇನ್ ಯು.ಪಿ.ಎ. ಸರ್ಕಾರದ ಹಸ್ತಕರಾಗಿಯೂ ಫಲಾನುಭವಿಯಾಗಿಯೂ ವರ್ತಿಸಿದುದು ಅವರ ಕ್ಷುದ್ರತೆಯನ್ನು ಎತ್ತಿತೋರಿಸಿತು. ಪದೇ ಪದೇ `ನನ್ನ ಮಿತ್ರ ಮನಮೋಹನ್‌ಸಿಂಗ್’ ಕುರಿತು ಮಾತನಾಡುತ್ತಿದ್ದರು. ಸದಾ ಏನೇನೊ ಹುಳುಕುಗಳನ್ನು ಅನ್ವೇಷಿಸುವ ಅಮರ್ತ್ಯಸೇನ್‌ರಿಗೆ ಯು.ಪಿ.ಎ. ಅಧಿಕಾರಾವಧಿಯಲ್ಲಿ ಆಕ್ಷೇಪಾರ್ಹವಾದ ಒಂದು ಸಂಗತಿಯೂ ಗೋಚರಿಸಲಿಲ್ಲ. ಮೊದಲಿನಿಂದ ಅವರು ಭಾಜಪಕ್ಕೂ ಮತ್ತು ನರೇಂದ್ರಮೋದಿಯವರಿಗೂ ವಿರೋಧವನ್ನು ಸತತವಾಗಿ ವ್ಯಕ್ತಪಡಿಸಿದ್ದರು. ಈ ಅಭ್ಯಾಸ ಈಗಲೂ ಮುಂದುವಿರಿದಿದೆ. ಅಮರ್ತ್ಯಸೇನ್ ಸೋನಿಯಾಗಾಂಧಿಯವರಿಗೂ ಮನಮೋಹನ್‌ಸಿಂಗ್‌ರವರಿಗೂ ನಿಕಟವರ್ತಿಯಾಗಿದ್ದುದು ಈ ಹುದ್ದೆಗೆ ಅವರ ಏಕೈಕ ಅರ್ಹತೆಯಾಗಿತ್ತು – ಎಂಬುದು ಜನಜನಿತ. ಇಂತಹ ಅನೇಕ ಹುದ್ದೆಬಿರುದುಗಳಿಗೆ ಪಾತ್ರವಾಗಿಸಿದವರ ಋಣವನ್ನು ಅವರು ತೀರಿಸಬೇಡವೇ?

ಕೃಪೆ: ಉತ್ಥಾನ ಮಾಸಪತ್ರಿಕೆ

The post ಸೋನಿಯಾ ಗಾಂದಿಗೆ ಆಪ್ತರಾಗಿರುವುದೇ ಅಮರ್ತ್ಯಸೇನ್ ರ ಅರ್ಹತೆ first appeared on Vishwa Samvada Kendra.


Parenting lessons a plenty from Bhagavad Gita writes Smitha Rao

$
0
0

Parenting lessons a plenty from Bhgavad Gita
– Smitha Rao

I was a mother of two little children when I turned to Gita. It was a difficult phase in my life where my conscience was put to test and demanded introspection of my actions. I had to dig deep to find my true self organically. As a parent, the consequences of my actions would definitely have a bearing on physical, emotional and moral well being of my children. 

As time went by, my children had some very pragmatic questions about Bhagavdh Gita. My daughter, then six, had asked her grandmother who diligently watched Gita Pravachana on TV with great devout as to why would her grandma consider Gita supreme as it is rendered by a notorious boy from Mathura? Another interesting observation by most kids in my family was, why would Bhagvadh Gita book always finds its place at the pooja room or someplace considered special and holy? Why was the book dealt with so much reverence? 

I should admit, because of lack of exposure to Gita as a child or even as an adult, I had no instant or definitive answers to such questions. Having said that, children had asked those questions out of curiosity but had no real intention to find the answers. Nevertheless, the mysticism about Gita is present even today. Any one-time explanation about Gita is not adequate to internalize it and adopt it. A constant dialogue about Gita at appropriate circumstances unravels its essence, its simplicity and its merit. 

I am noticing, slowly the awareness about Gita is expanding. Unlike a couple of decades ago, where Gita recitation was a predominant way of learning Gita, not understanding its essence in particular, today we have lots of books, discussions and resources targeting young minds and influencing them with our Belief system (Dharma). Irrespective of these abundant platforms children often find Gita as a knowledge form for when they grow up. I believe, unless some living room conversations happen regularly, the implementation of knowledge will be difficult. 

How and why would a parent bring in Gita during the early childhood years of their children? How can children comprehend the principles or practices of Gita? Aren’t they at a tender age to do so? My parenting mind is still puzzled with these thoughts. If I have to go with Gita, I have to resolute to doing my job as a parent without getting distracted. With honest efforts, results are sure to show and this is my approach to introducing Gita to my kids. The parent has to be prepared for this perpetual effort as Gita prompts both the parties, giver and the receiver with deeper perspective of Dharma every time. 

karmaṇy-evādhikāras te mā phaleṣhu kadāchana |
mā karma-phala-hetur bhūr mā te saṅgo ’stvakarmaṇi || (2:47)

Perform your duties without fail. Put in your best foot forward and be content. Action is more important than results. 

There have been many circumstances when my son or daughter have endlessly argued with me about the translations and explanations of Gita. My behaviour as an adult is judged by my children who would definitely recite a shloka in question but refuse its application. The idea is to let it happen. As they grow up and find themselves with no defending parent around, there is a good chance they would think of what their parents told them when they were young about Dharma in Gita, emotional balance or action over results (Karma) in Gita, for they would have subconsciously connected with it, in the process of evaluating right and wrongs as they judged us. 

sukha-duḥkhe same kṛitvā lābhālābhau jayājayau |
tato yuddhāya yujyasva naivaṁ pāpam avāpsyasi || (2:38)

We should attend to our duties with greater responsibility. We can do so by treating good and bad times, profit and loss, victory and failure alike, by staying neutral in our mind. 

As I started putting together this piece, I recollect yet another interesting question asked by a kid, rather a young adult in his later teen. It was a discussion organised by a popular group. The boy in question had asked “If Krishna was God, and knew about Duryodhana, he could have given Duryodhana Geethopadesha. Why Arjuna? Wasn’t Krishna kind enough towards Duryodhana?” I have tried to recollect the answer but I couldn’t. I probably remember the question because it was a pertinent one for me too at his age. From my own understanding of the Gita I have

discovered an answer. As I have mentioned earlier, I had zero exposure to Gita. When my friends at school won prizes at Gita recitation competitions, I was part jealous, totally ignorant and definitely a rebel, trying to excel at something else but Gita recitation. That was being part Duryodhana as well, I guess. The receiver has to seek, question, analyse and accept what is offered. Now, Arjuna was seeking it, despite being blessed with valour and competence, he was contemplating his actions and his thoughts. Hence, Gita is a Samvada (conversation). It is not one sided. It is a rational discussion of right versus wrong. Tarka (argument with reasoning) is a part of our religious beliefs and Gita symbolises it. Our children can start by learning to seek, if not learn everything through us, just the way the proverb goes, teach a man to fish and you feed him for life. 

krodhād bhavati sammohaḥ sammohāt smṛiti-vibhramaḥ|
smṛiti-bhranśhād buddhi-nāśho buddhi-nāśhāt praṇaśhyati  || (2:63)

Anger can be man’s worst enemy. It leads to clouded judgment. It causes confusion and bewilderment which in turn ruins intellect. When one loose intelligence they can never prosper. 

My parents’ strategy to raise us is ‘each one to his own’. Even as children, we were forgiven but we were held responsible for our actions. I have qualms about it even now, though I claim it as a lesson. I am sure my children will have qualms about our parenting too. That is how it is. The positives and negatives have to co-exist. They only take turns in showing up. 

mātrā-sparśhās tu kaunteya śhītoṣhṇa-sukha-duḥkha-dāḥ |
āgamāpāyino ’nityās tans-titikṣhasva bhārata || (2:14)

Oh Kaunteya! (son of Kunti) Just the way, we have summer and winter that follows each other, our happiness and sadness are also followed by each other. If we consider the two (good times and difficult times) as a temporary change we can experience best and worst times of our lives without being disturbed.

I am slowly understanding the concept of karma. Every individual is born with his or her own karmic memory. ‘Karma follows’, simply means, a person’s baggage from his previous birth. The good and the bad. If not for his prarabdha karma (bad karma), A character like Bhishma with his stance and decorum wouldn’t be on the side of Adharma (metaphor for kauravas) or without his punya (good karma) he wouldn’t be blessed with supreme of all, the viswaroopadarshana of Narayana. Everything to its own. Our children are born with such baggage. We are not the one to unpack it. We can only give them an idea of how or sometimes, why. They need to understand the balance. That balance is in the mind, a very personal space. It can only be nudged to think right externally but its host is the only one that can control it. 

bandhur ātmātmanas tasya yenātmaivātmanā jitaḥ |
anātmanas tu śhatrutve vartetātmaiva śhatru-vat || (6:6)

The mind is one’s best tool. The mind can be a man’s friend when controlled and focused on right things else, it can be man’s worst enemy.

With this, I have one last thing to share. It is never too early or never too late to understand or learn anything in life. We only have to subject and surrender ourselves to that thought. If the intent is honest the fruits are sure to be good. 

The post Parenting lessons a plenty from Bhagavad Gita writes Smitha Rao first appeared on Vishwa Samvada Kendra.

ಜಾತ್ಯತೀತತೆಯ ಮುಸುಕಿನಲ್ಲಿ ಕ್ರೈಸ್ತಮತ ಪ್ರಚಾರದ ಕುಟಿಲ ತಂತ್ರಗಳು

$
0
0

ಪುಸ್ತಕ ವಿಮರ್ಶೆ ಪರಿಚಯ: ಸತ್ಯನಾರಾಯಣ ಶಾನುಭಾಗ್

ಪೋರ್ಚುಗೀಸರಿಂದ ಆರಂಭಗೊಂಡ ಯೂರೋಪಿಯನ್ ವಸಾಹತು ಕಾಲದಲ್ಲಿ ಆಮದಾದ ಕ್ರೈಸ್ತಮತ ಪ್ರಚಾರ ವಿಷನರಿ’ರಿಗಳ ಚಟುವಟಿಕೆ ದೇಶದೆಲ್ಲೆಡೆ ತನ್ನ ಜಾಲವನ್ನು ವ್ಯವಸ್ಥಿತವಾಗಿ ಹರಡಿದೆ. ಭಾರತೀಯರನ್ನು ಕ್ರೈಸ್ತ ಮತಕ್ಕೆ ಮತಾಂತರಿಸುವುದು ಅವರ ಒಂದಂಶದ ಕಾರ್ಯಕ್ರಮವೆಂದು ಕಂಡುಬಂದರೂ ಅದರ ಮೂಲ ಉದ್ದೇಶ ಮತ್ತು ಮತಾಂತರದ ಕುಟಿಲ ಕಾರ್ಯತಂತ್ರಕ್ಕೆ ಇರುವ ಮುಖಗಳು ಅನೇಕ. ಭಾರತದಲ್ಲಿ ನಾನೂರು ವರ್ಷಗಳಿಗೂ ಮಿಕ್ಕಿ ನಡೆದಿರುವ ಕ್ರೈಸ್ತ ವಿಷನರಿ ಚಟುವಟಿಕೆಗಳ ಧೂರ್ತ ಕೆಲಸಗಳು ಮತ್ತು ಅದಕ್ಕೆ ಬಂದ ಪ್ರತಿರೋಧದ ಸ್ಥೂಲ ಪರಿಚಯವನ್ನು ಚಿಂತಕ-ಲೇಖಕ ಸೀತಾರಾಮ ಗೋಯಲ್ ಅವರ ’ಸ್ಯೂಡೋ ಸೆಕ್ಯುಲರಿಸಮ್ – ಕ್ರಿಶ್ಚಿಯನ್ ಮಿಶನ್ಸ್ ಆಂಡ್ ಹಿಂದು ರೆಸಿಸ್ಟನ್ಸ್’ ಎನ್ನುವ ಪುಸ್ತಕದಲ್ಲಿ ಕಾಣಬಹುದು. ಆಳವಾದ ಅಧ್ಯಯನ ಚಿಂತನೆಗಳ ಅನೇಕ ಮಹತ್ತ್ವದ ಗ್ರಂಥಗಳನ್ನು ಪ್ರಕಟಿಸಿದ ವಾಯ್ಸ್ ಆಫ್ ಇಂಡಿಯ ಪ್ರಕಾಶನ ಸಂಸ್ಥೆ ಹೊರತಂದ ಈ ಕೃತಿ ’ಹುಸಿ ಜಾತ್ಯಾತೀತವಾದ – ಕ್ರೈಸ್ತ ಮತಪ್ರಚಾರಕ ಸಂಸ್ಥೆಗಳು ಮತ್ತು ಹಿಂದೂ ಪ್ರತಿರೋಧ’ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ.

ಸ್ವಾತಂತ್ರ್ಯಾನಂತರ ಪ್ರಚುರಕ್ಕೆ ಬಂದ ಎರಡು ಪ್ರಮುಖ ಶಬ್ದ ಅಥವಾ ನುಡಿಗಟ್ಟುಗಳು ಅಲ್ಲಿಂದಿಲ್ಲಿಗೂ ಕ್ರೈಸ್ತ ಮತಪ್ರಚಾರಕರಿಗೆ ಅನುಕೂಲಕರವಾಗಿ ಬಳಕೆಯಾಗುತ್ತಿವೆ. ಮೊದಲನೆಯದಾಗಿ ಮತಾಂತರ ವಿರೋಧಿಸುವವರನ್ನು ಸುಮ್ಮನಾಗಿಸಲು ’ಹಿಂದೂ ಕೋಮುವಾದಿಗಳು’ ಎನ್ನುವ ನುಡಿಗಟ್ಟಿನ ಬಳಕೆ ಪ್ರಾರಂಭವಾಯಿತು. ಇಂದಿಗೂ ಯಾರಾದರೂ ಅಲ್ಪಸಂಖ್ಯಾತರು ಎಂದು ಕರೆಯಲ್ಪಡುವವರ ತುಷ್ಟೀಕರಣವನ್ನು ಪ್ರಶ್ನಿಸಿದರೆ ಸನಾತನ ಭಾರತೀಯ ಪರಂಪರೆಗಳ ಪರವಾಗಿ ಮಾತನಾಡಿದರೆ ಅವರಿಗೆ ’ಕೋಮುವಾದಿಗಳ’ ಪಟ್ಟ ಸಿದ್ಧವಾಗಿರುತ್ತದೆ. `ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಎಲ್ಲರೂ ಒಂದಾಗಬೇಕು’ ಎನ್ನುವ ಕರೆಗಳನ್ನು ನಾವು ರಾಜಕೀಯ ಚರ್ಚೆಗಳಲ್ಲಿ ಆಗಾಗ ಕೇಳುತ್ತಿರುತ್ತೇವೆ. ಇನ್ನೊಂದು ಯೂರೋಪಿನಿಂದ ಅನಾಮತ್ತಾಗಿ ಆಮದಾದ ’ಸೆಕ್ಯುಲರ್’ ಎನ್ನುವ ಶಬ್ದ. ಅದನ್ನು ’ಜಾತ್ಯತೀತ’ ಎಂದು ಕನ್ನಡದಲ್ಲಿ ಅನುವಾದ ಮಾಡಿದರೆ ಹಿಂದಿಯಲ್ಲಿ ’ಧರ್ಮ ನಿರಪೇಕ್ಷ’ ಎಂದು ಅನುವಾದಿಸಲಾಗುತ್ತದೆ. ’ಸೆಕ್ಯುಲರ್’ ಶಬ್ದದ ಮೂಲ ಇರುವುದು ಕ್ರಿಶ್ಚಿಯಾನಿಟಿಯಲ್ಲಿ. ’ಸೆಕ್ಯುಲರಿಸಮ್’ ಎಂದರೆ ರಾಜ್ಯದ ಆಡಳಿತದಿಂದ ರಿಲಿಜನ್‌ಅನ್ನು ಹೊರಗಿಡುವುದು, ರಿಲಿಜನ್ ಮತ್ತು ರಿಲಿಜನ್ನಿನ ವಿಷಯಗಳನ್ನು ಹೊರಗಿಡುವುದು, ಅವುಗಳ ಕುರಿತು ಅಸಡ್ಡೆ ಇತ್ಯಾದಿಯಾಗಿ ಎಲ್ಲ ಇಂಗ್ಲೀಷ್ ನಿಘಂಟುಗಳು ಅರ್ಥೈಸಿವೆ. ಇಲ್ಲಿ ರಿಲಿಜನ್ ಅಂದರೆ ಕ್ರಿಶ್ಚಿಯಾನಿಟಿ. ೧೮-೧೯ನೇ ಶತಮಾನದಲ್ಲಿ ಯೂರೋಪಿನ ದಾರ್ಶನಿಕ ಚಳುವಳಿ ಪ್ರಚಲಿತವಾಗಿದ್ದ ಕಾಲದಲ್ಲಿ ಈ ಪ್ರತ್ಯೇಕತೆ ಏಕೆ ಬಂತು ಎಂದರೆ ರಾಜ್ಯದ ಆಡಳಿತದಲ್ಲಿ ಚರ್ಚಿನ ಪ್ರಭಾವ ಮತ್ತು ಹಸ್ತಕ್ಷೇಪಗಳು ಹೆಚ್ಚಾದಾಗ ಅದನ್ನು ನಿಯಂತ್ರಿಸಬೇಕಾದ ಅಗತ್ಯ ಬಂದಿತ್ತು. ಆಗ ರಾಜಕೀಯ ವ್ಯವಸ್ಥೆಗೆ ನೀವು ಕೈಹಾಕಬೇಡಿ ಚರ್ಚಿನ ವ್ಯವಹಾರಕ್ಕೆ ನಾವು ಬರುವುದಿಲ್ಲ ಎಂದು ಮಾಡಿಕೊಂಡ ವ್ಯವಸ್ಥೆ ಈ ಸೆಕ್ಯುಲರಿಸಮ್. ಆದರೆ ಅದು ಭಾರತಕ್ಕೆ ಬರುತ್ತಲೇ ಜಾತ್ಯಾತೀತ ಎಂದು ಹೆಸರನ್ನು ಪಡೆದು ಸರ್ವಧರ್ಮ ಸಮಾನತೆ ಎನ್ನುವ ಅರ್ಥದಲ್ಲಿ ಬಳಕೆಯಾಗತೊಡಗಿತು. ಪಾಶ್ಚಾತ್ಯ ಶಬ್ದಕೋಶದಿಂದ ಈ ಶಬ್ದವನ್ನು ಹೆಕ್ಕಿತಂದ ಪ್ರಥಮ ಪ್ರಧಾನಮಂತ್ರಿ ನೆಹರು ಅದನ್ನು ವಿಸ್ತರಣಾವಾದಿ ಸಿದ್ಧಾಂತಗಳಾದ ಇಸ್ಲಾಮ್, ಕ್ರೈಸ್ತಮತ, ಕಮ್ಯೂನಿಸಮ್‌ಗಳ ರಕ್ಷಣೆಗೆ ಮತ್ತು ತನ್ನ ವಿರೋಧಿಗಳನ್ನು ಹಳಿಯಲು ಬಳಸಿಕೊಂಡರು. ನೋಡನೋಡುತ್ತಲೇ ಈ ಹುಸಿ ಸಿದ್ದಾಂತದ ಆಧಾರದ ಮೇಲೆ ಆರಂಭಗೊಂಡ ಸಂಸ್ಥೆಗಳು ಬೃಹದಾಕಾರವಾಗಿ ಬೆಳೆದು ಕಮ್ಯೂನಿಸಮ್, ಕ್ರಿಶ್ಚಿಯಾನಿಟಿಗಳ ಬೆಂಬಲಕ್ಕೆ ನಿಂತುಬಿಟ್ಟವು, ಅದಕ್ಕಾಗಿ ವಾಸ್ತವವನ್ನು ತಿರುಚಿ ವಿಕೃತಗೊಳಿಸುವ ಕೆಲಸ ಅನೂಚಾನಾಗಿ ನಡೆಯಿತು. ಸ್ವಾತಂತ್ರ್ಯಪೂರ್ವ ಅವಧಿಯಲ್ಲಿ ಅಷ್ಟೇಕೆ ಸಂವಿಧಾನ ರಚನೆಯ ಸಮಯದಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ ಎಲ್ಲೂ ಕಾಣದ ಈ ಶಬ್ದ ಕೊನೆಗೆ 1975ರಲ್ಲಿ ಸಂವಿಧಾನದ ಪ್ರಿಯಾಂಬಲ್‌ನಲ್ಲಿಯೂ ಸೇರಿಕೊಂಡುಬಿಟ್ಟಿತು. ಯುಗಯುಗಗಳಿಂದ ಅನೇಕತ್ವವನ್ನು ಪೋಷಿಸಿಕೊಂಡು ಬಂದ ಹಿಂದೂಧರ್ಮವನ್ನು ಹಳಿಯಲು ಕ್ರಿಶ್ಚಿಯನ್ ಮೂಲದ ’ಸೆಕ್ಯುಲರ್’ ಸಿದ್ದಾಂತ ಬಳಕೆಯಾಗುತ್ತಿರುವುದು ಮತ್ತು ಅದೇ ಕ್ರೈಸ್ತಮತದ ಪ್ರಚಾರದ ಬೆಂಬಲಕ್ಕೆ ನಿಂತಿರುವುದು ನೆಹರು ಆಡಳಿತ ಕಾಲದಲ್ಲಿ ಆರಂಭಗೊಂಡ ದೊಡ್ಡ ಪ್ರಮಾದಗಳಲ್ಲೊಂದು.

ಸ್ವಾತಂತ್ರ್ಯದ ಪೂರ್ವದಲ್ಲಿ ಯೂರೋಪಿನ ವಸಾಹತುದಾರರ ಪ್ರತಿನಿಧಿಯಂತೆ ಕಾಣುತ್ತಿದ್ದ ಕ್ರೈಸ್ತ ಮತಪ್ರಚಾರಕರಿಗೆ ತದನಂತರ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಬಲವಾಗಿದ್ದ ಹಿಂದೂ ಪ್ರತಿರೋಧವು ಕ್ಷೀಣಗೊಂಡಾಗ ಅನುಕೂಲವೇ ಆಯಿತು. ಹಾಗೆಯೇ ಮಹಾತ್ಮಾ ಗಾಂಧಿಯವರ ಸರ್ವಧರ್ಮ ಸಮಭಾವ ಸಿದ್ಧಾಂತ, ಭಾರತ ಸಂವಿಧಾನ ನೀಡಿದ ಮತಪ್ರಚಾರದ ಸ್ವಾತಂತ್ರ್ಯಗಳು ಮಿಷನರಿಗಳ ಕೈಯಲ್ಲಿ ದುರುಪಯೋಗ ಗೊಳ್ಳತೊಡಗಿದವು. ೧೯೬೪ರಲ್ಲಿ ಪ್ರಕಟವಾದ ’ದಿ ಕ್ಯಾಥೋಲಿಕ್ ಚರ್ಚ್ ಇನ್ ಇಂಡಿಯಾ : ಯೆಸ್ಟರ್ಡೇ ಆಂಡ್ ಟುಡೇ’ ಎನ್ನುವ ಪುಸ್ತಕದಲ್ಲಿ ಲೇಖಕ ಫೆಲಿಕ್ಸ್ ಆಲ್‌ಫ್ರೆಡ್ ಪ್ಲಾಟ್‌ನರ್ ಸ್ವಾತಂತ್ರ್ಯಾನಂತರ ಭಾರತದಲ್ಲಿ ಕ್ರಿಶ್ಚಿಯನ್ ಮತಪ್ರಚಾರಕರಿಗೆ ಒದಗಿ ಬಂದ ಒಳ್ಳೆಯ ಕಾಲದ ಬಗ್ಗೆ ಹೀಗೆ ಬರೆಯುತ್ತಾನೆ: ‘ಭಾರತದಲ್ಲಿ ಚರ್ಚ್ ಭಾರಿ ಸಂತೋಷಪಡಬೇಕು. ಏಕೆಂದರೆ ಭಾರತದ ಸಂವಿಧಾನ ಅದಕ್ಕೆ ಒಂದು ಸ್ವಚ್ಛಂದ ವಾತಾವರಣವನ್ನು ಕಲ್ಪಿಸಿದೆ. ಇದರಿಂದಾಗಿ ಸ್ವಾತಂತ್ರ್ಯ ಬಂದಾಗಿನಿಂದ ಚರ್ಚ್ ಯಾವುದೇ ಅಂಕೆ ಶಂಕೆಗಳಿಲ್ಲದೇ ಹಿಂದೆಂದೂ ಇಲ್ಲದಷ್ಟು ವ್ಯಾಪಕವಾಗಿ ತನ್ನ ಚಟುವಟಕೆಗಳನ್ನು ನಡಸಿಕೊಂಡು ಹೋಗಲು ಅನುಕೂಲವಾಗಿದೆ’.

ಪ್ರಧಾನಿ ನೆಹರು ೧೯೫೨ರ ಅಕ್ಟೋಬರ್ ೧೭ರಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಹೊರಡಿಸಿದ ಸುತ್ತೋಲೆಯಲ್ಲಿ ’ತನಗೆ ಕ್ರೈಸ್ತಮತ ಪ್ರಚಾರಕರಿಂದ ಮತ್ತು ಭಾರತೀಯ ಹಾಗೂ ವಿದೇಶಿ ಕ್ರೈಸ್ತಮತ ಪ್ರಚಾರಕರಿಂದ ಬಂದ ದೂರುಗಳಲ್ಲಿ ಕೆಲವು ರಾಜ್ಯಗಳಲ್ಲಿ ಅವರ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂದು ಕಂಡುಬಂದಿದೆ. ಕೆಲವೊಮ್ಮೆ ಕಿರುಕುಳ ನೀಡಲಾಗುತ್ತದೆ ಎಂದೂ ದೂರಲಾಗಿದೆ. ಅಂತಹ ಕೆಲವು ಘಟನೆಗಳು ನನ್ನ ಗಮನಕ್ಕೂ ಬಂದಿದೆ. ಈ ಬಗೆಯ ತಾರತಮ್ಯ ಏರ್ಪಡದಂತೆ ಸರ್ಕಾರಗಳು ವಿಶೇಷ ಗಮನ ಹರಿಸಬೇಕು’ ಎಂದು ಆದೇಶಿಸಿದರು. ಜೊತೆಗೆ ದಕ್ಷಿಣ ಭಾರತದಲ್ಲಿ ಕ್ರೈಸ್ತ ಮತಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇತರ ಧರ್ಮಗಳಂತೆಯೇ ಅದೂ ಕೂಡ ಭಾರತದ ಭಾಗವಾಗಿಬಿಟ್ಟಿದೆ ಎಂದು ಅಪ್ಪಣೆ ಕೊಡಿಸಿಬಿಟ್ಟರು. ಮುಂದುವರಿದು ’ನನ್ನನ್ನು ವಿಧರ್ಮೀಯ ಅನಾಗರಿಕನೆಂದು ನೋಡುವ ಯಾರೊಬ್ಬರೂ ನಮ್ಮ ದೇಶಕ್ಕೆ ಬರುವುದು ಬೇಕಿಲ್ಲ. ಯಾರೋ ಒಬ್ಬರು ನನ್ನನ್ನು ಅಜ್ಞಾನಿ ಅಥವಾ ಧರ್ಮಬಾಹಿರ ಎಂದು ಕರೆದರೆ ನನಗೇನೂ ನಷ್ಟವಿಲ್ಲ. ಆದರೆ ನಮ್ಮ ಬಗ್ಗೆ ಕೀಳಾಗಿ ಮಾತನಾಡುವ ಯಾವ ವಿದೇಶೀಯನೂ ಭಾರತಕ್ಕೆ ಬರುವುದು ನನಗೆ ಇಷ್ಟವಿಲ್ಲ. ಆದರೆ ಯಾರಾದರೂ ವಿದೇಶೀಯರು ಸಮಾಜಸೇವೆ ಮಾಡುತ್ತೇನೆಂದು ಬಂದರೆ ನಾನು ಅವರನ್ನು ಸ್ವಾಗತಿಸುತ್ತೇನೆ’ ಎನ್ನುವ ದ್ವಂದ್ವ ಮಾತುಗಳನ್ನು ಹೇಳಿದರು. ಇಂತಹ ಸದವಕಾಶಕ್ಕೇ ಕಾಯುತ್ತಿದ್ದ ಕ್ರೈಸ್ತ ಮತಪ್ರಚಾರಕ ಸಂಸ್ಥೆಗಳು ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳಲ್ಲಿ ದೇಶದೆಲ್ಲೆಡೆ ತಮ್ಮ ಬೇರುಗಳನ್ನು ಇಳಿಸತೊಡಗಿದವು.

ಹಿಂದೂ ಧರ್ಮ ಮತ್ತು ಕ್ರೈಸ್ತಮತದ ನಡುವಣ ಮುಖಾಮುಖಿಯಲ್ಲಿ ಲೇಖಕರು ಐದು ನಿರ್ದಿಷ್ಟ ಹಂತಗಳನ್ನು ಗುರುತಿಸುತ್ತಾರೆ. ಈ ಎಲ್ಲ ಹಂತಗಳಲ್ಲಿಯೂ ’ಕ್ರಿಸ್ತನೊಬ್ಬನೇ ಸತ್ಯ, ಅವರನೊಬ್ಬನೇ ದೇವರು’ ಹಾಗೂ ’ಹಿಂದೂಗಳು ಅವನನ್ನು ಒಪ್ಪಿಕೊಂಡರೆ ಮಾತ್ರ ಅವರಿಗೆ ಉಳಿಗಾಲ, ಇಲ್ಲವಾದರೆ ಇಲ್ಲ’ ಎನ್ನುವ ತಮ್ಮ ಮೂಲ ಸಿದ್ಧಾಂತಕ್ಕೆ ಕ್ರೈಸ್ತಮತ ಪ್ರಚಾರಕರು ಬಲವಾಗಿ ಅಂಟಿಕೊಂಡಿದ್ದಾರೆ ಎನ್ನುವುದನ್ನು ಒತ್ತಿ ಹೇಳುತ್ತಾರೆ. ಮೊದಲನೆಯ ಹಂತ ಪೋರ್ಚುಗೀಸ್ ಕಡಲ್ಗಳ್ಳರ ಆಗಮನದೊಂದಿಗೆ ಅದರಲ್ಲೂ ೧೫೪೨ರಲ್ಲಿ ಗೋವಾಕ್ಕೆ ಪ್ರಾನ್ಸಿಸ್ ಕ್ಸೇವಿಯರ್‌ನ ಆಗಮನದೊಂದಿಗೆ ಆರಂಭವಾಯಿತು. ಯೂರೋಪಿನಲ್ಲಿದ್ದಂತೆಯೇ ಇಲ್ಲಿಯೂ ಅದು ಅನಾಗರಿಕ ಭಾಷೆಯಲ್ಲಿ ಮತಪ್ರಚಾರವನ್ನು ನಡೆಸಲು ಆರಂಭಿಸಿತು. ಆದರೆ ಗೋವಾ ಮತ್ತಿತರ ಸಣ್ಣಪುಟ್ಟ ಪ್ರಾಂತಗಳನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ ಪೋರ್ಚುಗೀಸರು ಅಧಿಕಾರ ಕಳೆದುಕೊಂಡರು ಮತ್ತು ಇತರ ಯೂರೋಪಿನ ಅಧಿಪತ್ಯಗಳಿಗೆ ಕ್ರೈಸ್ತಮತದ ಕಡೆ ಬಹಳ ಗಮನಕೊಡದ ಕಾರಣ ಇದು ಸುದೈವವೋ ಎಂಬಂತೆ ಅಲ್ಪಾವಧಿಯದಾಗಿತ್ತು.

ಎರಡನೆಯ ಹಂತವು ೧೮೧೩ರಲ್ಲಿ ಮರಾಠರ ಅಂತಿಮ ಸೋಲಿನ ನಂತರ ಬ್ರಿಟಿ?ರ ಬಲವರ್ಧನೆಯಿಂದ ಆರಂಭವಾಯಿತು. ಬ್ರಿಟಿಷರು ಪ್ರಚಾರಕರಿಗೆ ಭೌತಿಕ ಬಲವನ್ನು ನೀಡದಿದ್ದರೂ ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಕ್ರಿಶ್ಚಿಯನ್ ಮತ ಬೆಳೆಯುವುದು ಪೂರಕ ಎಂದು ಪ್ರೋತ್ಸಾಹ ನೀಡಿದರು. ಆದರೆ ಹಿಂದೂ ಸುಧಾರಣಾವಾದಗಳ ಉತ್ಥಾನದೊಂದಿಗೆ – ಉದಾಹರಣೆಗೆ ಸ್ವಾಮಿ ದಯಾನಂದ ಸರಸ್ವತಿ ಹಾಗೂ ವಿವೇಕಾನಂದರಂತಹ ಧೀಮಂತ ವ್ಯಕ್ತಿಗಳ ಆಂದೋಲನ – ಈ ಹಂತವು ಅವಸಾನದ ಹಾದಿ ಹಿಡಿಯಿತು.

ಮೂರನೆಯ ಹಂತವು ಆರಂಭವಾಗುವುದು, ಮಹಾತ್ಮಾ ಗಾಂಧಿ ಮತ್ತು ಅವರ ಸರ್ವ-ಧರ್ಮ- ಸಮಭಾವದ ಘೋ?ಣೆಯೊಂದಿಗೆ. ಈ ಹಂತದಲ್ಲಿ ರಕ್ಷಣಾತ್ಮಕವಾದ ಕ್ರೈಸ್ತಮತ ಪ್ರಚಾರಕರು ತಮ್ಮ ಅನಾಗರಿಕ ಕೊಳಕು ಭಾಷೆಯನ್ನು ಬದಲಾಯಿಸಿಕೊಂಡು ಒಳಗೆ ವಿಷತುಂಬಿದ್ದ ಆದರೆ ಮಧುರವಾದ ನಾಲಿಗೆಯ ವಿಷಂಸರ್ಪಗಳಾಗಿ ಬದಲಾದರು. ಲೇಖಕರು ಹೇಳುವಂತೆ ’ಕ್ರೈಸ್ತಮತಶಾಸ್ತ್ರವನ್ನು ಭಾರತೀಯ ಸಂದರ್ಭಗಳಿಗೆ ಅನ್ವಯವಾಗುವಂತೆ ವ್ಯಾಖ್ಯಾನಿಸಲು’ ಆರಂಭವಾಯಿತು.

ನಾಲ್ಕನೆಯ ಹಂತ ಆರಂಭವಾಗುವುದು ಸ್ವಾತಂತ್ರ್ಯ ಪ್ರಾಪ್ತಿಯೊಂದಿಗೆ. ಸಂವಿಧಾನವೇ ಮತಾಂತರಿಸುವ ಹಕ್ಕನ್ನು ಕೊಡುವುದರ ಜೊತೆಗೆ ದೇಶದ ಆಡಳಿತ ಮತ್ತು ರಾಜಕಾರಣದಲ್ಲಿ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡ ನೆಹರು ಅವರು ನಕಲಿ ಜಾತ್ಯತೀತತೆಯ ಮುಸಕನ್ನು ಧರಿಸಿ ಪ್ರತಿಯೊಂದು ಹಿಂದೂ ವಿರೋಧಿ ಆಲೋಚನೆಗೂ, ಆಂದೋಲನಕ್ಕೂ ಪ್ರೋತ್ಸಾಹ ನೀಡಿದರು. ನಂತರ ಬಂದ ಆಡಳಿತಗಳೆಲ್ಲ ’ಹಿಂದೂ ಕೋಮುವಾದ’ದ ಗುಮ್ಮನನ್ನು ಸೃಷ್ಟಿಸಿದವು, ಕ್ರೈಸ್ತ ಮತಾಂತರಿಗಳು ತಮ್ಮ ದಾರಿಗೆ ಅಡ್ಡ ಬಂದವರನ್ನು ಮತಾಂಧರು, ಹಿಂದೂ ನಾಝಿಗಳು ಇತ್ಯಾದಿಯಾಗಿ ಜರಿದರು ಎನ್ನುವುದನ್ನು ಲೇಖಕರು ವಿವರಿಸುತ್ತಾರೆ. ಈ ಹಂತ ಭಾರತದ ಇತಿಹಾಸದಲ್ಲೇ ಕ್ರೈಸ್ತ ಮತ ಪ್ರಚಾರದ ಅತ್ಯಂತ ಒಳ್ಳೆಯ ದಿನಗಳಾಗಿದ್ದವು. ಕ್ರೈಸ್ತ ಮತ ಪ್ರಚಾರ ಕೇಂದ್ರಗಳು ಮತ್ತು ಅವುಗಳ ಕಾರ್ಯ ಎಲ್ಲೆಡೆ ಅತ್ಯಂತ ವೇಗವಾಗಿ ಹರಡತೊಡಗಿದವು.

ಇನ್ನು ಐದನೇ ಹಂತ ಕ್ರಿಶ್ಚಿಯನ್ ಮತ ಪ್ರಚಾರಕ್ಕೆ ಅಲ್ಲಲ್ಲಿ ಎದ್ದ ವಿರೋಧಗಳ ನಂತರ ಇಂದಿಗೂ ಮುಂದುವರಿದಿದೆ. ತಮಿಳುನಾಡಿನ ಮೀನಾಕ್ಷಿಪುರಂನ ಸಾಮೂಹಿಕ ಮತಾಂತರ, ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ, ರಾಮಜನ್ಮಭೂಮಿ ಆಂದೋಲನ, ’ಹಿಂದುತ್ವ’ದಕ್ಕೆ ಸಿಕ್ಕ ಒತ್ತು ಈ ಎಲ್ಲ ಸನ್ನಿವೇಶಗಳ ನಡುವೆ ಕ್ರೈಸ್ತ ಮತ ಪ್ರಚಾರಕ ಸಂಸ್ಥೆಗಳು ತಮ್ಮ ಕಾರ್ಯಶೈಲಿಯನ್ನು ಕಾಲಕ್ಕನುಗುಣವಾಗಿ ಬದಲಾಯಿಸಿಕೊಳ್ಳುತ್ತ, ಹಿಂದೂ ಸಂಕೇತಗಳನ್ನು ಸಂಪ್ರದಾಯಗಳನ್ನೇ ಮತಪ್ರಚಾರದ ಅಸ್ತ್ರಗಳಾಗಿ ಬಳಸಿಕೊಳ್ಳುತ್ತ, ದಲಿತರು, ಆದಿವಾಸಿಗಳು ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತ, ಸೇವೆಯ ಸೋಗಿನಲ್ಲಿ ಹೀಗೆ ಎಲ್ಲ ರೀತಿಯ ತಂತ್ರಗಳನ್ನು ಬಳಸಿಕೊಂಡು ಮತ ಪ್ರಚಾರ ನಡೆಸುವ ಕಾರ್ಯ ಇಂದಿಗೂ ಮುಂದುವರಿಸಿವೆ.

ಹಾಗೆಂದು ಕ್ರೈಸ್ತ ಮತಪ್ರಚಾರ ಪ್ರಶ್ನಾತೀತವಾಗಿ ಯಾವುದೇ ಪ್ರತಿರೋಧವಿಲ್ಲದೇ ಮುಂದುವರಿಯಿತು ಎನ್ನುವಂತಿಲ್ಲ. ಈ ಕುರಿತಂತೆ ಕೆಲವು ಪ್ರಮುಖ ಸಂಗತಿಗಳನ್ನು ಲೇಖಕರು ಉಲ್ಲೇಖಿಸುತ್ತಾರೆ :

  1. 1953ರಲ್ಲಿ ಲಂಡನ್‌ನಿಂದ ಪ್ರಕಟವಾದ ಕೆ.ಎಮ್. ಪಣಿಕ್ಕರ್ ಅವರ ಪುಸ್ತಕ ’ಏಷ್ಯಾ ಆಂಡ್ ವೆಸ್ಟರ್ನ್ ಡಾಮಿನೆನ್ಸ್’
  2. 1956ರಲ್ಲಿ ಪ್ರಕಟವಾದ ‘ದ ರಿಪೋರ್ಟ್ ಆಫ್ ದಿ ಕ್ರಿಶ್ಚಿಯನ್ ಮಿಷನರಿಗಳ ಆಕ್ಟಿವಿಟೀಸ್ ಕಮಿಟಿ, ಮಧ್ಯಪ್ರದೇಶ’ ಅಥವಾ ‘ನಿಯೋಗಿ ಸಮಿತಿ ವರದಿ’.
  3. 1978ರಲ್ಲಿ ಲೋಕಸಭೆಯಲ್ಲಿ ಓಂ ಪ್ರಕಾಶ ತ್ಯಾಗಿ ಮಂಡಿಸಿದ ’ಫ್ರೀಡಮ್  ಆಫ್  ರಿಲಿಜನ್’ ಮಸೂದೆ.
  4. 1994ರಲ್ಲಿ ಪ್ರಕಟಗೊಂಡ ಅರುಣ ಶೌರಿ ಅವರ ಪುಸ್ತಕ’ ಮಿಷನರಿಗಳ ಇನ್ ಇಂಡಿಯಾ’.
  5. 1996ರಲ್ಲಿ ಮಹಾರಾಷ್ಟ್ರ ಶಾಸನಸಭೆಯಲ್ಲಿ ಶಾಸಕ ಮಂಗಲ್ ಪ್ರಭಾತ್ ಲೋಧಾ ಅವರು ಮಂಡಿಸಿದ ಮಹಾರಾಷ್ಟ್ರ ಫ್ರೀಡಮ್ ಆಫ್ ರಿಲಿಜನ್’ ಮಸೂದೆ.

1950ರ ದಶಕದಲ್ಲಿ ಪ್ರಕಟಗೊಂಡ ಕೆ.ಎಮ್. ಪಣಿಕ್ಕರ್ ಅವರ ಅಧ್ಯಯನದ ಪ್ರಕಾರ ಏಷ್ಯಾದಲ್ಲಿ ೧೪೯೮ರಿಂದ ೧೯೪೫ರ ಅವಧಿಯಲ್ಲಿ ಇದ್ದ ಪಾಶ್ಚಾತ್ಯ ಸಾಮ್ರಾಜ್ಯಶಾಹಿಯ ಒಂದು ಸ್ಥೂಲ ಚಿತ್ರಣವನ್ನು ಒದಗಿಸುವುದಾಗಿತ್ತು. ಈ ಅಧ್ಯಯನದಲ್ಲಿ ’ಅವರಿಗೆ ಪಾಶ್ಚಾತ್ಯ ಫಿರಂಗಿ ನೌಕೆಗಳ, ರಾಜಕೀಯ ಒತ್ತಡಗಳ, ಗಡಿ ಉಲ್ಲಂಘನೆಯ ಹಕ್ಕುಗಳ ಮತ್ತು ನೇರವಾಗಿ ನಡೆದ ಗುಂಪು ಕದನಗಳ ಜೊತೆಜೊತೆಯಲ್ಲೇ ಯಾವಾಗಲೂ ಎಲ್ಲೆಂದರಲ್ಲಿ ಕ್ರೈಸ್ತ ಮತ ಪ್ರಚಾರಕೇಂದ್ರಗಳು ಕಂಡುಬಂದಿದ್ದವು’. ’ಕ್ರೈಸ್ತ ಮತ ಪ್ರಚಾರಕರು ಏಷ್ಯಾದಲ್ಲಿ ರಾಜರನ್ನಾಗಲೀ ಅಥವಾ ಮಾನ್ಯರನ್ನಾಗಲೀ ಮತಾಂತರಗೊಳಿಸಲು ಬಳಸುತ್ತಿದ್ದ ಮಾರ್ಗಗಳೆಂದರೆ ಬಲ ಕಪಟ ಅಥವಾ ಒಳಸಂಚು. ಪ್ರತಿಯೊಂದು ಸಂದರ್ಭದಲ್ಲೂ ಅವರ ನೈತಿಕತೆ ಪ್ರಶ್ನಾರ್ಹವಾಗಿತ್ತು’ ಎಂದು ಪಣಿಕ್ಕರ್ ಅಭಿಪ್ರಾಯಪಟ್ಟರು. ಪಣಿಕ್ಕರ್ ಎತ್ತಿದ ಕೆಲವೊಂದು ಮಿಷನರಿಗಳು ಕ್ರೈಸ್ತಮತ ಪ್ರಚಾರಕರಿಗೆ ಅತಿ ಹೆಚ್ಚಿನ ಆಘಾತ ಉಂಟುಮಾಡಿದವು ಎಂದು ಲೇಖಕರು ವಿವರಿಸುತ್ತಾರೆ – ’ಕ್ರೈಸ್ತಮತ ಪ್ರಚಾರಕರು ಬೋಧಿಸುತ್ತಿದ್ದ ’ಸತ್ಯ ಮತ್ತು ಜ್ಞಾನಗಳ ಏಕಸ್ವಾಮ್ಯ’ ಸಿದ್ಧಾಂತವು, ಹಿಂದೂ ಮತ್ತು ಬೌದ್ಧ ಮಾನಸಿಕತೆಗಳಿಗೆ ಪರಕೀಯವಾಗಿತ್ತು’. ’ಕೇವಲ ಯಾವುದೇ ಒಂದು ಪಂಥ ಮಾತ್ರ ಸತ್ಯ, ಉಳಿದವುಗಳೆಲ್ಲ ನಿಂದಾರ್ಹ ಎಂಬ ವಾದವೇ ಅವಿವೇಕ’, ’ಸತ್ಯ ಮತ್ತು ಜ್ಞಾನಗಳು ಯಾರೊಬ್ಬರ ಸ್ವತ್ತಲ್ಲ; ನಮಗೆ ನಿಮ್ಮ ಪ್ರಚಾರ ಕೇಂದ್ರಗಳ ಅಗತ್ಯವಿಲ್ಲ’ ಎನ್ನುವ ಅವರ ನೇರ ನುಡಿಗಳು ಕ್ರಿಶ್ಚಿಯನ್ ಮಿಷನರಿಗಳ ಉದ್ಯಮದ ಬುಡಕ್ಕೇ ನೇರವಾಗಿ ಪೆಟ್ಟು ಕೊಟ್ಟವು ಎಂದು ಲೇಖಕರು ವಿವರಿಸುತ್ತಾರೆ. ಆಳವಾದ ಅಧ್ಯಯನದಿಂದ ಹೊರಬಂದ ಪಣಿಕ್ಕರ್ ಅವರ ಪುಸ್ತಕ ಭಾರತದ ಉಪಖಂಡದಿಂದ ಹಿಡಿದು, ಚೀನಾ ಮತ್ತು ಜಪಾನ್‌ವರೆಗೆ ನಡೆದ ಕ್ರೈಸ್ತಮತ ಪ್ರಚಾರದ ಪ್ರಯತ್ನಗಳ ಸ್ಥೂಲ ಚಿತ್ರಣವನ್ನು ಮತ್ತು ಅದಕ್ಕಾಗಿ ಅನುಸರಿಸಿದ ಕುಟಿಲ ಮಾರ್ಗಗಳನ್ನು ದಾಖಲೆ ಸಮೇತ ತೆರೆದಿಟ್ಟವು. ಸೆಕ್ಯುಲರ್‌ವಾದಿಗಳು ಮತ್ತು ಕ್ರೈಸ್ತ ಮತಪ್ರಚಾರಕರು ಪಣಿಕ್ಕರ್ ಅವರ ಗ್ರಂಥವನ್ನು ವಿರೋಧಿಸಿದವಾದರೂ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಿ ಅದನ್ನು ನಿರಾಕರಿಸಲು ವಿಫಲವಾದವು.

ಕ್ರೈಸ್ತಮತ ಪ್ರಚಾರಕರು ಬಲವಂತದಿಂದ, ಮೋಸ, ಹಣ ಅಥವಾ ಇತರ ವಸ್ತುಗಳ ಆಮಿಷ ಒಡ್ಡಿ ಅನಕ್ಷರಸ್ಥರ ಮೂಲನಿವಾಸಿಗಳು ಮತ್ತು ಹಿಂದುಳಿದವರನ್ನು ಮತಾಂತರಿಸುತಿದ್ದಾರೆ ಎನ್ನುವ ದೂರಿನ ಅನ್ವಯ ಮಧ್ಯಪ್ರದೇಶ ಸರ್ಕಾರವು ಈ ಕುರಿತು ತನಿಖೆ ನಡೆಸಲು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿದ್ದ ಡಾ. ಭವಾನಿಶಂಕರ ನಿಯೋಗಿ ಅವರ ನೇತೃತ್ವದಲ್ಲಿ ೧೯೫೪ರಲ್ಲಿ ಏಳು ಸದಸ್ಯರ ಸಮಿತಿಯನ್ನು ನೇಮಿಸಿತು. ವಿಸ್ತೃತ ತನಿಖೆ ನಡೆಸಿದ ನಿಯೋಗಿ ಸಮಿತಿ ೧೯೫೬ರಲ್ಲಿ ನೀಡಿದ ವರದಿಯು ರಾಜ್ಯದಾದ್ಯಂತ ವ್ಯಾಪಕವಾಗಿ ಹರಡಿಸುವ ಕ್ರೈಸ್ತ ಮತಪ್ರಚಾರದ ಕಾಣದೇ ಇರುವ ಮುಖವನ್ನು ತೋರಿಸಿತು. ಈ ವರದಿಯ ಕುರಿತು ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ಸಾಲುಗಳನ್ನು ಉದ್ಧರಿಸಿದರೆ ಅದರ ಗಂಭೀರತೆ ಅರ್ಥವಾಗಬಹುದು: ವರದಿಯು ’ಕ್ರೈಸ್ತಮತದ ಎರಡನೇ ಮಹಾಯುದ್ಧಾನಂತರದ ನೀತಿಯ’ ಕುರಿತಾಗಿ ಹೇಳುತ್ತ ಹಲವಾರು ಅಂಶಗಳನ್ನು ಕ್ರೈಸ್ತಮತದ ಮೂಲಗಳಿಂದಲೇ ಉದ್ಧರಿಸುತ್ತದೆ. ಭಾರತದಲ್ಲಿ ಈ ನೀತಿಯ ಉದ್ದೇಶ ಮೂರು ಬಗೆಯದಾಗಿತ್ತು : (೧) ರಾಷ್ಟ್ರೀಯ ಐಕ್ಯಸಾಧನೆಯ ಪ್ರಗತಿಯನ್ನು ತಡೆಯುವುದು. (೨) ಸಹಬಾಳ್ವೆಯ ತತ್ತ್ವದ ಬಗ್ಗೆ ಭಾರತ ಮತ್ತು ಅಮೆರಿಕ ದೇಶಗಳ ನಡುವೆ ಇರುವ ಮನೋಧರ್ಮಗಳ ವ್ಯತ್ಯಾಸವನ್ನು ಎತ್ತಿ ತೋರುವುದು. (೩) ಮತಪ್ರಚಾರಕ್ಕೆ ಭಾರತದ ಸಂವಿಧಾನವು ನೀಡಿರುವ ಸ್ವಾತಂತ್ರ್ಯದ ದುರ್ಲಾಭ ಪಡೆಯಲು ಮತ್ತು ಮುಸ್ಲಿಂ ಲೀಗ್ ಮಾದರಿಯಲ್ಲೇ, ಪ್ರಜಾಪ್ರಭುತ್ವವಾದಿ ಭಾರತದಲ್ಲಿ ಕ್ರೈಸ್ತಮತೀಯ ಪಕ್ಷವೊಂದನ್ನು ರಚಿಸಲು ಮತ್ತು ಕೊನೆಗೆ ಪ್ರತ್ಯೇಕ ದೇಶದ ಕೂಗು ಎಬ್ಬಿಸುವುದಕ್ಕೆ ಪ್ರಯತ್ನಿಸುವುದು. ಅದು ಸಾಧ್ಯವಾಗದೇ ಹೋದರೆ ಕನಿ? ’ಉಗ್ರಗಾಮಿ ಅಲ್ಪಸಂಖ್ಯಾತರನ್ನು’ ಸೃಷ್ಟಿಸುವುದು.

ಅಂದರೆ ಕ್ರೈಸ್ತಮತ ಪ್ರಚಾರದ ಹಿಂದಿರುವುದು ದೇಶವಿರೋಧಿ ಕುತಂತ್ರ ಎನ್ನುವುದು ಂಚಿ?ಂಔ. ಮತಾಂತರದ ಮೂಲಕ ಕ್ರೈಸ್ತ ಬಾಹುಳ್ಯವಾಗಿರುವ ಭಾರತದ ಕೆಲವು ಪೂರ್ವೋತ್ತರ ರಾಜ್ಯಗಳಲ್ಲಿ ಆಗಾಗ ಪ್ರತ್ಯೇಕತೆಯ ಕೂಗು ಏಳುವುದರ ಹಿಂದೆ ಯಾರು ಇರುವುದು ಎನ್ನುವುದೂ ಸ್ಪಷ್ಟ. ಮಧ್ಯಪ್ರದೇಶದಲ್ಲಿರುವ ಕ್ರೈಸ್ತ ಮತಪ್ರಚಾರ ಸಂಸ್ಥೆಗಳು ಅವರಿಗೆ ಹರಿದು ಬರುತ್ತಿರುವ ದೊಡ್ಡ ಪ್ರಮಾಣದ ವಿದೇಶೀ ಹಣ ಇವುಗಳ ವಿವರವನ್ನು ನಿಯೋಗಿ ಸಮಿತಿಯು ದಾಖಲಿಸಿತು.

ಇಂದಿನ ಸ್ಥಿತಿಯೇನೂ ಭಿನ್ನವಾಗಿಲ್ಲ. `ಜಾತ್ಯತೀತತೆ’ಯ ಮುಸುಕಿನಲ್ಲಿ ಕ್ರೈಸ್ತ ಮತಪ್ರಚಾರ ನಿರಂತರವಾಗಿ ನಡೆಯುತ್ತಿದೆ. ಜೊತೆಗೆ ಆಧುನಿಕ ತಂತ್ರಜ್ಞಾನಗಳ ಸಹಾಯವೂ ಅದಕ್ಕೆ ದೊರಕುತ್ತಿದೆ. ಉದಾಹರಣೆಗೆ ತಮಿಳು sಭಾಷೆಯೊಂದರಲ್ಲೇ ಹತ್ತಕ್ಕೂ ಹೆಚ್ಚು ಕ್ರೈಸ್ತ ಮತಬೋಧನೆಯ ಟಿವಿ ಚಾನೆಲ್‌ಗಳಿವೆ. ಈ ಕಾರ್ಯಕ್ಕೆ ವಿವಿಧ ಮುಖವಾಡ ಹೊತ್ತ ಕ್ರೈಸ್ತ ’ಸೇವಾ’ ಸಂಘಗಳ ಹೆಸರಿನಲ್ಲಿ ದೇಶವಿದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಹಣವೂ ಸಂಗ್ರಹವಾಗುತ್ತದೆ. ದಲಿತರು ಆದಿವಾಸಿಗಳು ಹಿಂದುಳಿದವರೇ ಅವರ ಆಮಿಷಗಳಿಗೆ ಗುರಿಯಾಗುತ್ತಿದ್ದಾರೆ. ಕ್ರೈಸ್ತರಾಗಿ ಮತಾಂತರವಾದರೆ ದಲಿತರು ಆದಿವಾಸಿಗಳ ಸಂಸ್ಕೃತಿ ಉಳಿಯಬಹುದೇ? ಎನ್ನುವ ಪ್ರಶ್ನೆ ಅವರ ಸಂಸ್ಕೃತಿ ಜಾನಪದಗಳನ್ನು ಉಳಿಸಬೇಕೆಂದು ಬೊಬ್ಬಿರಿಯುವ ಜಾತ್ಯತೀತರಿಗೆ ಎಂದೂ ಬಂದೆ ಇಲ್ಲ. ಆದರೆ ಈ ಹುಸಿ ಜಾತ್ಯತೀತತೆಯ ವಿರುದ್ಧ ಸಿಡಿದೇಳದಿದ್ದರೆ ಹಿಂದೂ ಸಮಾಜ, ಸನಾತನ ಭಾರತೀಯ ಸಂಸ್ಕೃತಿಯು ಘೋರ ಪರಿಣಾಮವನ್ನು ಎದುರಿಸಬೇಕಾದುದಂತೂ ಸತ್ಯ.


ಪುಸ್ತಕ ವಿಮರ್ಶೆ ಪರಿಚಯ: ಸತ್ಯನಾರಾಯಣ ಶಾನುಭಾಗ್, ಲೇಖಕರು, ಸಾಪ್ಟ್ ವೇರ್ ಉದ್ಯೋಗಿ

The post ಜಾತ್ಯತೀತತೆಯ ಮುಸುಕಿನಲ್ಲಿ ಕ್ರೈಸ್ತಮತ ಪ್ರಚಾರದ ಕುಟಿಲ ತಂತ್ರಗಳು first appeared on Vishwa Samvada Kendra.

ಹೋಟೆಲಿನಲ್ಲಿ ಊಟ ಮಾಡುವಾಗ ಇಲ್ಲದ ಮಡಿ ದೇವಸ್ಥಾನದ ಊಟದ ಪಂಕ್ತಿಯಲ್ಲಿ ಮಾತ್ರ ಏಕೆ?

$
0
0
ಸಾಂದರ್ಭಿಕ ಚಿತ್ರ

ಲೇಖಕರು: ಡಾ.ರೋಹಿಣಾಕ್ಷ  ಶಿರ್ಲಾಲು 

ಭೋಜನ ಮಾಡುವ ರೀತಿಯಿಂದ ಅಥವಾ ಸ್ಥಳದಿಂದ ಯಾರಾದರು ತಾವು ಜಗತ್ತಿನಲ್ಲಿ ಶ್ರೇಷ್ಟರು ಎಂದು ಭಾವಿಸುವುದಾದರೆ ಅಂಥವರ ಅಜ್ಞಾನಕ್ಕೆ ಒಮ್ಮೆ ನಕ್ಕು ಸುಮ್ಮನಾಗಿ ಬಿಡಬೇಕಷ್ಟೇ. ಆದರೆ ಅದೇ ಅಜ್ಞಾನವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿದಾಗ ಖಂಡಿತವಾಗಿಯೂ ಪ್ರಶ್ನಿಸಬೇಕಾಗುತ್ತದೆ. ಯಾಕೆಂದರೆ ಈ ಅಜ್ಞಾನ ಸಮಾಜದ ಆರೋಗ್ಯಕ್ಕೂ ತೊಂದರೆಯನ್ನುಂಟುಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಹಿತವಾಗುವ ರೀತಿಯಲ್ಲಿ,  ತನ್ನ ಮನೆಯೊಳಗೆ ಬದುಕುವ ಸ್ವಾತಂತ್ರ್ಯ ಇದ್ದೇ ಇದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ನಾವು ತೋರುವ ನಡವಳಿಕೆಯು ಸಮಾಜದ ಇತರರ ವ್ಯಕ್ತಿತ್ವದ ಘನತೆಗೆ ಕುಂದುಂಟು ಮಾಡುವುದಾದರೆ ಅಂತಹ ನಡವಳಿಕೆಯನ್ನು ತಪ್ಪು ಎಂದೇ ಹೇಳಬೇಕಾಗುತ್ತದೆ. ಮಾತ್ರವಲ್ಲ,ಬದಲಾಯಿಸಿಕೊಳ್ಳಲು ಅವಕಾಶವನ್ನೂ ನೀಡಿ, ಸರಿಯಾದ ದಾರಿ ಯಾವುದೆನ್ನುವುದನ್ನು ತೋರಿಸಬೇಕಾದುದು ಪ್ರಜ್ಞಾವಂತ ಸಮಾಜದ ಕರ್ತವ್ಯವೂ ಹೌದು. 

ಸಾವರ್ಕರ್ ಹಮ್ಮಿಕೊಂಡ ಸಹ ಭೋಜನ

ಇತ್ತೀಚೆಗೆ ದೇವಾಲಯವೊಂದರಲ್ಲಿ  ಭೋಜನದ ಪಂಕ್ತಿಯಲ್ಲಿ ಬೇಧ ಮಾಡಿದ್ದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಮಾತ್ರವಲ್ಲ, ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಇದರ ಪರ-ವಿರುದ್ಧವಾಗಿ ಬಾರೀ ಪ್ರಮಾಣದ ಚರ್ಚೆಯೇ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಸಾಕಷ್ಟು ಜನ ಪ್ರತ್ಯೇಕ ಪಂಕ್ತಿ ಭೋಜನ ಹಿಂದೂ ಸಂಸ್ಕೃತಿ ಎಂದೂ, ಬ್ರಾಹ್ಮಣರ  ಊಟದ ಕ್ರಮ ಇತರರಿಗಿಂತ ಬೇರೆ ಎಂಬ ತರ್ಕವನ್ನು ಮಾಡಿದರು. ಮತ್ತೊಂದಷ್ಟು ಜನ ಈ ಪದ್ಧತಿಯೇ ಕಾಲಬಾಹಿರವೆಂದೂ ವಾದಿಸುತ್ತಿದ್ದರು. ನಮ್ಮ ಕಾಲದಲ್ಲಿ ಪ್ರತ್ಯೇಕ ಪಂಕ್ತಿ ಊಟದ ಅಪ್ರಸ್ತುತತೆ ಮತ್ತು ಅದು ಹಿಂದೂ ಸಮಾಜದ ಒಡಕಿಗೆ ಹೇಗೆ ಕಾರಣವಾಗಬಹುದೆನ್ನುವ ಕುರಿತು ಇಂದು ಮುಕ್ತವಾದ ಚರ್ಚೆಯನ್ನು ನಡೆಸಬೇಕಾಗಿದೆ.

ಮುಖ್ಯವಾದ ವಿಚಾರವೆಂದರೆ ಈ ಬೇಧವನ್ನು ತೋರಿಸುತ್ತಿರುವುದು ದೇವಾಲಯಗಳಲ್ಲಿ. ದೇವಾಲಯಗಳು ನಮ್ಮ ಸಮಾಜದ ಶ್ರದ್ಧೆಯ ತಾಣಗಳು ಎಂದು ಒಪ್ಪಿಕೊಳ್ಳುವುದಾದರೆ, ನಮ್ಮೆಲ್ಲಾ ತತ್ವಜ್ಞಾನಗಳು ನಿರೂಪಿಸುವ ದೇವರಿಗೆ ಯಾವುದೇ ಬೇಧವಿಲ್ಲ ಎನ್ನುವ ತರ್ಕವನ್ನು ಸಮ್ಮತಿಸುವುದಾದರೆ, ಕನಿಷ್ಠ ದೇವರ ಸಮ್ಮುಖದಲ್ಲಾದರೂ ಆತನ ಭಕ್ತರೆಲ್ಲರೂ ಹುಟ್ಟಿದ ಜಾತಿ, ಲಿಂಗ, ಊರು, ಕಸುಬುಗಳನ್ನು ಮೀರಿ ಸಮಾನರೆನ್ನುವ ತತ್ವವನ್ನು ಪಾಲಿಸಲಾಗದಿದ್ದರೆ, ಅಂತಹ ಭಕ್ತಿಯನ್ನು ನಿಜವಾದ ಭಕ್ತಿ ಎನ್ನಬಹುದೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಹುಟ್ಟಿದ ಜಾತಿಯೊಂದೇ ತಮ್ಮ ಶ್ರೇಷ್ಠತೆಯನ್ನು ಸಾಬೀತು ಮಾಡುವ ಅರ್ಹತೆಯಾಗಬಲ್ಲುದೆ? ನಮ್ಮ ದೇಶದ ಸಂವಿಧಾನ ಸಮಾನತೆಯ ಆಶಯದ್ದು. ಇಲ್ಲಿ ಯಾರೂ ಹುಟ್ಟಿದ ಜಾತಿ, ಲಿಂಗದ ಕಾರಣಕ್ಕಾಗಿ ಶ್ರೇಷ್ಟರಾಗುವುದಕ್ಕೆ ಸಾಧ್ಯವಿಲ್ಲ. ನಾವು ಇಂದು ಬದುಕುತ್ತಿರುವುದು ಈ ಸಂವಿಧಾನದ ಅಡಿಯಲ್ಲಿ. ನಮ್ಮೆಲ್ಲ ಉದ್ಯೋಗ, ಅವಕಾಶ, ಸೌಲಭ್ಯಗಳೆಲ್ಲವೂ ಪ್ರಾಪ್ತವಾಗುತ್ತಿರುವುದು ಇದೇ ಸಂವಿಧಾನದ ಅಡಿಯಲ್ಲೇ. ಹೀಗಿರುವಾಗ ನಮ್ಮ ದೇವಾಲಯಗಳಲ್ಲಿ ನಡೆಯುವ ಆಚರಣೆಗಳು ತನ್ನ ಆಶಯದಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗುವುದಾದರೆ? ಅಂತಹ ಆಚರಣೆಗಳನ್ನು ಉಳಿಸಿಕೊಳ್ಳಬೇಕೇ? ಈ ಪ್ರಶ್ನೆಯನ್ನು ನಾವಿಂದು ಕೇಳಿಕೊಳ್ಳಬೇಕಾಗಿದೆ. ಇಂತಹ ದ್ವಂದ್ವಕ್ಕೆ ಮುಖ್ಯ ಕಾರಣ ಸಂವಿಧಾನದ ಆಶಯ ನಮ್ಮ ಹೃದಯದೊಳಗೆ ಸ್ಥಾಪನೆಗೊಳ್ಳದಿರುವುದೇ ಆಗಿದೆ. ಕಾನೂನಿನ ಭಯವಿಲ್ಲದಿದ್ದರೆ ಇಂಥವರು ಅಸ್ಪೃಶ್ಯತೆಯನ್ನೂ ಧರ್ಮಬದ್ಧವೆಂದೇ ಸಮರ್ಥಿಸಿಕೊಳ್ಳುತ್ತಿದ್ದರು.  

ಎಲ್ಲೆಡೆಯೂ ರೂಢಿಯಲ್ಲಿರುವ ಪಂಕ್ತಿಬೇಧ ಎನ್ನುವುದು ಹಿಂದೂ ಧರ್ಮಕ್ಕೆ ಶತಮಾನಗಳಿಂದ ಅಂಟಿದ ಕಳಂಕ. ಇದನ್ನು ತೊಳೆದು ಶುಚಿಗೊಳಿಸುವವರೆಗೂ ಹಿಂದೂ ಧರ್ಮದ ನಿಜವಾದ ಬೆಳಕು ಲೋಕಕ್ಕೆ ಕಾಣಲು ಸಾದ್ಯವಿಲ್ಲ. ವಿಚಿತ್ರವಾದ ಸಂಗತಿ ಎಂದರೆ ಇಂದು ವಿಜ್ಞಾನ-ತಂತ್ರಜ್ಞಾನಗಳನ್ನು ಬಳಸಿ ಬದುಕಿನ ಉಳಿದೆಲ್ಲಾ ದಾರಿಗಳನ್ನು ಸುಗಮಗೊಳಿಸಿಕೊಂಡ ನಮಗೆ, ಸಹಮಾನವರನ್ನು ನಮ್ಮ ಸರಿಸಮಾನರೆಂದು ಪರಿಗಣಿಸಲು ಸಾಧ್ಯವಾಗದ ಅಜ್ಞಾನದಿಂದ ಹೊರಬರಲು ಸಾಧ್ಯವಾಗಿಲ್ಲ. ಶತಮಾನದ ಹಿಂದೆಯೇ ಸ್ವಾಮಿ ವಿವೇಕಾನಂದರು ಹಿಂದೂ ಸಮಾಜದ ಈ ಅಜ್ಞಾನವನ್ನು ಟೀಕಿಸುತ್ತಾ,  ತೀರ್ಥವನ್ನು ಎಡಗೈಯಿಂದ ತೆಗೆದುಕೊಳ್ಳಬೇಕೆ ? ಅಥವಾ ಬಲಗೈಯಿಂದ ತೆಗೆದುಕೊಳ್ಳಬೇಕೆ? ದೇವಾಲಯಕ್ಕೆ ಮೂರು ಸುತ್ತು ಪ್ರದಕ್ಷಿಣೆ ಮಾಡಬೇಕೆ? ಅಥವಾ ಐದು ಸುತ್ತು ಪ್ರದಕ್ಷಿಣೆ ಮಾಡಬೇಕೆ? ಎಂಬ ಕ್ಷುಲ್ಲಕ ಚರ್ಚೆಯಲ್ಲಿ ಮುಳುಗಿಹೋದ ನಮ್ಮ ಅಜ್ಞಾನದ ಬಗ್ಗೆ ವಿಷಾದದಿಂದ ಹೇಳಿದ್ದರು. 

ಇಂದೂ ಪ್ರತ್ಯೇಕ ಪಂಕ್ತಿ ಭೋಜನದ ಸಮರ್ಥನೆಗಿಳಿದವರ ಕಾರಣಗಳನ್ನು ನೋಡಿದರೆ ನಾವು 21ನೇ ಶತಮಾನದಲ್ಲಿದ್ದೇವೆಯೋ ಅಥವಾ 12ನೇ ಶತಮಾನದಲ್ಲಿದ್ದೇವೆಯೋ ಎಂದೆನಿಸಿದರೆ ಆಶ್ಚರ್ಯವಿಲ್ಲ. ಉಳಿದವರಿಗೆ ಬ್ರಾಹ್ಮಣರಂತೆ ಊಟ ಬಡಿಸಲು ಗೊತ್ತಿಲ್ಲ, ಬ್ರಾಹ್ಮಣರಂತೆ ಊಟ ಮಾಡಲು ಗೊತ್ತಿಲ್ಲ ಎನ್ನುತ್ತಾ ತಾವೇ ಶ್ರೇಷ್ಟರೆಂದು ಭಾವಿಸುತ್ತಾರೆ. ಆದರೆ ಇಲ್ಲಿರುವ ಪ್ರತಿಯೊಂದು ಸಮುದಾಯಗಳ ಊಟದ ಪದ್ಧತಿಯೂ , ಅಡುಗೆ ವಿಧಾನವೂ ಶ್ರೇಷ್ಠವೇ. ಅದನ್ನು ಕೀಳು ಎಂದು ತೀರ್ಪುಕೊಡುವ ಅಧಿಕಾರವನ್ನು ನೀಡಿದವರು ಯಾರು? ಬ್ರಾಹ್ಮಣೇತರರ ಊಟದ ಕ್ರಮವೇ ಅಸಹ್ಯವಾದುದು, ಬಡಿಸುವ ಕ್ರಮವೇ ಅಜ್ಞಾನದ್ದು ಎಂದು ತೀರ್ಮಾನಿಸುವ ಇವರ ದಾಷ್ಟ್ರ್ಯಕ್ಕೆ ನಾಗರಿಕ ಸಮಾಜದಲ್ಲಿ ಉತ್ತರವಿಲ್ಲ. ವಾಸ್ತವದಲ್ಲಿ ಊಟದ ಶಿಸ್ತಿಗೂ ಪ್ರತ್ಯೇಕ ಪಂಕ್ತಿಯ ಭೋಜನಕ್ಕೂ ಯಾವ ಸಂಬಂಧವೂ ಇಲ್ಲ. ಈ ಬೇಧ ಹುಟ್ಟಿರುವುದು ಮಾನಸಿಕವಾಗಿ ತಾವು ಶ್ರೇಷ್ಠರೆನ್ನುವ ಅಜ್ಞಾನಿಗಳಿಂದ. ಅದು ಉಳಿದವರಿಗಿಂತ ತಾವು ಶ್ರೇಷ್ಟರೆನ್ನುವ ಅಹಂಕಾರದ ಪ್ರತೀಕ. ತಾವು ಎಲೆಯಲ್ಲಿಯೇ ಊಟ ಮಾಡುವವರು, ಒಂದು ಕೈಯನ್ನು ಮಾತ್ರ ಊಟದ ಎಲೆಗೆ ಮುಟ್ಟಿಸುವವರು ಎನ್ನುವುದೇ ಶ್ರೇಷ್ಠತೆಯಾಗುವುದಾದರೆ, ಒಂದು ಕೈಯನ್ನೂ ಊಟಕ್ಕೆ ತಾಗಿಸದೆ ಸ್ಪೂನ್ ಮತ್ತು ಪೋರ್ಕ್‍ನಲ್ಲಿ ಊಟ ಮಾಡುವವರು ಇನ್ನೂ ಶ್ರೇಷ್ಠರಾಗಬೇಕಲ್ಲಾ? ರೊಟ್ಟಿ ಊಟ ಮಾಡುವ ಪ್ರದೇಶದ ಜನ ಎಡದ ಕೈಯಲ್ಲಿ ರೊಟ್ಟಿ ಹಿಡಿದು ಬಲದ ಕೈಯಲ್ಲಿ ರೊಟ್ಟಿ ಮುರಿದು ತಿನ್ನುವ ಜನರು ಹಾಗಾದರೆ ಅನಾಗರಿಕರೇ? 

 ಇನ್ನೂ ಕೆಲವರ ವಾದ ಬ್ರಾಹ್ಮಣೇತರರಿಗೆ ಬ್ರಾಹ್ಮಣರೊಂದಿಗೆ ಊಟ ಮಾಡುವ ಚಪಲವಂತೆ!  ನಾಚಿಕೆಯಾಗಬೇಕು. ತಾವು ಪಾಲಿಸುವುದೇ ಅತ್ಯಂತ ಅನಾಗರಿಕ ಕ್ರಮವನ್ನು. ಇನ್ನು ಅಂತಹವರೊಂದಿಗೆ ಊಟಮಾಡುವ ಚಪಲ ಯಾರಿಗಾದರೂ ಇದ್ದಿತೇ? ಇಷ್ಟಕ್ಕೂ ತಾವೇ ಪ್ರತ್ಯೇಕ ಪಂಕ್ತಿಯನ್ನು ನಿರಾಕರಿಸಬೇಕಾಗಿತ್ತು. ಅನೇಕ ಪ್ರಜ್ಞಾವಂತ ಬ್ರಾಹ್ಮಣರು ನಿರಾಕರಿಸಿದ್ದಾರೆ ಕೂಡ. ಆದರೆ ಹುಟ್ಟಿದ ಜಾತಿ ಮಾತ್ರ ಅರ್ಹತೆಯಾಗಿರುವ ಜಾತಿ ಬ್ರಾಹ್ಮಣರು ಇಂದಿಗೂ ತಾವು ಪರಮಶ್ರೇಷ್ಠ ಜನ್ಮ ಪಡೆದವರು ಎಂಬಂತೆ ಭಾವಿಸಿ, ಜೀವನದ ಅತಿದೊಡ್ಡ ಸಾಧನೆಯೇ ದೇವಾಲಯದೊಳಗೆ ಬ್ರಾಹ್ಮಣ ಪಂಕ್ತಿಯ ಭೋಜನ ಎಂದುಕೊಂಡವರಿದ್ದಾರೆ.ಜಾತ್ರೆಯ ಹಿಂದಿನದಿನ ಬೀದಿಬದಿಯ ಪಾನೀಪೂರಿ ತಿಂದಾಗ, ಹೊಟೆಲ್‍ನಲ್ಲಿ ಕುಳಿತು ಉಂಡಾಗ ಕಾಡದ ಮೈಲಿಗೆ, ದೇವಾಲಯದ ಊಟದ ಪಂಕ್ತಿಯಲ್ಲಿ ಮಾತ್ರ ಮಡಿ ಕಾಡಿತು ! ಇನ್ನೂ ಕೆಲವರು ಬೇರೆಲ್ಲೂ ಮೀಸಲಾತಿ ಇಲ್ಲದ ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಭೋಜನವೆನ್ನುವುದು ಒಂದು ಮೀಸಲಾತಿ ಎಂದು ಭಾವಿಸಿದವರ ಬುದ್ಧಿವಂತಿಕೆಯ ಬಗ್ಗೆ ಕನಿಕರವನ್ನಷ್ಟೇ ತೋರಬಹುದು. ನೀವು ಮೀಸಲಾತಿ ಬಿಡಿ ನಾವು ಪ್ರತ್ಯೇಕ ಪಂಕ್ತಿಯ ಭೋಜನ ಬಿಡುತ್ತೇವೆ ಎಂದವರಿಗೆ ತಾವೂ ಮೀಸಲಾತಿಯ ಫಲಾನುಭವಿಗಳೇ ಎನ್ನುವುದರ ಬಗೆಗೆ ಜಾಣ ಮರೆವು ಕಾಡಿದೆ. 

ಹುಟ್ಟಿದ ಜಾತಿಯೊಂದರಿಂದಲೇ ತಾವು ಶ್ರೇಷ್ಟ ಎಂದು ಭಾವಿಸುವವರಿಗೆ ಇಂದು ಸರಿಯಾದ ಧಾರ್ಮಿಕ ಸಂಸ್ಕಾರ, ಶಿಕ್ಷಣದ ಅಗತ್ಯವಿದೆ. ನಾವು ಬದುಕುತ್ತಿರುವುದು 21ನೇ ಶತಮಾನದಲ್ಲಿ ಎನ್ನುವ ಕಾಮನ್‍ಸೆನ್ಸ್‍ನ  ತಿಳುವಳಿಕೆಯನ್ನಾದರೂ  ನೀಡಬೇಕಾಗಿದೆ. ಅಂತರಿಕ್ಷಕ್ಕೆ ಅಡಿಯಿಟ್ಟ ನಾವು ದೇಗುಲದೊಳಗೆ ಅಂತರವ ತೋರುವುದು ಸರಿಯೇ? ದೇಗುಲಗಳು ಒಂದು ಸಾರ್ವಜನಿಕ ಸ್ಪೇಸ್. ಅಲ್ಲಿನ ಎಲ್ಲಾ ಆಚರಣೆಗಳು, ಸಾರ್ವಜನಿಕ ಸಹಭಾಗಿತ್ವದಿಂದಲೇ ನಡೆಯುವುದು. ವ್ಯವಸ್ಥೆಯ ನಿರ್ವಹಣೆಯು ಸಾರ್ವಜನಿಕ ಭಕ್ತರ ಕಾಣಿಕೆ,ದಾನಗಳಿಂದಲೇ ಸಾಧ್ಯವಾಗಿರುವುದು. ಹೀಗಿರುವಾಗ ದೇವಾಲಯಗಳು ಅಲ್ಲಿಗೆ ಆಗಮಿಸುವ ಎಲ್ಲರಿಗೂ ಮುಕ್ತವಾಗಿರಬೇಕು. ಅಲ್ಲಿ ತೋರುವ ಯಾವುದೇ ಬೇಧವೂ ಸಮ್ಮತವಲ್ಲ.ಇಷ್ಟಾಗಿಯೂ ಕೆಲವು ಜನರಿಗೆ ತಾವು ಹುಟ್ಟಿನಿಂದಲೇ ಎಲ್ಲರಿಗಿಂತಲೂ ಶ್ರೇಷ್ಟ ಎಂಬ ಭಾವನೆ ಇರುವುದಾದರೆ ಅದಕ್ಕೆ ಎರಡು ಪರಿಹಾರಗಳಿವೆ. ಮೊದಲನೆಯದು ಅಂಥವರು ತಮ್ಮ ಶ್ರೇಷ್ಟತೆಯ ವ್ಯಸನವನ್ನು , ಹಿರಿಮೆಯನ್ನು ತಮ್ಮ ಮನೆಗಳಲ್ಲೇ ಇಟ್ಟುಕೊಂಡು ಸಾರ್ವಜನಿಕ ದೇವಾಲಯಗಳಿಗೆ ಬಾರದಿರಬಹುದು. ಮನೆ ಅವರ ಖಾಸಗಿ ಸ್ಥಳ.ಅಲ್ಲಿ ಯಾರನ್ನೂ ಮುಟ್ಟದೆ, ಅಡಚನೆ ಇಲ್ಲದೆ ತಮ್ಮ ಸಾಧನೆಯನ್ನು ಮಾಡಬಹುದು. ಎರಡನೆಯ ಪರಿಹಾರವೆಂದರೆ , ದೇಗುಲಗಳು ಸಾರ್ವಜನಿಕವಲ್ಲ, ತಮ್ಮ ಸಮುದಾಯಕ್ಕೆ ಮಾತ್ರ ಸೀಮಿತವಾದುದು ಎಂದು ಬಹಿರಂಗವಾಗಿ ಘೋಷಿಸಿಕೊಳ್ಳುವುದು. ಆ ಮೂಲಕ ಸಾರ್ವಜನಿಕರ ಪ್ರವೇಶ, ದೇಣಿಗೆ, ಕಾಣಿಕೆ, ಶ್ರಮಗಳನ್ನು ನಿರಾಕರಿಸಿ ತಾವೆ ನಿರ್ವಹಿಸುವುದು. ಆದರೆ ಇವೆರಡನ್ನೂ ಮಾಡಲಾರರು ! ಯಾಕೆಂದರೆ ಸಾರ್ವಜನಿಕರು ಬಾರದೇ ಹೋದರೆ ಅಲ್ಲಿಗೆ ಬರುವ ಆದಾಯದ ಸಮಸ್ತ ಮೂಲವೂ ನೀಂತೇ ಹೋಗುತ್ತದೆ. 

ಹಿಂದೂ ಸಮಾಜದಲ್ಲಿ ಯಾವುದೂ ಬದಲಾಗಬಾರದ ಧರ್ಮಗ್ರಂಥ ಆಧಾರಿತವಾದ ನಿಯಮಗಳಿಲ್ಲ.ಋಷಿಮುನಿಗಳೇ ಕಾಲ ಕಾಲಕ್ಕೆ ಬದಲಾಗದ ಸನ್ನಿವೇಶಗಳಿಗೆ ಅನುಗುಣವಾಗಿ ಪದ್ಧತಿಗಳನ್ನು ಬದಲಾಯಿಸಿಕೊಳ್ಳುವ ಸೂಚನೆಗಳನ್ನೆ ನೀಡಿದ್ದಾರೆ.ಕಾಲಬಾಹಿರವಾದ ನಡವಳಿಕೆಗಳನ್ನು, ಆಚರಣೆಗಳನ್ನು ಉಳಿಸಿಕೊಳ್ಳುವುದು ಅದನ್ನು ಸಮರ್ಥಿಸಿಕೊಳ್ಳುವುದು ನಾಗರಿಕ ಸಮಾಜದ ನಡವಳಿಕೆಯಾಗಲಾರದು. ಮನುಷ್ಯ ತನ್ನದೇ ಸಮಾಜದ ಸಹ ಮಾನವರನ್ನು ಆತ ಹುಟ್ಟಿದ ಜಾತಿ, ಚರ್ಮದ ಬಣ್ಣವನ್ನು ಮೀರಿ ಯೋಚಿಸಿ ಜತೆಗೆ ಬೆರೆಯಲಾರದೇ ಹೋದರೆ ಇದಕ್ಕಿಂತ ದುರಂತವಿದೆಯೇ? ಈ ನೋವಿಗೆ ಒಳಗಾಗಿಯೇ ಬಾಬಾಸಾಹೇಬ್ ಅಂಬೇಡ್ಕರ್ “ ನಮ್ಮೊಂದಿಗೆ ವಾಸಿಸದ, ನಮ್ಮೊಂದಿಗೆ ಊಟ ಮಾಡದ ಜನರ ಧರ್ಮ ನಮಗೇಕೆ ಬೇಕು’’ ಎಂದು ಕೇಳಿದ್ದ ಪ್ರಶ್ನೆಯನ್ನು ನಾವು ಮರೆಯುವ ಹಾಗಿಲ್ಲ. ದೇವಾಲಯಗಳಲ್ಲಿ ನೀಡುವ ಪ್ರತ್ಯೇಕ ಪಂಕ್ತಿಯ  ಊಟವನ್ನು ಯಾರಾದರೂ ಹಿಂದು ಧರ್ಮದ ತಳಹದಿ ಎಂದು ಭಾವಿಸುವುದಾದರೆ, ಈ ಕಾಲದ ನಾವು ಅಂತಹ ಅಡಿಪಾಯವನ್ನೇ ಬದಲಾಯಿಸುವ ಕರ್ತೃತ್ವಶಕ್ತಿಯನ್ನು ತೋರಬೇಕಾಗಿದೆ. ಸಹಪಂಕ್ತಿ ಕೇವಲ ಹಸಿವು ನಿವಾರಿಸುವ ಕಾರ್ಯಕ್ರಮವಲ್ಲ. ಅದು ಸಮಾನತೆ, ಬಂಧುತ್ವದ ಖಾತ್ರಿ ನೀಡುವ ನಮ್ಮ ನಡವಳಿಕೆ. ಅಂತಹ ನಡವಳಿಕೆಯನ್ನು ತೋರಲಾರದ ಜನ ಹೇಗೆ ತಾನೇ ಧರ್ಮಿಷ್ಟರಾಗಿರಲು ಸಾಧ್ಯ? 

 ದೇವಾಲಯಗಳಲ್ಲಿ ಜತೆಗೆ ಭೋಜನವನ್ನು ಮಾಡಿದ ಕೂಡಲೆ ಅದರಿಂದ ಯಾರಿಗೂ ಪುಣ್ಯ ಸಂಪಾದನೆಯಾಗುತ್ತದೆ ಎಂದು ಭಾವಿಸಬೇಕಾಗಿಲ್ಲ.ಅದು ಅದರ ಉದ್ದೇಶವೂ ಅಲ್ಲ. ಸಹಭೋಜನ ನಾಗರಿಕ ಹಕ್ಕು ಸ್ಥಾಪನೆಗಾಗಿ ನಾವು ನೀಡುವ ಸಹಭಾಗಿತ್ವ. ಅಂಬೇಡ್ಕರ್ ಬಹು ಹಿಂದೆಯೇ “ಅಂತರ್ಜಾತಿ ಭೋಜನ ಕೂಟಗಳಲ್ಲಿ ಭಾಗವಹಿಸಿದ ಮಾತ್ರಕ್ಕೆ ತಮ್ಮ ಉದ್ಧಾರವಾಯಿತೆಂದು ಅಸ್ಪøಶ್ಯರು ಭಾವಿಸುವ ಅಗತ್ಯವಿಲ್ಲ. ಹಾಗೇಯೇ, ಅಂತರ್ಜಾತಿ ಭೋಜನಕೂಟ ಏರ್ಪಡಿಸಿದ ಮಾತ್ರಕ್ಕೆ ಜಾತಿ ವ್ಯವಸ್ಥೆಯನ್ನು ತಾವು ಉಲ್ಲಂಘಿಸಿದೆ ಎಂಬ ತಿಳುವಳಿಕೆಯನ್ನು ಹಿಂದೂ ಸವರ್ಣಿಯರು ಬೆಳೆಸಿಕೊಳ್ಳುವ ಅಗತ್ಯವಿಲ್ಲ. ಸಮಾನತೆಯನ್ನು ಸಾಧಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಈ ಕ್ರಿಯೆಗಳು ನೆರವಾಗಬಹುದಷ್ಟೇ” ಎಂದಿದ್ದರು. ಸ್ವಾತಂತ್ರ್ಯವೀರ ಸಾವರ್ಕರ್ ಪತಿತ ಪಾವನ ಮಂದಿರ ಸ್ಥಾಪಿಸಿದ್ದಲ್ಲದೆ, ಸಮಾಜದೊಳಗೆ ಜಾತಿಯಾಧಾರಿತ ಬೇಧ ತೋರುವ ಎಲ್ಲಾ ನಡವಳಿಕೆಗಳನ್ನು ದಿಕ್ಕರಿಸಿದ್ದರು. ಜಾಡಮಾಲಿಯ ಕೈಯಿಂದ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ,ಅಂತರ್ಜಾತಿಯ ಸಹಬೋಜನವನ್ನು ಏರ್ಪಡಿಸುತ್ತಿದ್ದರು. ನಾವು ಈ ಮಹನೀಯರನ್ನು ಗೌರವಿಸುವ ನಿಜವಾದ ಆಶಯವುಳ್ಳವರಾದರೆ ಪಂಕ್ತಿಬೇಧವನ್ನು ನಿವಾರಿಸಲೇ ಬೇಕಾಗಿದೆ. ಎಲ್ಲಿಯವರೆಗೆ ಈ ದೇಶದಲ್ಲಿ ಸಾರ್ವಜನಿಕ ಕೆರೆ-ಬಾವಿಗಳು, ಮಠ-ಮಂದಿರಗಳು, ಶಾಲೆ – ಕಾಲೇಜುಗಳು ಮುಕ್ತವಾಗಿರುವುದಿಲ್ಲವೋ ಅಲ್ಲಿಯವರೆಗೆ ಈ ದೇಶ ವಿಶ್ವಗುರುವಾಗುವುದಾದರೂ ಹೇಗೆ? 

ದೇವಾಲಯಗಳಲ್ಲಿ ರೂಢಿಯಲ್ಲಿರುವ ಪಂಕ್ತಿ ಬೇಧ ನಮ್ಮ ಸಮಾಜದಲ್ಲಿ ಆಚರಣೆಯಲ್ಲಿರುವ ಅಸಮಾನತೆಯ ಜೀವಂತ ನಿದರ್ಶನ. ಹಿಂದೂ ಧರ್ಮದ ಅಸ್ತಿತ್ವ , ಅಸ್ಮಿತೆಗಳು ಪ್ರತ್ಯೇಕ ಪಂಕ್ತಿಯ ಭೋಜನದ ಮೇಲೆ ನಿಂತಿಲ್ಲ. ಅದು ಸಮಾಜದ ಭದ್ರ ತಳಪಾಯವಲ್ಲ. ಬದಲಾಗಿ ಅದು ಸಮಾಜವೆಂಬ ವೃಕ್ಷದ ಬೇರಿಗೆ ಹಿಡಿದ ಗೆದ್ದಲು ಹುಳು. ಇದರ ಪರಿಣಾಮವಾಗಿ ಮರ ತನ್ನಿಂದ ತಾನೇ ದುರ್ಬಲವಾಗುತ್ತದೆ ಮಾತ್ರವಲ್ಲ, ಹೊರಗಿನ ಸಣ್ಣ ಗಾಳಿಗೂ ಮರ ಉರುಳಿ ಹೋಗಬಹುದು. ಸಧ್ಯ ಮಾಡಬೆಕಾದ ಕೆಲಸವೆಂದರೆ, ಈ ಗೆದ್ದಲು ಹುಳದ ಮೇಲೆ ಸರಿಯಾದ ಔಷಧಿ ಪ್ರಯೋಗ. ಈ ಔಷಧಿ ಗೆದ್ದಲು ಹುಳವನ್ನಷ್ಟೇ ನಿರ್ಮೂಲನ ಮಾಡಿ ಮರವನ್ನು ಉಳಿಸಬೇಕು. ಅಂತಹ ಜವಾಬ್ದಾರಿಯನ್ನು ಔಷಧಿ ನೀಡುವವರು ವಹಿಸಕೊಳ್ಳಬೇಕಾಗಿದೆ. ತಜ್ಞತೆ ಇಲ್ಲವಾದರೆ , ಮರವನ್ನು ಉಳಿಸುವ ಕಾಳಜಿ ಇಲ್ಲವಾದರೆ, ಹುಳದೊಂದಿಗೆ ಮರವೂ ನಾಶವಾಗುವ ಅಪಾಯವಿದೆ. 

ಅಸಮಾನತೆಯನ್ನು ನೀವಾರಿಸಬೇಕೆನ್ನುವ ಕಾಳಜಿ ಇರುವ ಯಾರೂ ಈ ಬೇಧವೆನ್ನುವ ಅನಾಗರಿಕ ನಡವಳಿಕೆಯನ್ನು ಸಮರ್ಥಿಸಿಕೊಳ್ಳಲಾರರು. ಹೀಗಾಗಿ ಪಂಕ್ತಿಬೇಧವನ್ನು ಅಸ್ಪøಶ್ಯತೆಯ ಆಚರಣೆಗೆ ಸರಿಸಮಾನೆಂದು ಪರಿಗಣಿಸಿ,ಅದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಗೆ ಬರುವ ಎಲ್ಲಾ ದೇವಾಲಯಗಳಲ್ಲಿ ಇಂತಹ ಅಮಾನವೀಯ ಆಚರಣೆ ನಡೆಯಲು ಅವಕಾಶ ನೀಡುವುದಿಲ್ಲ ಎನ್ನುವ ಭರವಸೆಯನ್ನು ಭಕ್ತ ಜನರಿಗೆ ನೀಡಬೇಕಾಗಿದೆ. ಒಂದುವೇಳೆ ಅಂತಹ ಆಚರಣೆಯನ್ನು ನಡೆಸಿದರೆ ದೇಗುಲಗಳಿಗೆ ಸರ್ಕಾರದಿಂದಲೇ ನೇಮಕವಾಗಿರುವ ಆಡಳಿತಾಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರನ್ನು ಹೊಣೆಯಾಗಿಸುವ ನಿಯಮಗಳನ್ನು ಜಾರಿಗೊಳಿಸಬೆಕಾಗಿದೆ. ಇಲಾಖಾ ವ್ಯಾಪ್ತಿಗೆ ಒಳಪಡದ ದೇವಾಲಯ, ಮಠಗಳಲ್ಲಿಯೂ ಇಂತಹ ಆಚರಣೆಗಳನ್ನು ಪೋಷಿಸಿದರೆ ಅಂತಹ ಕೇಂದ್ರಗಳ ಮೇಲೂ ಕಾನೂನು ಕ್ರಮ ಕೈಗೊಳ್ಳುವ ಎಚ್ಚರವನ್ನು ನೀಡಬೇಕಾಗಿದೆ. ಜತೆಗೆ ಪ್ರತ್ಯೆಕ ಪಂಕ್ತಿಯು ಅಮಾನವೀಯ ಎನ್ನುವ ತಿಳುವಳಿಕೆಯನ್ನು ಸಮುದಾಯದ ಹಿರಿಯರಿಗೆ ಈ ಸಮಾಜದ ಪ್ರಾಜ್ಞರೇ ಮೂಡಿಸಲು ಮುಂದೆ ಬರಬೇಕಾಗಿದೆ. ಫೇಸ್‍ಬುಕ್‍ನಲ್ಲಿ ಪಂಕ್ತಿಬೇಧವನ್ನು ಸಮರ್ಥಿಸುವ ತಥಾಕಥಿತ ಧರ್ಮರಕ್ಷಕರು ತಮ್ಮ ಪ್ರೊಫೈಲ್‍ನಲ್ಲಿ ಹಾಕಿಕೊಂಡಿರುವ ಶ್ರೀರಾಮನ, ನರೇಂದ್ರ ಮೋದಿಯವರ, ಸಾವರ್ಕರ್ ಅವರ ಚಿತ್ರಗಳನ್ನು ಬದಲಾಯಿಸುವುದು ಒಳ್ಳೆಯದು, ಯಾಕೆಂದರೆ ಎಲ್ಲರನ್ನೂ ಒಳಗೊಳ್ಳುವ ಆಶಯದ ಈ ಮಹನೀಯರ ಹೆಸರುಗಳು ನಿಮ್ಮ ಜಾತಿ ಕರ್ಮಠತೆಗೆ ಪತಾಕೆಗಳಾಗುವುದು ಬೇಡ. ಸಮಾನತೆಯ ಆಶಯದ ಸಂವಿಧಾನದಡಿಯಲ್ಲಿ, ಎಲ್ಲರೊಳಗೂ ಬ್ರಹ್ಮನಿದ್ದಾನೆ ಎಂಬ ನಮ್ಮ ದರ್ಶನದ ಬೆಳಕಿನಡಿಯಲ್ಲಿ ಕೂಡಿ ಬಾಳೋಣ. ಕೂಡಿ ಉಣ್ಣುವ. ಇದೇ ಹಿಂದುತ್ವ. ಇದೇ ಲೋಕದರ್ಶನ. 

ಕೃಪೆ: ವಿಜಯ ಕರ್ನಾಟಕ

ಡಾ.ರೋಹಿಣಾಕ್ಷ ಶಿರ್ಲಾಲು,
The post ಹೋಟೆಲಿನಲ್ಲಿ ಊಟ ಮಾಡುವಾಗ ಇಲ್ಲದ ಮಡಿ ದೇವಸ್ಥಾನದ ಊಟದ ಪಂಕ್ತಿಯಲ್ಲಿ ಮಾತ್ರ ಏಕೆ? first appeared on Vishwa Samvada Kendra.

ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರು ಈ ಪ್ರಪಂಚವನ್ನೇ ಬದಲಿಸುತ್ತಾರೆ: ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಜೀವನ ಸಂದೇಶ

$
0
0

ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರು ಈ ಪ್ರಪಂಚವನ್ನೇ ಬದಲಿಸುತ್ತಾರೆ: ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಜೀವನ ಸಂದೇಶ

ಲೇಖಕರು: ಸಿಂಚನ.ಎಂ.ಕೆ
ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಎಬಿವಿಪಿ ಸ್ವಯಂಸೇವಕರು

‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ’ ಎಂಬ ದೈವ ಆದರ್ಶವನ್ನು ಅನುಸರಿಸುತ್ತಿದ್ದ ಪುಣ್ಯಭೂಮಿಯಲ್ಲಿ ಸ್ತ್ರೀಯರ ಶಿಕ್ಷಣಕ್ಕಾಗಿ, ಏಳಿಗೆಗಾಗಿ ಸಂಘರ್ಷ ಮಾಡುವ ದುಃಸ್ಥಿತಿ ನಿರ್ಮಾಣವಾಗಿದ್ದೇಕೆ? ದೇವಕೀನಂದನ, ಗಂಗಾಪುತ್ರ, ಅಂಜನೀಪುತ್ರ, ಕುಂತೀಪುತ್ರ ಯಾವ ಭವ್ಯಭೂಮಿಯಲ್ಲಿ ಹೀಗೆ ವೀರಯೋಧರನ್ನು ಅವರ ತಾಯಿಯ ಹೆಸರಿನಿಂದ ಸಂಭೋದಿಸಲಾಗುತ್ತಿತ್ತೊ ಅಂತಹ ನಾಡಿನಲ್ಲಿ ಸ್ತ್ರೀಯರ ಸಮಾನತೆಗಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದೇಕೆ? ವೈದಿಕಯುಗದ ಗುರುಕುಲಗಳಲ್ಲಿ ಗುರುವಿನ ಮಹೋನ್ನತ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಸ್ತ್ರೀಯರು ಆಧುನಿಕ ಯುಗದ ಆರಂಭಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಷ್ಯೆಯಾಗಿ ವಿದ್ಯೆ ಕಲಿಯುವ ಹಕ್ಕಿಗಾಗಿ ಸಾವಿತ್ರಿಬಾಯಿ ಫುಲೆಯಂತಹ ಮಹಾನ್ ಸ್ತ್ರೀಶಕ್ತಿ ಕ್ರಾಂತಿಜ್ಯೋತಿಯನ್ನೇ ಹಚ್ಚಿ ಹೋರಾಡಬೇಕಾದ ವಿವಶತೆ ನಿರ್ಮಾಣವಾಗಿದ್ದೇಕೆ?

ಯಾವ ಪವಿತ್ರಭೂಮಿಯ ಕಣ-ಕಣದಲ್ಲೂ ಧರ್ಮವೇ ಆವಿರ್ಭವಿಸಿ ಧರ್ಮದ ಆಧಾರದಿಂದಲೇ ಅಖಂಡಭಾರತ ನಿರ್ಮಾಣವಾಗಿತ್ತೊ, ಆ ನಾಡಿನ ಧರ್ಮಪ್ರಿಯ ಪ್ರಜೆಗಳಿಗೆ ಒಂದಾದ ಮೇಲೊಂದು ಮತ್ತೊಂದರಂತೆ, ಮಗದೊಂದರಂತೆ ಸತತವಾಗಿ ತಮ್ಮ ಸಮೃದ್ಧಭೂಮಿಯ ಸಾರ್ವಭೌಮತ್ವವನ್ನು ಗಿಟ್ಟಿಸಿಕೊಳ್ಳಲು ಹಾಗೆಯೇ ಅಮೋಘ ಸಂಪತ್ತನ್ನು ಕೊಳ್ಳೆ ಹೊಡೆಯಲು ಪರಕೀಯ ಆಕ್ರಮಣಗಳು ಎಷ್ಟು ನಡೆದು ಹೋದವೆಂದರೆ ಅದನ್ನು ಶಾಂತಿಪ್ರಿಯ ರಾಷ್ಟ್ರ ಎಂದೂ ಕಲ್ಪನೆ ಮಾಡಿಕೊಂಡಿರಲಿಕ್ಕಿಲ್ಲ. ಟರ್ಕರು, ಅರಬ್ಬರು, ಆಫ್ಘನ್ನರು, ಪೋರ್ಚುಗೀಸರು, ಡಚ್ಚರು, ಬ್ರಿಟಿಷರು ಹೇಗೆ ಬರ್ಬರವಾಗಿ ಆಕ್ರಮಣ ಮಾಡಿದರೆಂದರೆ ಧರ್ಮಾನುಯಾಯಿ ಪ್ರಜೆಗಳಿಗೆ ಏನಾಗುತ್ತಿದೆ ಹೀಗೆಲ್ಲಾ ಇಷ್ಟೊಂದು ಅಧರ್ಮದಿಂದ ಜನರು ವ್ಯವಹರಿಸುವರಾ! ಎಂಬ ಆಘಾತದಲ್ಲಿರುವಾಗಲೇ ತಮ್ಮ ಆತ್ಮವೇ ಆಗಿರುವ ಸನಾತನ ಸಂಸ್ಕೃತಿಯನ್ನು ಪ್ರಾಣದ ಬಲಿ ಕೊಟ್ಟಾದರೂ ರಕ್ಷಿಸಬೇಕೆಂದು ಪಣತೊಟ್ಟರು. ಪರಕೀಯರು ತಮ್ಮ ತೆಕ್ಕೆಗೆ ತೆಗೆದುಕೊಂಡ ಪ್ರದೇಶಗಳ ದೇವಸ್ಥಾನದಲ್ಲಿ ಪ್ರಾಣಪ್ರತಿಷ್ಠಾಪನೆಯಾಗಿರುವ ಮೂರ್ತಿಗಳನ್ನೇ ನಿರ್ದಯವಾಗಿ ಧ್ವಂಸ ಮಾಡುತ್ತಿರುವ, ಪವಿತ್ರತೆಯ ಪ್ರತೀಕವಾಗಿರುವ ಪೂಜನೀಯ ಮಾತಾ ಸಹೋದರಿಯರನ್ನು ಭೋಗದ ವಸ್ತುವಿನಂತೆ ನಡೆಸಿಕೊಳ್ಳಲಾಗುತ್ತಿರುವ ಭೀಕರತೆಗೆ ಇನ್ನು ಸಾಕ್ಷಿಯಾಗಬಾರದೆಂದು ಇವುಗಳನ್ನು ತಡೆಯಲು ಆರಂಭಿಸಿದ ಮಹಾಯಜ್ಞದ ಪರಿಣಾಮವನ್ನು ಇಂದಿಗೂ ದೇವಾಲಯಗಳ ರಚನೆ ವಿನ್ಯಾಸಗಳಲ್ಲಾಗಿರುವ ಬದಲಾವಣೆ ಮತ್ತು ಸ್ತ್ರೀಯರ ಸ್ವಾತಂತ್ರ್ಯದಲ್ಲಿ ಆಗಿರುವ ನಿಯಂತ್ರಣದ ಬದಲಾವಣೆಗಳಲ್ಲಿ ಕಾಣಬಹುದು. ಇನ್ನು ಅಂದಿನ ಆ ಭೀಕರತೆಯ ಕಾಲದಲ್ಲಿ ಎಷ್ಟರ ಮಟ್ಟಿಗೆ ಅದು ಸ್ತ್ರೀಯರ ಸ್ವಾತಂತ್ರ್ಯ, ಹಕ್ಕಿನ ವಿಷಯಗಳಲ್ಲಿ ಪರಿಣಾಮ ಬೀರಿರಬಹುದು ಎಂಬುದನ್ನು ನೀವೇ ಸ್ವಯಂ ಚಿಂತಿಸಿ ನೋಡಿ. ಸ್ತ್ರೀಯರ ರಕ್ಷಣೆಗಾಗಿ ಪ್ರಾರಂಭವಾದ ಸ್ವಾತಂತ್ರ್ಯ ಕಡಿವಾಣವೆಂಬ ಸಕಾರಾತ್ಮಕ ಸಾಧನವು ಹಲವು ಕಾಲದ ನಂತರದಲ್ಲಿ ನಕಾರಾತ್ಮಕ ಸಾಧನವಾಗಿ ಬದಲಾಗಿದೆ ಎಂಬುದಾಗಿ ವಿಶ್ಲೇಷಿಸಬಹುದು. ಆ ವೇಳೆಗೆ ಸರಿಯಾಗಿ ಸ್ತ್ರೀಯರ ಸಮಾನತೆ, ಸ್ವಾತಂತ್ರ್ಯ, ಶಿಕ್ಷಣ, ಹಕ್ಕುಗಳ ಪುನರ್ ಸ್ಥಾಪನೆಗೆಂದೇ ಅವತಾರವೆತ್ತಿ ಬಂದಂತೆ ಸಾವಿತ್ರಿಬಾಯಿ ಫುಲೆಯವರು ಜೀವಿಸಿದರು.

ಚಿತ್ರ ಮೂಲ: ಇಂಡಿಯನ್ ಎಕ್ಸ್ ಪ್ರೆಸ್

ಈ ಆಧುನಿಕ ಯುಗದಲ್ಲಿ ನೀವೇನಾದರೂ ಇಂದು ಒಬ್ಬ ಸ್ತ್ರೀಯಾಗಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದೀರೆಂದರೆ, ಅದಕ್ಕಾಗಿ ನೀವು ಸಾವಿತ್ರಿಬಾಯಿ ಅವರಿಗೆ ಕೃತಜ್ಞವಾಗಿರಬೇಕು. ಹಾಗೆಯೇ ನೀವೇನಾದರೂ ಇಂದು ಒಬ್ಬ ಸ್ತ್ರೀಯಾಗಿ ಸ್ವಾತಂತ್ರ್ಯದಿಂದ ಜೀವಿಸುತ್ತಾ ನಿಮ್ಮ ಇಚ್ಛೆಯ ಉದ್ಯೋಗವನ್ನು ಮಾಡುತ್ತಿದ್ದರೆ, ಅದಕ್ಕಾಗಿ ನೀವು ಸಾವಿತ್ರಿಬಾಯಿ ಅವರಿಗೆ ಕೃತಜ್ಞವಾಗಿರಬೇಕು. ಇಂದು ಪುರುಷರಿಗೆ ಸಮನಾಗಿ ಸ್ತ್ರೀಯರು ಎಲ್ಲಾ ಕ್ಷೇತ್ರಗಳಿಗೂ ದಾಪುಗಾಲಿಡುತ್ತಿದ್ದಾರೆಂದರೆ, ಅದಕ್ಕಾಗಿ ಸಮರ್ಪಕ ತಳಹದಿ ಸೃಷ್ಟಿ ಮಾಡಿದ ಸಾವಿತ್ರಿಬಾಯಿ ಅವರಿಗೆ ನಾವೆಲ್ಲಾ ಕೃತಜ್ಞವಾಗಿರಬೇಕು. ಅದೆಲ್ಲಾ ಬಿಡಿ. ಇಂದು ನಾನು ಒಬ್ಬ ಸ್ತ್ರೀಯಾಗಿ ಶಿಕ್ಷಣ ಪಡೆದು ಈ ಲೇಖನವನ್ನು ಬರೆಯುತ್ತಿದ್ದೀನೆಂದರೆ ಹಾಗೂ ನೀವು ಸ್ತ್ರೀಯಾಗಿದ್ದು ಶಿಕ್ಷಣ ಪಡೆದು ಇದನ್ನು ಓದುತ್ತಿದ್ದೀರೆಂದರೆ, ಅದಕ್ಕಾಗಿ ಸ್ತ್ರೀಶಿಕ್ಷಣ ಕ್ರಾಂತಿಯನ್ನೇ ಆರಂಭಿಸಿದ ಸಾವಿತ್ರಿಬಾಯಿ ಅವರಿಗೆ ಕೃತಜ್ಞವಾಗಿರಲೇಬೇಕು.

ಸಾವಿತ್ರಿ ಅವರ ಪೋಷಕರು ಆಕೆಗೆ 9ನೇ ವಯಸ್ಸಿನಲ್ಲೇ ವೈವಾಹಿಕ ಜೀವನದ ಮುನ್ನುಡಿ ಬರೆದರು. ಆದರೆ ಎಲ್ಲವೂ ದೈವದಾಟ ಎನ್ನುವಂತೆ ಸಾವಿತ್ರಿಯವರ ಪತಿ ಜ್ಯೋತಿ ಬಾ ಫುಲೆ ಅವರು ಸಾಮಾನ್ಯರಂತಲ್ಲದೆ ಶಿಕ್ಷಣದ ಮಹತ್ವವನ್ನು ತಿಳಿದಿರುವ ಪ್ರಜ್ಞಾವಂತ ವ್ಯಕ್ತಿಯಾಗಿದ್ದರು. ತಮ್ಮ ಪತ್ನಿಗೆ ಓದಿನ ಬಗೆಗಿರುವ ತೀವ್ರತರ ಆಸಕ್ತಿಯನ್ನು ಕಂಡು ಅವರ ಮೊದಲ ಗುರುವಾಗಿ ವಿದ್ಯೆ ಕಲಿಸಿದರು. ಮನೆಯ ಶಿಕ್ಷಣಕ್ಕೆ ಮಾತ್ರ ಮೀಸಲು ಮಾಡದೆ ತಮ್ಮ ಪತ್ನಿಯನ್ನು ಶಿಕ್ಷಕರ ವೃತ್ತಿಯ ತರಬೇತಿಗಾಗಿ ಅಹಮದಾಬಾದ್ ನ ಫರಾರ್ಸ್ ಇನ್ಸ್ಟಿಟ್ಯೂಷನ್ ಹಾಗೂ ಪುಣೆಯ ಮಿಂಚೆಲ್ಸ್ ಶಾಲೆಗೆ ಕಳುಹಿಸಿಕೊಟ್ಟರು. ಹೀಗೆ ಸಾವಿತ್ರಿ ಅವರು ತರಬೇತಿ ಪಡೆಯುತ್ತಿದ್ದಾಗ ಮುಂದೊಂದು ದಿನ ಅವರು ಹೊಸ ಇತಿಹಾಸವನ್ನೇ ಸೃಷ್ಟಿಸಲು ಹೊರಟಿದ್ದಾರೆ ಎಂದು ಯಾರಾದರೂ ಕಲ್ಪನೆ ಕೂಡ ಮಾಡಿದ್ದರೊ ಇಲ್ಲವೊ! ‘ಪ್ರಯತ್ನವೇ ಪರಮಧರ್ಮ’ ಎಂಬ ಶ್ರೇಷ್ಠಸಂದೇಶವನ್ನು ಇವರ ಜೀವನದಲ್ಲಿ ಕಾಣಬಹುದು. ಒಂದು ವೇಳೆ ಅಂದು ಕುಟುಂಬದ ಸಮಾಜದ ಕಟ್ಟುಪಾಡುಗಳಿಗೆ ಹೆದರಿ ಪ್ರಯತ್ನ ಮಾಡದೆ ಹೋಗಿದ್ದರೆ ಇಂದು ಸ್ತ್ರೀಯರ ಜೀವನದಲ್ಲಿ ಹೊಸಭಾಷ್ಯವನ್ನು ಬರೆಯಲಾಗುತ್ತಿರಲಿಲ್ಲ.

ಮೇಲ್ವರ್ಗದ ಜಾತಿಯವರಿಗೆ ಮಾತ್ರ ಮೀಸಲಾಗಿದ್ದ ಅಂದಿನ ಶಾಲೆಗಳಿಗೆ ಸೆಡ್ಡು ಹೊಡೆದು, ಕೆಳವರ್ಗದ ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ 1848ರಲ್ಲಿ ಭಿಡೇವಾಡ ಎಂಬ ಪುಣೆ ಸಮೀಪದ ಪ್ರದೇಶದಲ್ಲಿ ಶಾಲೆಯೊಂದನ್ನು ಆರಂಭಿಸಿಯೇ ಬಿಟ್ಟರು. ನಂತರ ಅವರು ಎದುರಿಸಬೇಕಾಗಿ ಬಂದ ಅಪಮಾನದ, ಒತ್ತಡದ, ಅಸ್ವೀಕಾರದ ಸನ್ನಿವೇಶಗಳೇ ಅವರ ಜೀವನದ ಬಹು ದೊಡ್ಡ ತಿರುವಾದವು. ಹೆಣ್ಣು ಮಕ್ಕಳು ಹೊರಗೆ ಬರುವುದೇ ಕಷ್ಟವಾಗಿದ್ದ ಕಾಲಕ್ಕೆ ಅವರನ್ನು ಶಾಲೆಯಲ್ಲಿ ಓದಿಸಿ ಉದ್ಧಾರ ಮಾಡುತ್ತೇನೆಂದು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದ ಸಾವಿತ್ರಿಬಾಯಿ ಅವರನ್ನು ಅಷ್ಟು ಬೇಗ ಸಮಾಜ ಒಪ್ಪಿಕೊಂಡು ಬಿಡುತ್ತದೆಯೇ? ಅವರು ಶಾಲೆಗೆ ಹೋಗುವಾಗ ಬರುವಾಗಲೆಲ್ಲ ಕೆಸರು, ಕಲ್ಲು, ಗೋವಿನ ಸಗಣಿಯನ್ನೆಲ್ಲಾ ಎರಚುತ್ತಿದ್ದರು. ಈ ಸನ್ನಿವೇಶದಲ್ಲಿ ನಮ್ಮನ್ನು ನಾವು ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ. ಆದರೆ ಈ ಗಟ್ಟಿಗಿತ್ತಿ ಅದು ಹೇಗೆ ಇದನ್ನೆಲ್ಲಾ ಸಹಿಸಿಕೊಂಡರು? ಇದು ಪ್ರತಿಯೊಬ್ಬ ಸ್ತ್ರೀಯರಿಗೂ ಪಾಠವಾಗಬೇಕು. ಲೋಕದ ನಿಂದನೆ, ಅಪಮಾನಕ್ಕೆ ಹೆದರಿ ತಮ್ಮ ಗುರಿ ಕನಸುಗಳಿಗೆ ಕೊಳ್ಳಿ ಇಡುವ ಹೆಣ್ಣು ಮಕ್ಕಳು ಸಾವಿತ್ರಿಬಾಯಿ ಅವರ ಜೀವನವನ್ನು ಓದಿ ಪ್ರೇರಣೆ ಪಡೆಯಬೇಕು. ಸಾವಿತ್ರಿಬಾಯಿ ಅವರಿಗೆ ತಾನು ಮಾಡುತ್ತಿರುವುದು ಮಹೋನ್ನತವಾದ ಕಾರ್ಯ ಎಂಬ ಅರಿವು ಇದ್ದಿದ್ದರಿಂದಲೇ ಇದನ್ನೆಲ್ಲಾ ಸಮರ್ಥವಾಗಿ ಎದುರಿಸಿದರು. ಅಷ್ಟೇ ಅಲ್ಲದೆ ಈ ಸಮಸ್ಯೆಯ ಪರಿಹಾರಕ್ಕಾಗಿ ಯಾವಾಗಲೂ ತಮ್ಮ ಬ್ಯಾಗಿನಲ್ಲಿ ಒಂದು ಸೀರೆಯನ್ನು ಇಟ್ಟಕೊಳ್ಳುತ್ತಿದ್ದರು.

ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿ ಬಾಯಿ ಫುಲೆ

ನಾವು ಮಾಡುವ ಕಾರ್ಯವು ಪವಿತ್ರ ಉದ್ದೇಶಗಳಿಂದ ಕೂಡಿದ್ದು, ಸಮಾಜದ ಕಲ್ಯಾಣಕ್ಕಾಗಿ ಆದರೆ ಆ ಧರ್ಮದ ಶಕ್ತಿಯೇ ನಮ್ಮ ಕಾರ್ಯವನ್ನು ಸಾಕಾರಗೊಳಿಸುವುದು ಎಂಬಂತೆ ಸಮಾಜದಲ್ಲಿ ಅಸ್ವೀಕಾರದ ಹೋರಾಟವಾಗಿ ಆರಂಭವಾದ 8 ವಿದ್ಯಾರ್ಥಿನಿಯರ ಒಂದು ಶಾಲೆಯು 1851ರ ವೇಳೆಗೆ 150 ವಿದ್ಯಾರ್ಥಿನಿಯರನ್ನೊಳಗೊಂಡ ಮೂರು ಶಾಲೆಗಳಾಗಿ ಬೆಳೆದು ವಿಸ್ತಾರವಾಯಿತು. ಇಂದು ನಾವೆಲ್ಲಾ ಏನು ಸರ್ವಶಿಕ್ಷಣ ಅಭಿಯಾನ, ಮಧ್ಯಾಹ್ನದ ಬಿಸಿಯೂಟ, ಪೋಷಕರ ಮೀಟಿಂಗ್ ನಂತಹ ಸರ್ಕಾರದ ಕಾರ್ಯಕ್ರಮಗಳನ್ನು ಶ್ಲಾಘಿಸುತ್ತಿದ್ದೇವೆಯೊ ಅದನ್ನು 150 ವರ್ಷಗಳ ಹಿಂದೆಯೇ ಸಾವಿತ್ರಿಬಾಯಿ ಫುಲೆ ಅವರು ಆರಂಭಿಸಿ ಆಗಿತ್ತು. ಹಾಗೆಯೇ ಇಂದಿನ ಸರ್ಕಾರಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸುವಂತೆ, ಸಾವಿತ್ರಿಬಾಯಿ ಅವರು ಅಂದಿನ ಕಾಲದಲ್ಲೇ ಹೀಗೆ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಧನವನ್ನು ನೀಡುತ್ತಿದ್ದರು.

ಸ್ತ್ರೀಯರ ಶಿಕ್ಷಣದ ಬಗ್ಗೆ ಮಾತ್ರ ಗಮನಹರಿಸದೆ ಸಮಾಜವು ಗಮನವೇ ಕೊಡದೆ ತಿರಸ್ಕೃತವಾಗಿ ನೋಡಲ್ಪಟ್ಟವರ ಅಸಹಾಯಕ, ಶೋಚನೀಯ ಸ್ತ್ರೀಯರ ದುಃಖಕ್ಕೆ ಸ್ಪಂದಿಸಿದ ವಿರಳಾತಿ ವಿರಳ ವ್ಯಕ್ತಿ ಸಾವಿತ್ರಿಬಾಯಿ ಅವರು. ಗರ್ಭಾವತಿ ವಿಧವೆಯರು, ಅತ್ಯಾಚಾರಕ್ಕೊಳಗಾದ ವಿವಾಹಪೂರ್ವ ಗರ್ಭಾವತಿಯರು ಹಾಗೂ ಅವರ ಮಕ್ಕಳ ರಕ್ಷಣೆಗಾಗಿ ‘ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಸ್ಥಾಪಿಸಿ ನಿರಾಶ್ರಿತರಿಗೆ ಆಶ್ರಯದಾತರಾದರು. ಇಂತಹದ್ದೇ ಒಂದು ನಿರಾಶ್ರಿತ ಮಗುವಾಗಿದ್ದ ಯಶ್ವಂತ್ ನನ್ನು ತಮ್ಮ ಪುತ್ರನಾಗಿ ಸ್ವೀಕರಿಸುವುದರ ಮೂಲಕ ಸಂತಾನರಹಿತವಾಗಿದ್ದ ದಂಪತಿಗಳು ಬದುಕಿನಲ್ಲಿ ಹೊಸ ಆಶಾಕಿರಣವನ್ನು ಕಂಡು ಕೊಂಡರು.

ಸಮಾಜಸೇವೆಯನ್ನೇ ತಮ್ಮ ಧ್ಯೇಯವಾಗಿಸಿಕೊಂಡು ಬದುಕುತ್ತಿದ್ದ ಈ ಆದರ್ಶ ದಂಪತಿಗಳು ಮಹಿಳಾ ಸೇವಾಮಂಡಲವನ್ನು ಸ್ಥಾಪಿಸಿ ಮಹಿಳೆಯರು ಅವರ ಹಕ್ಕು, ಸಮ್ಮಾನ, ಸಾಮಾಜಿಕ ರೀತಿ-ನೀತಿಗಳ ಬಗೆಗೆ ಜಾಗೃತವಾಗಿರುವಂತೆ ಅರಿವು ಮೂಡಿಸುತ್ತಿದ್ದರು. ಹಾಗೆಯೇ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿ ಸರಳವಾದ, ವರದಕ್ಷಿಣೆರಹಿತವಾದ ವಿವಾಹಗಳಿಗೆ ಪ್ರೋತ್ಸಾಹ ಕೊಡುತ್ತಾಬಂದರು. ಇದೇ ರೀತಿಯಲ್ಲಿ ತಮ್ಮ ದತ್ತು ಪುತ್ರನ ವಿವಾಹವನ್ನೂ ಮಾಡಿ ಮಾದರಿಯಾದರು. ಬರಗಾಲದಿಂದ ಜನ ಜೀವನ ತತ್ತರಿಸಿ ಹೋಗಿದ್ದ ಕಾಲದಲ್ಲಿ ವಿಕ್ಟೋರಿಯಾ ಬಾಲಾಶ್ರಮವನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಅನ್ನದಾತರಾದರು. ತಮಗಾಗಿ ನಿರ್ಮಿಸಿಕೊಂಡಿದ್ದ ಬಾವಿಯಲ್ಲಿ ದಲಿತರಿಗೆ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡಿ ಸಮಾನತೆಯ ಸಾರವನ್ನು ಅಂದೇ ಎತ್ತಿ ಹಿಡಿದಿದ್ದರು.

ಇಂದು ನಾವು ಕೊರೊನಾ ಮಹಾಮಾರಿಯನ್ನು ಎದುರಿಸುತ್ತಿರುವಂತೆ ಸಾವಿತ್ರಿಬಾಯಿ ಅವರ ಕಾಲಘಟ್ಟದಲ್ಲಿ ಪ್ಲೇಗ್ ಮಹಾಮರಿಯು ಅವರನ್ನೆಲ್ಲಾ ಕಾಡಿತ್ತು. ಅತ್ಯುನ್ನತ ಆರೋಗ್ಯ ವ್ಯವಸ್ಥೆ, ತಂತ್ರಜ್ಞಾನದ ವ್ಯವಸ್ಥೆಯನ್ನು ಹೊಂದಿರುವ ನಮ್ಮ ಕಾಲದಲ್ಲಿಯೂ ಎಷ್ಟೊಂದು ಸಾವು-ನೋವುಗಳನ್ನು ಇಂದು ಕಾಣುತ್ತಿದ್ದೇವೆ? ಇನ್ನು ಅಧಿಕ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರದ ಆ ಕಾಲದಲ್ಲಿನ ಸಾವುಗಳ ವಿಷಮಯ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಿ. ತಮ್ಮ ಪುತ್ರ ಯಶ್ವಂತ್ ವೈದ್ಯನಾದ್ದರಿಂದ ಆತನಿಗೆ ಅಂದಿನ ಕಠಿಣ ಪರಿಸ್ಥಿತಿಯಲ್ಲಿ ಜೊತೆಯಾಗಿ ನಿಂತು, ಜಾತಿಭೇದಗಳಿಲ್ಲದೆ ಸರ್ವರಿಗೂ ಚಿಕಿತ್ಸೆ ನೀಡುವಂತೆ ತಿಳಿಸಿದರು. ಸಾವಿತ್ರಿಬಾಯಿ
ಅವರು ತಮ್ಮ ಪುತ್ರನ ಕ್ಲಿನಿಕ್ ಗೆ ಕರೆತರುವ ಪ್ಲೇಗ್ ರೋಗಸ್ಥ ಮಗುವಿನಿಂದ ಅವರಿಗೂ ಕೂಡ ಪ್ಲೇಗ್ ಹರಡಿಬಿಡುತ್ತದೆ. ಅವರು ಕರೆತಂದ ಆ ಪುಟ್ಟ ಕಂದನ ಪ್ರಾಣವೇನೊ ಉಳಿಯುತ್ತದೆ. ಆದರೆ ಅವರ ಪ್ರಾಣಪಕ್ಷಿಯೇ ಹಾರಿಹೋಗಿ ಬಿಡುತ್ತದೆ.

ಸಾವಿತ್ರಿಬಾಯಿ ಅವರ ದಿಟ್ಟ ಹೋರಾಟದ ಹಾದಿಯನ್ನು ಯಾವ ಸಾಂಸಾರಿಕ ಸಮಸ್ಯೆಯೂ ತಡೆಯಲಾಗಲಿಲ್ಲ. ತಮ್ಮ ಕುಟುಂಬದವರ ತಿರಸ್ಕಾರ, ತಮ್ಮ ಪತಿಯ ಶೀಘ್ರ ಮೃತ್ಯುವಿನ ಆಘಾತ, ತಮ್ಮದ್ದೇ ಸಮಾಜದವರಿಂದಾಗುತ್ತಿದ್ದ ಅಪಮಾನ ಯಾವುದೂ ಕೂಡ ಅವರ ಮನೋಸ್ಥೈರ್ಯವನ್ನು ಕುಂದಿಸಲಾಗಲಿಲ್ಲ. ಸ್ತ್ರೀಯರ ಮೇಲಾಗುತ್ತಿರುವ ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಹೋರಾಡಲು ಅವರು ಬೆಳಗಿಸಿದ ಕ್ರಾಂತಿಜ್ಯೋತಿಯನ್ನು ಮತ್ತಷ್ಟು ಪ್ರಕಾಶಮಾನಗೊಳಿಸುವ ಧೃಡಸಂಕಲ್ಪ ಮಾಡಬೇಕಿದೆ. ಪ್ರತಿಯೊಂದು ಹೆಣ್ಣುಮಗುವನ್ನು ಬಲಶಾಲಿ, ಬುದ್ಧಿಶಾಲಿ, ಧೈರ್ಯಶಾಲಿ ಹಾಗೂ ಮುಖ್ಯವಾಗಿ ಶೀಲವಂತೆ ಸಂಸ್ಕಾರವಂತೆಯಾಗಿ ಬೆಳೆಸಿ ಅವರ ಬದುಕನ್ನು ಕಟ್ಟಿಕೊಳ್ಳುವ ಸಾಮರ್ಥ್ಯವನ್ನು ಅವರಲ್ಲಿ ತುಂಬಬೇಕಿದೆ. ಇಂದಿಗೂ ಕೂಡ ಸ್ತ್ರೀಯರ ಅಗ್ನಿಪಥದ ಬಾಳಿನಲ್ಲಿ ಭ್ರೂಣಹತ್ಯೆ, ಬಾಲ್ಯವಿವಾಹ, ಅತ್ಯಾಚಾರ, ವರದಕ್ಷಿಣೆ ಕಿರುಕುಳದಂತಹ ಪಿಡುಗುಗಳು ಜೀವಂತವಾಗಿವೆ. ಎಷ್ಟೇ ಕಾನೂನುಗಳು, ಶಿಕ್ಷೆಗಳು ಅಸ್ತಿತ್ವದಲ್ಲಿದ್ದರೂ ಈ ಸಮಸ್ಯೆಗಳನ್ನು ಪೂರ್ಣವಾಗಿ ಬಗೆಹರಿಸಲಾಗುತ್ತಿಲ್ಲ. ಎಲ್ಲಿಯವರೆಗೆ ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲಿ ಸ್ತ್ರೀಯರ ಬಗೆಗೆ ತನ್ನನ್ನು ಹೆಡೆದ ತಾಯಿಯಂತೆ ದೇವಿಯಂತೆ ಗೌರವ ನೀಡುವ ಸದ್ಭಾವನೆ ಬೆಳೆಯುವುದಿಲ್ಲವೊ, ಅಲ್ಲಿಯವರೆಗೆ ಸ್ತ್ರೀಯರ ದುಃಖಕ್ಕೆ ತಿಲಾಂಜಲಿ ಇಡಲು ಸಾಧ್ಯವೇ ಇಲ್ಲ.

ಸಿಂಚನ.ಎಂ.ಕೆ

ಮಾಜಿ ಮುಖ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವಿಟ್ ಬಾಲಿಶ ಹಾಗೂ ಬೇಜವಾಬ್ದಾರಿಯಿಂದ ಕೂಡಿದ್ದಾಗಿದೆ : ವಿಹಿಂಪ

$
0
0

ಮಾಜಿ ಮುಖ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪ್ರಸ್ತುತ ನಡೆಯುತ್ತಿರುವ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕುರಿತಾಗಿ, ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಜಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.

ವಿಶ್ವ ಹಿಂದೂ ಪರಿಷತ್ತು ಶ್ರೀ ರಾಮ್ ಮಂದಿರ ನಿಧಿ ಸಮರ್ಪಣಾ ಅಭಿಯಾನದ ನೇತೃತ್ವ ವಹಿಸುತ್ತಿದ್ದು ಮಾಜಿ ಮುಖ್ಯ ಮಂತ್ರಿಗಳ ಟ್ವಿಟ್ ಬಾಲಿಶ ಹಾಗೂ ಬೇಜವಾಬ್ದಾರಿಯಿಂದ ಕೂಡಿದ್ದಾಗಿದೆ ಎಂದು ತೀಕ್ಷವಾಗಿ ಖಂಡಿಸಿದೆ. ವಿಹಿಂಪ ನ ಕರ್ನಾಟಕ ರಾಜ್ಯದ ಸಂಘಟನಾ ಕಾರ್ಯದರ್ಶಿ ಶ್ರೀ ಬಸವರಾಜು ತಮ್ಮ ಪತ್ರಿಕಾ ಹೇಳಿಕೆಯಲ್ಲಿ, ಇಡಿಯ ಸಮಾಜವು ಧನಾತ್ಮಕವಾಗಿ ನಿಧಿ ಸಮರ್ಪಣೆಯಲ್ಲಿ ತೊಡಗಿದೆ. ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಿಸಲು ಸಹಾಯವಾಗುವಂತೆ ಜನಸಾಮಾನ್ಯರೆಲ್ಲರೂ ನಿಧಿ ಸಮರ್ಪಿಸುತ್ತಿರುವಾಗ, ಮಾಜಿ ಮುಖ್ಯಮಂತ್ರಿಯೊಬ್ಬರಿಂದ ಇಂತಹ ಬೇಜವಾಬ್ದಾರಿ ಹೇಳಿಕೆ ಸಲ್ಲದು. ವಿಹಿಂಪ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಮನೆ ಮನೆಗೆ ತೆರಳಿ ನಿಧಿಯನ್ನು ಸಂಗ್ರಹಿಸುವಾಗ ಇಂತಿಷ್ಟೇ ಹಣವನ್ನು ದಾನ ಮಾಡಬೇಕೆಂದು ಕೇಳುವುದಿಲ್ಲ. ಪ್ರಭು ಶ್ರೀ ರಾಮನ ಆದರ್ಶವನ್ನು ಜೀವನದಲ್ಲಿ ಪಾಲಿಸಬೇಕು, ಹಾಗೂ ಈ ದೇಶದ ಅಸ್ಮಿತೆಯಾದ ಶ್ರೀ ರಾಮನ ಮಂದಿರಕ್ಕೆ ವಿವಿಧ ಸ್ಥರದ ಹಲವಾರು ಜನಸಾಮಾನ್ಯರು ತಮ್ಮ ಕೊಡುಗೆ ಸಮರ್ಪಣೆ ಮಾಡುತ್ತಿರುವುದನ್ನು ಗಮನಿಸಬೇಕು.

ಶ್ರೀ ಬಸವರಾಜು

ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ವಿಹಿಂಪ ಖಂಡಿಸುತ್ತದೆ, ಹಾಗೂ ಆರೆಸ್ಸೆಸ್ ಅಂತಹ ಸಂಘಟನೆಯ ಬಗ್ಗೆ, ವೃಥಾ ಆರೋಪ ಮಾಡುವುದು ಯಾವುದೇ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ. ಸಾರ್ವಜನಿಕ ವಲಯದಲ್ಲಿ ಸೊರಗುತ್ತಿರುವ ಸಂವಾದ ಹಾಗೂ ಅದರಲ್ಲಿ ನೇರವಾಗಿ ಭಾಗಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ನಡೆಗೆ ವಿಹಿಂಪ ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದಿದ್ದಾರೆ.

ಇನ್ನು ಬಜರಂಗ ದಳದ ಸೂರ್ಯನಾರಾಯಣ ಅವರು ಮಾತನಾಡಿ ಸ್ವ ಇಚ್ಛೆಯಿಂದ ಜನರು ನೀಡುವ ದೇಣಿಗೆಗೆ ಕುಮಾರಸ್ವಾಮಿಯವರು ಅವಮಾನಿಸಿದ್ದಾರೆ ಹಾಗೂ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ,


Viewing all 1085 articles
Browse latest View live


<script src="https://jsc.adskeeper.com/r/s/rssing.com.1596347.js" async> </script>